ಐಶಾರಾಮಿ ಬದುಕು ಬದುಕುತ್ತಾರೆ ಈ ರಾಶಿಯವರು, ಎಲ್ಲರೂ ಮೆಚ್ಚುವಂಥ ಜೀವನ ಇವರದ್ದು

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿರುವುದರಿಂದ ವೃಷಭ ರಾಶಿಯವರ ಜೀವನ, ಪ್ರೇಮ ಜೀವನ, ವೃತ್ತಿ ಮತ್ತು ವ್ಯಕ್ತಿತ್ವದ ಮೇಲೆ ಶುಕ್ರನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅವರನ್ನು ಎಲ್ಲರಿಗಿಂತ ಭಿನ್ನವಾಗಿರುವಂತೆ ಮಾಡುತ್ತದೆ. 

Written by - Ranjitha R K | Last Updated : Aug 29, 2022, 09:34 AM IST
  • ಜ್ಯೋತಿಷ್ಯದಲ್ಲಿ ರಾಶಿಚಕ್ರದ ಪ್ರಕಾರ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ
  • ವೃಷಭ ರಾಶಿಯ ಅಧಿಪತಿ ಶುಕ್ರ
  • ಶುಕ್ರನ ಪ್ರಭಾವ ಈ ರಾಶಿಯವರ ಮೇಲೆ ಸ್ಪಷ್ಟವಾಗಿ ಕಾಣಿಸುತ್ತದೆ
ಐಶಾರಾಮಿ ಬದುಕು ಬದುಕುತ್ತಾರೆ ಈ ರಾಶಿಯವರು, ಎಲ್ಲರೂ ಮೆಚ್ಚುವಂಥ ಜೀವನ ಇವರದ್ದು title=
Taurus Personality (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ ರಾಶಿಚಕ್ರದ ಪ್ರಕಾರ, ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಮಾರ್ಗಗಳನ್ನು ಸೂಚಿಸಲಾಗಿದೆ. ಇದೇ ಆಧಾರದಲ್ಲಿ ನೋಡುವುದಾದರೆ,  ವೃಷಭ ರಾಶಿಯವರ ಬಗ್ಗೆ ಅನೇಕ ವಿಷಯಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿರುವುದರಿಂದ ವೃಷಭ ರಾಶಿಯವರ ಜೀವನ, ಪ್ರೇಮ ಜೀವನ, ವೃತ್ತಿ ಮತ್ತು ವ್ಯಕ್ತಿತ್ವದ ಮೇಲೆ ಶುಕ್ರನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಅವರನ್ನು ಎಲ್ಲರಿಗಿಂತ ಭಿನ್ನವಾಗಿರುವಂತೆ ಮಾಡುತ್ತದೆ. 

ಐಷಾರಾಮಿ ಜೀವನ ನಡೆಸುತ್ತಾರೆ ವೃಷಭ ರಾಶಿಯವರು :
ವೃಷಭ ರಾಶಿಯ ಜನರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಅವರ ಜೀವನವು ಸಂತೋಷ ಮತ್ತು ಸೌಕರ್ಯಗಳಿಂದ ತುಂಬಿರುತ್ತದೆ.  ಅವರು ಸುಂದರವಾದ ಮತ್ತು ದುಬಾರಿ ವಸ್ತುಗಳನ್ನು ಮಾತ್ರ ಇಷ್ಟಪಡುತ್ತಾರೆ. ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ್ಯ್ದು ಈ ರಾಶಿಯವರಿಗೆ ಚೆನ್ನಾಗಿ ತಿಳಿದಿರುತ್ತದೆ. ಶ್ರಮಪಟ್ಟು ಕೆಲಸ ಮಾಡುತ್ತಾರೆ. ಹಾಗಾಗಿ ಯಾವುದೇ ಕ್ಷೇತ್ರಕ್ಕೆ ಹೋದರೂ, ಯಶಸ್ಸು ಅವರ ಪಾಲಾಗುತ್ತದೆ. ಈ ಜನರು ದೊಡ್ಡ ಕನಸುಗಳನ್ನು ಕಾಣುತ್ತಾರೆ, ಮಾತ್ರವಲ್ಲ ಆ ಕನಸುಗಳನ್ನು ಈಡೇರಿಸಲು ಸಂಪೂರ್ಣ ಸರಮ ಹಾಕುತ್ತಾರೆ.  

ಇದನ್ನೂ ಓದಿ : Venus Transit Effect: ಆಗಸ್ಟ್ 31ರಿಂದ 15 ದಿನಗಳ ಕಾಲ ಎಚ್ಚರದಿಂದಿರಿ ಈ ರಾಶಿಯವರು

ಬಹಳ ಆಕರ್ಷಕವಾಗಿರುತ್ತದೆ ಇವರ ವ್ಯಕ್ತಿತ್ವ :  
ವೃಷಭ ರಾಶಿಯ ಜನರ ವ್ಯಕ್ತಿತ್ವ ಬಹಳ ಆಕರ್ಷಕವಾಗಿರುತ್ತದೆ. ಜನರು ಸುಲಭವಾಗಿ ಅವರ ಕಡೆಗೆ ಆಕರ್ಷಿತರಾಗುತ್ತಾರೆ. ಈ ರಾಶಿಯ ಜನರು ತುಂಬಾ ವಿಶ್ವಾಸಾರ್ಹ ಮತ್ತು ಸ್ವಾಭಿಮಾನಿಗಳು., ತುಂಬಾ ಸೃಜನಶೀಲರು. ವೃಷಭ ರಾಶಿಯವರು ಪ್ರಾಕ್ಟಿಕಲ್ ಆಗಿ ಬದುಕುತ್ತಾರೆ. ಈ ರಾಶಿಯವರು ಉನ್ನತ ಮನೋಭಾವ ಮತ್ತು ಧನಾತ್ಮಕ ಮನಸ್ಸಿನವರು. 

ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ  :
ಶುಕ್ರನ ಪ್ರಭಾವದಿಂದಾಗಿ, ವೃಷಭ ರಾಶಿಯ ಜನರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಸಂಗಾತಿಯಿಂದಲೂ ಪ್ರೀತಿಯನ್ನು ನಿರೀಕ್ಷಿಸುತ್ತಾರೆ.  ಬೇರೆಯವರ ಕಡೆಗೆ ಬಹಳ ಬೇಗ ಆಕರ್ಷಿತರಾಗುತ್ತಾರೆ. ಆದರೆ ಯಾರ ಜೊತೆಗಾದರೂ ಸಂಬಂಧ ಬೆಳೆಸಿಕೊಂಡರೆ,  ಆ ಸಂಬಂಧಕ್ಕೆ ಸಂಪೂರ್ಣವಾಗಿ ನಿಷ್ಠರಾಗಿರುತ್ತಾರೆ.

ಇದನ್ನೂ ಓದಿ : Vastu Tips: ತಾಯಿ ಲಕ್ಷ್ಮಿಯ ಕೃಪಾವೃಷ್ಠಿಗೆ ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News