Astro Tips: ಶನಿ-ರಾಹು-ಕೇತು ದೋಷದಿಂದ ಮುಕ್ತಿ ಪಡೆಯಬೇಕೆ? ಈ ಜೋತಿಷ್ಯ ಸಲಹೆ ಒಮ್ಮೆ ಅನುಸರಿಸಿ ನೋಡಿ!

Astro Tips: ಕಾಡಿಗೆ ಕೇವಲ ಕಣ್ಣಿನ ಅಂದವನ್ನು ಹೆಚ್ಚಿಸುವುದಲ್ಲದೆ, ಅನೇಕ ಸಮಸ್ಯೆಗಳಿಂದ ಮುಕ್ತಿ ಕೂಡ ನೀಡುತ್ತದೆ. ಕಾಡಿಗೆಗೆ ಸಂಬಂಧಿಸಿದ ಈ ಉಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jun 13, 2023, 10:56 PM IST
  • ಅರಿಸಿನ ಹೂವು ಮತ್ತು ಹತ್ತಿಯನ್ನು ಬೆರೆಸಿ ಹೂಬತ್ತಿಯನ್ನು ತಯಾರಿಸಿ ಮತ್ತು ಭಾನುವಾರದಂದು ಬೆಣ್ಣೆಯಿಂದ ಆ ದೀಪವನ್ನು ಸುಡಬೇಕು.
  • ಅದರಿಂದ ಕಾಡಿಗೆಯನ್ನು ತಯಾರಿಸಿ. ಈ ಕಾಡಿಗೆಯನ್ನು ರಾತ್ರಿ ಕಣ್ಣುಗಳಿಗೆ ಅನ್ವಯಿಸಿ,
  • ಹೀಗೆ ಮಾಡುವುದರಿಂದ ಯಾರನ್ನಾದರೂ ಸುಲಭವಾಗಿ ವಶಪಡಿಸಿಕೊಳ್ಳಬಹುದು.
Astro Tips: ಶನಿ-ರಾಹು-ಕೇತು ದೋಷದಿಂದ ಮುಕ್ತಿ ಪಡೆಯಬೇಕೆ? ಈ ಜೋತಿಷ್ಯ ಸಲಹೆ ಒಮ್ಮೆ ಅನುಸರಿಸಿ ನೋಡಿ! title=

Astro Tips: ಸಾಮಾನ್ಯವಾಗಿ ಕಾಡಿಗೆಯನ್ನು ಮಹಿಳೆಯರು ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಬಳಸುತ್ತಾರೆ. ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಕೂಡ ಕಾಡಿಗೆಯನ್ನು ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾಡಿಗೆಗೆ ವಿಶೇಷ ಮಹತ್ವವಿದೆ. ಅಂದರೆ ಕಾಡಿಗೆಯ ಬಳಕೆ ಕೇವಲ ಮೇಕಪ್‌ಗೆ ಸೀಮಿತವಾಗಿಲ್ಲ. ಹಣದ ಕೊರತೆ, ಗ್ರಹ ದೋಷಗಳು, ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಸಹ ಇದನ್ನು ಬಳಸಲಾಗುತ್ತದೆ ಎಂದರ್ಥ. ಹಾಗಾದರೆ ಬನ್ನಿ ಕಾಡಿಗೆಗೆ ಸಂಬಂಧಿಸಿದ ತಂತ್ರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

1. ಮನೆಯಲ್ಲಿ ಸದಾ ಜಗಳ, ವ್ಯಾಜ್ಯದ ವಾತಾವರಣವಿದ್ದು, ಇದರಿಂದ ಕುಟುಂಬದ ನೆಮ್ಮದಿ ಹಾಳಾಗಿದ್ದರೆ, ಶನಿವಾರ ಬೆಳಗ್ಗೆ ಹಲಸಿನ ಕಾಯಿ ತೆಗೆದುಕೊಂಡು ಕಪ್ಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ನಂತರ ಅದರ ಮೇಲೆ 21 ಕಾಡಿಗೆ ಚುಕ್ಕೆಗಳನ್ನಿಡಿ, ನಂತರ ಅದನ್ನು  ಮನೆಯ ಹೊರಗೆ ಇಡಬೇಕು. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ.

2. ಶನಿಯ ಎರಡೂವರೆ ವರ್ಷಗಳ ಕಾಟ ಮತ್ತು ಸಾಡೇಸಾತಿಯಿಂದ ವ್ಯಕ್ತಿಗೆ ತೊಂದರೆಯಾಗಿದ್ದರೆ, ಶನಿವಾರದಂದು, ಕಪ್ಪು ಕಾಡಿಗೆಯನ್ನು ಒಂದು ಬಾಟಲಿಯಲ್ಲಿ ತೆಗೆದುಕೊಂಡು, ಶನಿ ದೋಷದಿಂದ ಬಳಲುತ್ತಿರುವ ವ್ಯಕ್ತಿಯ ತಲೆಯಿಂದ ಪಾದದವರೆಗೆ 9 ಬಾರಿ ನಿವಾಳಿಸಿ. ಇದನ್ನು ಮಾಡಿದ ನಂತರ, ಬಾಟಲಿಯನ್ನು ನಿರ್ಜನ ನೆಲದಲ್ಲಿ ಹೂತುಹಾಕಿ. ಇದಲ್ಲದೆ, ಮಣ್ಣನ್ನು ಅಗೆದ ಉಪಕರಣವನ್ನು ಕೂಡ ಅಲ್ಲಿಯೇ ಬಿಟ್ಟು ಬನ್ನಿ.

3. ನಿಮ್ಮ ಶತ್ರುಗಳಿಂದ ನಿಮಗೆ ತೊಂದರೆಯಾಗಿದ್ದರೆ, ಐದು ಸಣ್ಣ ಬೆಳ್ಳಿ ಹಾವುಗಳನ್ನು ತಯಾರಿಸಿ. ಆ ಹಾವುಗಳ ಮೇಲೆ ಸತತ 21 ದಿನಗಳವರೆಗೆ ಕಾಡಿಗೆಯನ್ನು ಹಚ್ಚಿ. ಬಳಿಕ ಅವುಗಳನ್ನು ನೀವು ಮಲಗುವ ಹಾಸಿಗೆಯ ಕೆಳಗೆ ಇರಿಸಿ.ಈ ಪರಿಹಾರವು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ ಮತ್ತು ಶತ್ರುಕಾಟದಿಂದ ಮುಕ್ತಿ ಸಿಗುತ್ತದೆ.

4. ವ್ಯಾಪಾರದಲ್ಲಿ ಮಂದಗತಿಯಿದ್ದರೆ ಅಥವಾ ಉದ್ಯೋಗದಲ್ಲಿ ಬಡ್ತಿ ಸಿಗದಿದ್ದರೆ ಐದು ಗ್ರಾಂ ಕಾಡಿಗೆ ಗಟ್ಟಿಗಳನ್ನು ತೆಗೆದುಕೊಂಡು ಶನಿವಾರದಂದು ಮಣ್ಣಿನಲ್ಲಿ ಹೂತುಹಾಕಿ, ಬಳಿಕ ಹಿಂದಿರುಗಿ ನೋಡದೆ ಮನೆಗೆ ವಾಪಸ್ಸಾಗಿ.

5. ನಿಮ್ಮ ಜಾತಕದಲ್ಲಿ ಮಂಗಳ ದೋಷವಿದ್ದರೆ, ನೀವು 43 ದಿನಗಳವರೆಗೆ ನಿಮ್ಮ ಕಣ್ಣುಗಳಿಗೆ ಬಿಳಿ ಕಾದಿಗೆಯನ್ನು ಅನ್ವಯಿಸಬೇಕು. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಮಂಗಳ ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತದೆ. ನೀವು ಮಂಗಳವಾರ ಮತ್ತು ಶನಿವಾರದಂದು ಕಾಡಿಗೆಯನ್ನು ಅನ್ವಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ.-

ಇದನ್ನೂ ಓದಿ-Diabetes Alert: ಮಧುಮೆಹಿಗಳು ಮರೆತೂ ಕೂಡ ಈ ಹಣ್ಣುಗಳನ್ನು ಸೇವಿಸಬಾರದು!

6. ಅರಿಸಿನ ಹೂವು ಮತ್ತು ಹತ್ತಿಯನ್ನು ಬೆರೆಸಿ ಹೂಬತ್ತಿಯನ್ನು ತಯಾರಿಸಿ ಮತ್ತು ಭಾನುವಾರದಂದು ಬೆಣ್ಣೆಯಿಂದ ಆ ದೀಪವನ್ನು ಸುಡಬೇಕು. ಅದರಿಂದ ಕಾಡಿಗೆಯನ್ನು ತಯಾರಿಸಿ. ಈ ಕಾಡಿಗೆಯನ್ನು ರಾತ್ರಿ ಕಣ್ಣುಗಳಿಗೆ ಅನ್ವಯಿಸಿ, ಹೀಗೆ ಮಾಡುವುದರಿಂದ ಯಾರನ್ನಾದರೂ ಸುಲಭವಾಗಿ ವಶಪಡಿಸಿಕೊಳ್ಳಬಹುದು.

ಇದನ್ನೂ ಓದಿ-Lifestyle Care Tips: ಹನಿಬುಷ್ ಟೀ ಬಗ್ಗೆ ನಿಮಗೆಷ್ಟು ತಿಳಿದಿದೆ? ಅದ್ಭುತ ಲಾಭ ತಿಳಿದುಕೊಳ್ಳಲು ಇಂದಿನಿಂದಲೇ ಸೇವನೆ ಆರಂಭಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News