ಎರಡು ದಿನ ಕಾದು ನೋಡಿ, ಡಿಕೆಸಿ ಆರೆಸ್ಟ್ ಆಗಬಹುದು ಸರ್ಕಾರವು ಬಿದ್ದು ಹೋಗಬಹುದು- ಈಶ್ವರಪ್ಪ ಬಾಂಬ್

ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಪತ್ರಕರ್ತರೊಂದಿಗೆ ಮಾತನಾಡುತ್ತಾ ಎರಡು ದಿನ ಕಾದು ನೋಡಿ,ಡಿಕೆ ಶಿವಕುಮಾರ್ ಅರೆಸ್ಟ್ ಆಗಬಹುದು ಸರ್ಕಾರವೇ ಬಿದ್ದು ಹೋಗಬಹುದು ಎಂದು ಹೇಳುವ ಮೂಲಕ  ಹೊಸ ಬಾಂಬ್ ಸಿಡಿಸಿದ್ದಾರೆ.

Last Updated : Sep 8, 2018, 06:13 PM IST
ಎರಡು ದಿನ ಕಾದು ನೋಡಿ, ಡಿಕೆಸಿ ಆರೆಸ್ಟ್ ಆಗಬಹುದು ಸರ್ಕಾರವು ಬಿದ್ದು ಹೋಗಬಹುದು- ಈಶ್ವರಪ್ಪ ಬಾಂಬ್  title=

ನವದೆಹಲಿ:ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಪತ್ರಕರ್ತರೊಂದಿಗೆ ಮಾತನಾಡುತ್ತಾ ಎರಡು ದಿನ ಕಾದು ನೋಡಿ,ಡಿಕೆ ಶಿವಕುಮಾರ್ ಅರೆಸ್ಟ್ ಆಗಬಹುದು ಸರ್ಕಾರವೇ ಬಿದ್ದು ಹೋಗಬಹುದು ಎಂದು ಹೇಳುವ ಮೂಲಕ  ಹೊಸ ಬಾಂಬ್ ಸಿಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು"ರಾಜ್ಯ ರಾಜಕಾರಣ ಹೇಗೆ ಬದಲಾಗುತ್ತೆ ಅಂತಾ ಕಾದು ನೋಡಿ, ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು,ಡಿ.ಕೆ. ಶಿವಕುಮಾರ್ ಅರೆಸ್ಟ್ ಆಗಬಹುದು ಅಥವಾ ಸರ್ಕಾರವೇ ಬಿದ್ದು ಹೋಗಬಹುದು" ಎನ್ನುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ.

ಯಡಿಯೂರಪ್ಪನವರು ಐಟಿ ಇಲಾಖೆಗೆ ಬರೆದ ಪತ್ರ ಬಹಿರಂಗವಾದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ "ಸಿಬಿಐ ಮತ್ತು ಇಡಿ ಮೇಲೆ ಅನುಮಾನ ಪಡುವ ಅಗತ್ಯ ಇಲ್ಲ,ಈ ಹಿಂದೆ ಕೂಡ ಸಿಬಿಐ ಮತ್ತು ಇಡಿ ಹಲವರು ಭ್ರಷರನ್ನು ಹಿಡಿದಿದೆ.ಆದ್ದರಿಂದ ಈಗ ನಾವು ಸಮ್ಮಿಶ್ರ ಸರ್ಕಾರವನ್ನು ನಾವು ಅಸ್ಥಿರಗೊಳಿಸಬೇಕಾದ ಅಗತ್ಯ ಇಲ್ಲ. ಅದು ಕಾಂಗ್ರೆಸ್ ಕಿತ್ತಾಟದಿಂದಲೇ  ಬಿದ್ದು ಹೋಗಲಿದೆ "ಎಂದು ತಿಳಿಸಿದರು.
 

Trending News