ಈಗ ಯಾಕೆ ವೈರಲ್ ಆಗುತ್ತಿದೆ ಆರ್ಯನ್ ಖಾನ್ ನ ಎರಡು ವರ್ಷಗಳ ಹಿಂದಿನ ಫೋಟೋ ? ಅಂಥದ್ದೇನಿದೆ ಅದರಲ್ಲಿ ?

ಆರ್ಯನ್ ಖಾನ್ ಈ ದಿನಗಳಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂಬೈ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ, ಆರ್ಯನ್ ಸೇರಿದಂತೆ ಎಂಟು ಜನರನ್ನು ಬಂಧಿಸಿತ್ತು. 

Written by - Ranjitha R K | Last Updated : Oct 12, 2021, 07:55 PM IST
  • ಆರ್ಯನ್ ಖಾನ್ ಅವರ ಎರಡು ವರ್ಷದ ಹಿಂದಿನ ಪೋಸ್ಟ್ ವೈರಲ್
  • ಪೋಸ್ಟ್‌ನಲ್ಲಿ ವಿಚಿತ್ರವಾದ ಶೀರ್ಷಿಕೆಯನ್ನು ಬರೆಯಲಾಗಿದೆ
  • ಟ್ರೋಲ್ ಆಗುತ್ತಿದೆ ಈ ಹಳೆಯ ಫೋಟೋ
ಈಗ ಯಾಕೆ ವೈರಲ್ ಆಗುತ್ತಿದೆ ಆರ್ಯನ್ ಖಾನ್ ನ ಎರಡು ವರ್ಷಗಳ ಹಿಂದಿನ ಫೋಟೋ ? ಅಂಥದ್ದೇನಿದೆ ಅದರಲ್ಲಿ ?   title=
ಆರ್ಯನ್ ಖಾನ್ ಅವರ ಎರಡು ವರ್ಷದ ಹಿಂದಿನ ಪೋಸ್ಟ್ ವೈರಲ್ (photo instagram)

ನವದೆಹಲಿ : ಶಾರುಖ್ ಖಾನ್‌ನ ಸಂಕಷ್ಟ ಕಡಿಮೆಯಾಗುವ ಲಕ್ಷಣಗಳೇ ಕಂಡು ಬರುತ್ತಿಲ್ಲ. ಡ್ರಗ್ಸ್ ಪ್ರಕರಣದಲ್ಲಿ (Mumbai drugs case) ಅವರ ಪುತ್ರ ಆರ್ಯನ್ ಖಾನ್ ಜಾಮೀನು ಸಿಗುತ್ತಿಲ್ಲ. ಇದರಿಂದ ಶಾರುಖ್ ಖಾನ್ ಬಹಳವಾಗಿಯೇ ನೊಂದಿದ್ದಾರೆ.  ಈ ಮಧ್ಯೆ, ಆರ್ಯನ್ ಖಾನ್ (Aryan khan) ಅವರ ಎರಡು ವರ್ಷದ ಹಿಂದಿನ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಅದರಲ್ಲಿ ಆರ್ಯನ ಬರೆದಿರುವ ಈ ಪದಗಳೇ ಈಗ ಟ್ರೊಲ್ ಆಗಲು ಕಾರಣ. 

ಎರಡು ವರ್ಷದ ಫೋಟೋ ಈಗ ವೈರಲ್ :
ಆರ್ಯನ್ ಖಾನ್ (Aryan khan) ಈ ದಿನಗಳಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂಬೈ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ, ಆರ್ಯನ್ ಸೇರಿದಂತೆ ಎಂಟು ಜನರನ್ನು ಬಂಧಿಸಿತ್ತು. ಇದಾದ ಬಳಿಕ ಅನೇಕ ಸೆಲೆಬ್ರಿಟಿಗಳು ಆರ್ಯನ್ ಬೆಂಬಲಕ್ಕೆ ಬಂದಿದ್ದಾರೆ. ಆದರೆ, ಈ ಮಧ್ಯೆ ಆರ್ಯನ್ ಖಾನ್ ಅವರ ಎರಡು ವರ್ಷದ ಹಿಂದಿನ ಫೋಟೋ (Old photo Viral) ಮತ್ತು ಅದರ ಮೇಲೆ ಬರೆದಿರುವ ಶೀರ್ಷಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. 

ಇದನ್ನೂ ಓದಿ : ನಿಮ್ಮ ಡೈವೋರ್ಸ್ ಯಾವಾಗ ಆಗುತ್ತೆ ಎಂದು ನಮಗೆ ಹೇಳಿ' ಎಂದ ವ್ಯಕ್ತಿಗೆ ನಟಿ ರಿಚಾ ಚಡ್ಡಾ ಹೇಳಿದ್ದೇನು ಗೊತ್ತೇ?

ಹಿಮದ ನಡುವೆ ಕುಳಿತಿರುವ ಆರ್ಯನ್ : 
ಆರ್ಯನ್ ಖಾನ್ ತನ್ನ ಸಹೋದರಿ ಸುಹಾನಾಳಂತೆ ಸಾಮಾಜಿಕ ಮಾಧ್ಯಮದಲ್ಲಿ (Social media) ಹೆಚ್ಚು ಸಕ್ರಿಯವಾಗಿಲ್ಲ. ಅವರು ಕೆಲವು ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡಿದ್ದಾರೆ. 18 ಮಾರ್ಚ್ 2019 ರಂದು, ಆರ್ಯನ್ ಚಿತ್ರವನ್ನು ಪೋಸ್ಟ್ ಮಾಡಿದ್ದರು.  ಅದರಲ್ಲಿ ಅವರು ಕೈಯಲ್ಲಿ ಹಿಮವನ್ನು ಹಿಡಿದು ಕುಳಿತಿದ್ದಾರೆ. ಈ ಫೋಟೋ ಫ್ರಾನ್ಸ್ ನ ಹಿಮಭರಿತ ಬೆಟ್ಟಗಳದ್ದು. ಈ ಫೋಟೋದಲ್ಲಿ ಅಸಾಮಾನ್ಯವಾದುದೇನೂ ಇಲ್ಲ. ಆದರೆ  ಅದರ ಶೀರ್ಷಿಕೆ ಈಗ ಚರ್ಚೆಗೆ ಕಾರಣವಾಗಿದೆ.

 
 
 
 

 
 
 
 
 
 
 
 
 
 
 

A post shared by Aryan Khan (@___aryan___)

 

ಶೀರ್ಷಿಕೆಯಲ್ಲಿ ಏನಿದೆ?  
ಆರ್ಯನ್ ಖಾನ್ ಈ ಚಿತ್ರದಲ್ಲಿ ನಾರ್ಕೋಸ್ ಎಂದು ಬರೆದಿದ್ದಾರೆ. ನಾರ್ಕೋಟಿಕ್ಸ್  ಅನ್ನು ಸಂಕ್ಷಿಪ್ತವಾಗಿ  ನಾರ್ಕೋಸ್  ಎಂದೂ ಕರೆಯುತ್ತಾರೆ. ಈಗ ಜನರು ಈ ಫೋಟೋ ನೋಡಿ, ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.  ಈ ಮಧ್ಯೆ, ಶಾರುಖ್ ಖಾನ್ (Shahrukh Khan) ಆರ್ಯನ್ ಪ್ರಕರಣಕ್ಕಾಗಿ ಹೊಸ ವಕೀಲರನ್ನು ನೇಮಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅಮಿತ್ ದೇಸಾಯಿ ಅವರನ್ನು ನೇಮಿಸಿಕೊಂಡಿದ್ದಾರೆ. 2002 ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಮಿತ್ ದೇಸಾಯಿ ಸಲ್ಮಾನ್ ಖಾನ್ (Salman Khan) ಪರ ವಕಾಲತ್ತು ಮಾಡಿದ್ದರು.  ಅರ್ಯನ್ ಖಾನ್ ಅವರನ್ನು ಜೈಲಿನಿಂದ ಹೊರಗೆ ತರುವ ಜವಾಬ್ದಾರಿ ಈಗ ಅಮಿತ್ ದೇಸಾಯಿ ಮೇಲಿದೆ. 

ಇದನ್ನೂ ಓದಿ : Kangana Ranaut: ಪಾಕ್ ನಲ್ಲಿ ಥಲೈವಿ ಟ್ರೆಂಡ್ ಆಗಿದ್ದಕ್ಕೆ ಕಂಗನಾ ಹೇಳಿದ್ದೇನು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News