BBK 10: ಕಾರ್ತಿಕ್, ಸಂಗೀತ, ವಿನಯ್.. ಇವರೆಲ್ಲರಿಗಿಂತ ಸಖತ್ ಮನರಂಜನೆ ಕೊಟ್ಟ ಈ ಸ್ಪರ್ಧಿ ಬಿಗ್ ಬಾಸ್ ವಿನ್ನರ್!! ಫಿನಾಲೆಗೂ ಮುನ್ನ ಕಿಚ್ಚನೇ ಕೊಟ್ರು ಸುಳಿವು

Bigg Boss Kannada, Tukali Santhosh: ಬಿಗ್ ಬಾಸ್ ಕನ್ನಡ ಸೀಸನ್ 10ರ ಕೊನೆಯ ಪಂಚಾಯ್ತಿ ಸದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಟೈಟಲ್ ವಿನ್ನರ್ ಈ ಒಬ್ಬ ಸ್ಪರ್ಧಿ ಆಗಬಹುದು ಎಂದು ಕಿಚ್ಚ ಸುದೀಪ್ ಇತರ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಆತನ ಮಾಸ್ಟರ್ ಪ್ಲಾನ್’ಗಳನ್ನು ಕಿಚ್ಚ ಮೆಚ್ಚಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಕನ್ನಡ ಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ವಿಶೇಷತೆಗಳಿಂದ ಕೂಡಿತ್ತು. ಸ್ನೇಹ, ಪ್ರೀತಿ, ಕೋಪ, ಗಲಾಟೆ, ಮನಸ್ತಾಪ ಹೀಗೆ ಒಂದಲ್ಲ ಒಂದು ಭಾವನೆಗಳಲ್ಲಿ ಮೇಳೈಸಿದ ಈ ಶೋ ಇದೀಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ.

2 /6

ಸದ್ಯ ಸೀಸನ್ 10ರ ಕೊನೆಯ ಕಿಚ್ಚನ ಪಂಚಾಯ್ತಿ ನಡೆಯುತ್ತಿದ್ದು, ಕಳೆದ ಎಪಿಸೋಡ್ ಉಪ್ಪು, ಹುಳಿ, ಖಾರದಂತೆ ವಿಶೇಷ ರುಚಿಗಳ ಅನುಭವ ನೀಡಿದ್ದು ಸುಳ್ಳಲ್ಲ.

3 /6

ಕಳೆದ ದಿನ ಬಿಗ್ ಬಾಸ್ ಇತಿಹಾಸದಲ್ಲೇ ಇಬ್ಬರು ಸ್ಪರ್ಧಿಗಳಿಗೆ ಕಿಚ್ಚ, ತಮ್ಮ ಮೆಚ್ಚುಗೆಯ ಚಪ್ಪಾಳೆಯನ್ನು ನೀಡಿದ್ದರು. ಸಂಗೀತಾ ಮತ್ತು ವಿನಯ್ ಆ ಗೌರವಕ್ಕೆ ಪಾತ್ರರಾಗಿದ್ದು, ಇವರಿಬ್ಬರು ಇಲ್ಲದಿದ್ದರೆ ಈ ಸೀಸನ್ ನಿಜಕ್ಕೂ ಅಪೂರ್ಣವಾಗಿರುತ್ತಿತ್ತು ಎಂದು ಕಿಚ್ಚ ಹೇಳಿದ್ದಾರೆ.

4 /6

ಈಗಾಗಲೇ ಸಂಗೀತಾ ಟಿಕೆಟ್ ಪಡೆದುಕೊಂಡು ಫಿನಾಲೆಗೆ ಎಂಟ್ರಿಕೊಟ್ಟರೆ, ತುಕಾಲಿ ಸಂತೋಷ್ ನಾಮಿನೇಷನ್ ಸುಳಿಯಿಂದ ಬಚಾವ್ ಆಗಿ ಫಿನಾಲೆಗೆ ಕಾಲಿಟ್ಟಿದ್ದಾರೆ. ಕಳೆದ ದಿನ ಸುದೀಪ್ ಅವರು, ವರ್ತೂರ್ ಸಂತೋಷ್ ಅವರನ್ನು ಸೇಫ್ ಮಾಡುವ ಮೂಲಕ ಮೂರನೇ ಕಂಟೆಸ್ಟೆಂಟ್ ಆಗಿ ಫಿನಾಲೆಗೆ ಲಗ್ಗೆ ಇಡುವಂತೆ ಮಾಡಿದ್ದಾರೆ.

5 /6

ಈ ಎಲ್ಲದರ ಮಧ್ಯೆ, ತುಕಾಲಿ ಸಂತೋಷ್ ಅವರು ಮೊದಲ ದಿನದಿಂದ ಇದುವರೆಗೆ ಮಾಡಿಕೊಂಡು ಬಂದಿದ್ದ ಪ್ಲಾನ್’ಗಳ ಬಗ್ಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತುಕಾಲಿ ಅವರು ದೊಡ್ಮನೆಯಲ್ಲಿ ಸಖತ್ ಮನರಂಜನೆ ನೀಡಿದ ಸ್ಪರ್ಧಿಗಳಲ್ಲಿ ಒಬ್ಬರು. ಉಳಿದವರೆಲ್ಲಾ ಕಿತ್ತಾಡಿಕೊಂಡು ಈ ಸ್ಥಾನಕ್ಕೆ ಬಂದರೆ, ತುಕಾಲಿ ಮಾತ್ರ ಅದ್ಭುತವಾಗಿ ಯೋಚಿಸಿ ಫಿನಾಲೆಗೆ ಕಾಲಿಟ್ಟಿದ್ದಾರೆ ಎಂದು ಕೊಂಡಾಡಿದ್ದಾರೆ ಕಿಚ್ಚ.

6 /6

ಮತ್ತೊಂದೆಡೆ, ನಾನು ಹುಲಿ, ನಾನು ಆನೆ ಅಂತೆಲ್ಲಾ ಇದ್ದವರನ್ನು ಹಿಂದಿಕ್ಕಿ ಸೈಲೆಂಟ್ ಆಗಿ ತುಕಾಲಿ ಅವರು ಫಿನಾಲೆ ಪ್ರವೇಶಿಸಿದ್ದಾರೆ. ಅವರ ಬಗ್ಗೆ ಎಚ್ಚರ ಇರಲಿ, ನನ್ನ ಬಲಭಾಗದಲ್ಲೋ… ಎಡಭಾಗದಲ್ಲೋ ವೇದಿಕೆ ಮೇಲೆ ನಿಲ್ಲೋ ಸಾಮಾರ್ಥ್ಯ ಅವರಿಗೆ ಇದೆ ಎಂದು ಇತರ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡುತ್ತಾ, ತುಕಾಲಿ ಪ್ಲಾನ್ಸ್’ಗಳನೆಲ್ಲಾ ಕಿಚ್ಚ ಮೆಚ್ಚಿದ್ದರು. ಕಿಚ್ಚ ಹೇಳಿದ ಈ ಮಾತುಗಳನ್ನು ಕೇಳಿದ್ರೆ ತುಕಾಲಿ ಸಂತೋಷ್ ಬಿಗ್ ಬಾಸ್ ವಿನ್ನರ್ ಆಗಬಹುದು ಎಂಬ ಅನುಮಾನ ಮೂಡಿದೆ.