IND vs SL: "ಮೂರ್ಖ ನಿರ್ಧಾಗಳಿಂದ ಟೀಂ ಇಂಡಿಯಾ ತಂಡದ ವಿನಾಶ ಖಂಡಿತ"..ಕೋಚ್‌ ವಿರುದ್ಧ ಅಭಿಮಾನಿಗಳ ಗುಡುಗು..!

India vs Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಲಿದೆ. ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಬುಧವಾರ ಫೀಲ್ಡ್‌ಗೆ ಇಳಿಯಲಿದ್ದಾರೆ, ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಟೀಂ ಇಂಡಿಯಾ ಎದುರಾಲಿ ತಂಡದ ವಿರುದ್ಧ ಎಡವಿದೆ. ಇದೀಗ ಮೂರನೆ ಪಂದ್ಯ ಗೆದ್ದು ಟೈ ಮಾಡಿಕೊಳ್ಳುವ ನಿರಿಕ್ಷೆಯಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

1 /6

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಲಿದೆ. ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಬುಧವಾರ ಫೀಲ್ಡ್‌ಗೆ ಇಳಿಯಲಿದ್ದಾರೆ, ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಟೀಂ ಇಂಡಿಯಾ ಎದುರಾಲಿ ತಂಡದ ವಿರುದ್ಧ ಎಡವಿದೆ. ಇದೀಗ ಮೂರನೆ ಪಂದ್ಯ ಗೆದ್ದು ಟೈ ಮಾಡಿಕೊಳ್ಳುವ ನಿರಿಕ್ಷೆಯಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ.  

2 /6

ಶ್ರೀಲಂಕಾ 1997 ರಿಂದ ಭಾರತ ವಿರುದ್ಧ ಏಕದಿನ ಸರಣಿಯನ್ನು ಗೆದ್ದಿಲ್ಲ. ಈಗ ಆ ಕೊರತೆಯನ್ನು ನೀಗಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ವೈಫಲ್ಯಗಳ ಬಗ್ಗೆ ಎಷ್ಟು ಕಡಿಮೆ ಹೇಳಿದರೆ ಅಷ್ಟು ಒಳ್ಳೆಯದು. ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಾಣದಿದ್ದರೂ ಬ್ಯಾಟಿಂಗ್ ನಲ್ಲಿ ರೋಹಿತ್ ಬಿಟ್ಟರೆ ಬೇರೆ ಯಾರೂ ಪ್ರಭಾವವಾಗಿ ಬ್ಯಾಟಿಂಗ್‌ ಮಾಡುತ್ತಿಲ್ಲ.   

3 /6

ರೋಹಿತ್ ಶರ್ಮಾ ಆಕ್ರಮಣಕಾರಿ ಆಟದಿಂದ ರೋಚಕವಾಗಿದ್ದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಜಿಡ್ಡಿನ ಬ್ಯಾಟಿಂಗ್‌ನಿಂದ ತಂಡಕ್ಕೆ ಹೊರೆಯಾಗಿದ್ದಾರೆ. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಫ್ಲಾಪ್ ಆಗಿದ್ದಾರೆ. ಇನ್ನೂ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ನಿರ್ಧಾರಗಲೇ ಟೀಂ ಇಂಡಿಯಾದ ಸೋಲಿಗೆ ಕಾರಣ ಎನ್ನು ಟೀಕೆಗಳು ಸಹ ಕೇಳಿ ಬರುತ್ತಿವೆ.  

4 /6

ಹಲವು ಅನಿರೀಕ್ಷಿತ ಬದಲಾವಣೆಗಳು ತಂಡದಲ್ಲಿ ನಡೆದಿವೆ. ಗೌತಮ್ ಗಂಭೀರ್ ತಮ್ಮ ಕೋಚಿಂಗ್‌ಗಿಂತ ಹೆಚ್ಚಾಗಿ ತಮ್ಮ ಪ್ರಯೋಗಗಳಿಂದಲೇ ಸುದ್ದಿಯಲ್ಲಿದ್ದಾರೆ. ರೋಹಿತ್ ಬೌಲಿಂಗ್ ಪರವಾಗಿಲ್ಲ ಆದರೆ ಈ ವಯಸ್ಸಿನಲ್ಲಿ ಗಾಯದ ಭೀತಿ ಎದುರಾಗಿದೆ. ರೋಹಿತ್‌ಗೆ ಸದ್ಯ 37 ವರ್ಷ. ಈ ವಯಸ್ಸಿನಲ್ಲಿ ಫಿಟ್‌ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು. ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್‌ನನ್ನು ಹಾಗೆ ಉಳಿಸಿಕೊಳ್ಳುವುದು ತುಂಬಾ ಒಳ್ಳೆಯದು.  

5 /6

ಎರಡನೆಯದು ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವುದು. ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಗೌತಿ ಪ್ರಯೋಗ ಮಾಡುತ್ತಿದ್ದಾರೆ. ವಾಷಿಂಗ್ಟನ್ ಒಂದು ಪಂದ್ಯದಲ್ಲಿ ಸುಂದರ್ ಅವರನ್ನು ಮುಂದೆ ತಂದರೆ, ಇನ್ನೊಂದು ಪಂದ್ಯದಲ್ಲಿ ಶಿವಂ ದುಬೆ ನಂತರ ಅಕ್ಷರ್ ಪಟೇಲ್ ಈ ರೀತಿಯ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ.  

6 /6

ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ರೂಪದಲ್ಲಿ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇವರಿಬ್ಬರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಂದಕ್ಕೆ ಕಳುಹಿಸಿದರೆ ಒಳ್ಳೆಯದು ಎಂಬುದು ಕ್ರೀಡಾ ಪಂಡಿತರ ಅಭಿಪ್ರಾಯ. ಒಟ್ಟಿನಲ್ಲಿ ಗೌತಮ್ ಗಂಭೀರ್ ಅವರ ದಿಟ್ಟ ನಿರ್ಧಾರಗಳು ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿವೆ. ಈ ನಿರ್ಧಾರಗಳು ಟೀಂ ಇಂಡಿಯಾಗೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.