ಬಿಜೆಪಿ ಶಾಸಕಿಯ ಮಗನಿಂದ ಜ್ಯೋತಿರಾದಿತ್ಯ ಸಿಂಧ್ಯಾಗೆ ಕೊಲೆ ಬೆದರಿಕೆ

ಬಿಜೆಪಿ ಶಾಸಕಿ ಉಮಾದೇವಿ ಖಾತಿಕ್ ಮಗ ಪ್ರಿನ್ಸ್ ದೀಪ್ ಲಾಲ್ ಚಂದ್ ಖಾತಿಕ್ ಕಾಂಗ್ರೆಸ್ ನಾಯಕ ಜೋತಿರಾದಿತ್ಯ ಸಿಂದ್ಯರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ.

Last Updated : Sep 3, 2018, 08:25 PM IST
ಬಿಜೆಪಿ ಶಾಸಕಿಯ ಮಗನಿಂದ ಜ್ಯೋತಿರಾದಿತ್ಯ ಸಿಂಧ್ಯಾಗೆ ಕೊಲೆ ಬೆದರಿಕೆ  title=

ನವದೆಹಲಿ: ಬಿಜೆಪಿ ಶಾಸಕಿ ಉಮಾದೇವಿ ಖಾತಿಕ್ ಮಗ ಪ್ರಿನ್ಸ್ ದೀಪ್ ಲಾಲ್ ಚಂದ್ ಖಾತಿಕ್ ಕಾಂಗ್ರೆಸ್ ನಾಯಕ ಜೋತಿರಾದಿತ್ಯ ಸಿಂದ್ಯರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ.

ಫೆಸ್ ಬುಕ್ ನಲ್ಲಿ ಬರೆದುಕೊಂಡಿರುವಂತೆ " ಜ್ಯೋತಿರಾದಿತ್ಯ ಸಿಂಧ್ಯ ಜಾನ್ಸಿ ರಾಣಿಯನ್ನು ಕೊಂದ ಜಿವಾಜಿರಾವ್ ರಕ್ತ  ನಿನ್ನ ನಾಳದಲ್ಲಿ ಹರಿದಾಡುತ್ತಿದೆ, ಒಂದು ವೇಳೆ ನೀನು ಹಟ್ಟದಲ್ಲಿ  ಕಾಲಿಟ್ಟಿದ್ದೆ ಆದಲ್ಲಿ ನಾನು ನಿನ್ನನ್ನು ಶೂಟ್ ಮಾಡುತ್ತೇನೆ.ನೀನು ಸಾಯಬೇಕು ಇಲ್ಲಾ ನಾನು ಸಾಯಬೇಕು "ಎಂದು ಫೆಸ್ ಬುಕ್ ಪೋಸ್ಟ್ ಮಾಡಿರುವುದನ್ನು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ಪ್ರಿನ್ಸ್ ದೀಪ್ ಹೇಳಿಕೆ ಪ್ರಮುಖವಾಗಿ ಜೋತಿರಾದಿತ್ಯ ಸಿಂಧ್ಯಾ ಇದೆ ಸೆಪ್ಟಂಬರ್ 5 ರಂದು ಹಟ್ಟ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಬಂದಿದೆ.ಈ ಪೋಸ್ಟ್ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕಿ ಉಮಾದೇವಿ "ಇದು ನಿಜಕ್ಕೂ ದುರಾದ್ರಷ್ಟಕರ,ಸಿಂಧ್ಯಾ ಗೌರವಾನ್ವಿತ ಸಂಸದ ನಾನು ನನ್ನ ಮಗನಿಗೆ ಈ ಪೋಸ್ಟ್ ತೆಗೆದುಹಾಕಲು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

Trending News