Morning Astro Tips: ಬ್ರಹ್ಮ ಮುಹೂರ್ತದಲ್ಲಿ ಮಾಡೋ ಈ ತಪ್ಪುಗಳು ನಿಮ್ಮ ದಿನವನ್ನು ಹಾಳುಮಾಡಬಹುದು!

ಬೆಳಗ್ಗೆ ಎದ್ದ ನಂತರ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಸ್ಪಷ್ಟವಾಗಿ ಇಲ್ಲಿ ತಿಳಿಸಲಾಗಿದೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಅಥವಾ ನಿರ್ಲಕ್ಷಿಸಿದರೆ, ಅವು ನಿಮ್ಮ ಇಡೀ ದಿನವನ್ನು ಹಾಳುಮಾಡಬಹುದು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. 

Written by - Bhavishya Shetty | Last Updated : Jun 14, 2022, 11:35 AM IST
  • ಬೆಳಗ್ಗೆ ಕಣ್ಣು ತೆರೆದ ತಕ್ಷಣ ಕನ್ನಡಿ ನೋಡಬಾರದು
  • ಮುಂಜಾನೆ ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ
  • ನೀವು ಮಲಗುವ ಸ್ಥಳದಲ್ಲಿ ಕಾಡು ಪ್ರಾಣಿಗಳ ಚಿತ್ರಗಳು ಇರಬಾರದು.
Morning Astro Tips: ಬ್ರಹ್ಮ ಮುಹೂರ್ತದಲ್ಲಿ ಮಾಡೋ ಈ ತಪ್ಪುಗಳು ನಿಮ್ಮ ದಿನವನ್ನು ಹಾಳುಮಾಡಬಹುದು!  title=
Morning Astro Tips

Astro Tips For Early Morning: ಕಣ್ಣು ತೆರೆದ ತಕ್ಷಣ ದೇವರ ದರ್ಶನ, ನಮಸ್ಕರಿಸುವಿಕೆ, ಅಂಗೈಯನ್ನು ನೋಡುವುದು ಇತ್ಯಾದಿ ಶುಭ ಕಾರ್ಯಗಳಿಂದ ಮುಂಜಾನೆಯನ್ನು ಪ್ರಾರಂಭಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮುಂಜಾನೆ ಮಾಡುವ ಕೆಲಸ ವ್ಯಕ್ತಿಗೆ ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ದಿನವಿಡೀ ಮನಸ್ಸನ್ನು ತಾಜಾವಾಗಿರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. 

ಬೆಳಗ್ಗೆ ಎದ್ದ ನಂತರ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಸ್ಪಷ್ಟವಾಗಿ ಇಲ್ಲಿ ತಿಳಿಸಲಾಗಿದೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಅಥವಾ ನಿರ್ಲಕ್ಷಿಸಿದರೆ, ಅವು ನಿಮ್ಮ ಇಡೀ ದಿನವನ್ನು ಹಾಳುಮಾಡಬಹುದು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಯಾವ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. 

ಇದನ್ನು ಓದಿ: ಆಯುರ್ವೇದದಲ್ಲಿ ಬಳಸುವ ಈ ಎಲೆ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ

ಬೆಳಗ್ಗೆ ಕಣ್ಣು ತೆರೆದ ತಕ್ಷಣ ಕನ್ನಡಿ ನೋಡಬಾರದು ಎಂಬ ಧಾರ್ಮಿಕ ನಂಬಿಕೆ ಇದೆ. ನಿಮ್ಮ ಮುಖವನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ನೀವು ಮಲಗುವ ಸ್ಥಳದಲ್ಲಿ ಕಾಡು ಪ್ರಾಣಿಗಳ ಚಿತ್ರಗಳು ಇರಬಾರದು. ಅವರು ಕಣ್ಣು ತೆರೆದ ತಕ್ಷಣ ಅವುಗಳನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ವ್ಯಕ್ತಿಯಲ್ಲಿ ನಕಾರಾತ್ಮಕತೆಯನ್ನು ತರಬಹುದು. 

ಬೆಳಿಗ್ಗೆ ಎದ್ದು ತನ್ನ ನೆರಳನ್ನು ಸಹ ನೋಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ನೆರಳನ್ನು ಕಂಡು ಭಯಪಟ್ಟರೆ ಅದು ಸಾವಿಗೂ ಕಾರಣವಾಗಬಹುದಂತೆ. ಬೆಳಿಗ್ಗೆ ಕಣ್ಣು ತೆರೆದಾಗ ಮೊದಲು ದೇವರನ್ನು ಸ್ಮರಿಸಿ. ಕೈಮುಗಿದು ಅವರಿಗೆ ನಮಸ್ಕರಿಸಿ. ಇದರ ನಂತರ, ನಿಮ್ಮ ಎರಡೂ ಅಂಗೈಗಳನ್ನು ನೋಡಿ. ಮಂತ್ರವನ್ನು ಪಠಿಸಿ. 

ಮಂತ್ರ: "ಕರಾಗ್ರೇ ವಸತೇ ಲಕ್ಷ್ಮೀ, ಕರ್ ಮಧ್ಯಮ ಸರಸ್ವತೀ. ಕರ ಮೂಲೇ ತು ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಮ್." 

ಮುಂಜಾನೆ ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ. ಹಸ್ತದ ತುದಿಯಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ ಮತ್ತು ಮೂಲದಲ್ಲಿ ಗೌರಿ ನೆಲೆಸಿದ್ದಾಳೆ ಎಂದು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ, ಅಂಗೈಯ ದೃಷ್ಟಿ ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನು ಓದಿ: Rahu Nakshatra Parivartan: ಕಷ್ಟಗಳನ್ನು ಮಾತ್ರವಲ್ಲ ಬೊಗಸೆ ತುಂಬಾ ಸಂತಸವನ್ನೂ ನೀಡ್ತಾನೆ ರಾಹು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳಿಗ್ಗೆ ಎದ್ದ ನಂತರ, ಕೆಲವು ದೋಷಗಳು ಪಾಪ ಗ್ರಹ ರಾಹುಗೆ ಬಲವನ್ನು ನೀಡುತ್ತದೆ ಮತ್ತು ಅವು ವ್ಯಕ್ತಿಯನ್ನು ತೊಂದರೆಗೊಳಿಸುತ್ತವೆ. ಹೀಗಾಗಿ ದೇವರ ಮಂತ್ರ ಪಠಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. 

(ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News