Pitru Paksha: ಪೂರ್ವಜರ ಆಶೀರ್ವಾದಕ್ಕೆ ಪಿತೃಪಕ್ಷದ ಸಮಯದಲ್ಲಿ ಈ ವಸ್ತುಗಳನ್ನು ಖರೀದಿಸಿ!

ಪಿತೃ ಪಕ್ಷ: ಹಿಂದೂ ಸಂಪ್ರದಾಯದಲ್ಲಿ ಪಿತೃ ಪಕ್ಷವು ಪೂರ್ವಜರನ್ನು ನೆನಪಿಸಿಕೊಳ್ಳುವ ಪ್ರಮುಖ ಸಂದರ್ಭವಾಗಿದೆ. ಈ ವರ್ಷ ಇದು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಈ ವಸ್ತುವನ್ನು ಖರೀದಿಸುವುದರಿಂದ ಪೂರ್ವಜರು ಸಂತೋಷಪಡುತ್ತಾರೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ.  

Written by - Puttaraj K Alur | Last Updated : Sep 23, 2023, 10:02 PM IST
  • ಪಿತೃ ಪಕ್ಷದ ವೇಳೆ ಕಪ್ಪು ಎಳ್ಳು ಖರೀದಿಸಿ ಪೂರ್ವಜರ ಶ್ರಾದ್ಧಕ್ಕಾಗಿ ದಾನ ಮಾಡುವುದು ಮಂಗಳಕರ
  • ಪಿತೃಪಕ್ಷದ ವೇಳೆ ಬಾರ್ಲಿಯನ್ನು ಖರೀದಿಸಿ ನಂತರ ಅದನ್ನು ದಾನ ಮಾಡುವುದು ಮಂಗಳಕರ
  • ಪಿತೃಪಕ್ಷದಂದು ಅಕ್ಕಿಯನ್ನು ಖರೀದಿಸಿ ದಾನ ಮಾಡುವುದರಿಂದ ಪೂರ್ವಜರು ಸಂತೋಷ ಪಡುತ್ತಾರೆ
Pitru Paksha: ಪೂರ್ವಜರ ಆಶೀರ್ವಾದಕ್ಕೆ ಪಿತೃಪಕ್ಷದ ಸಮಯದಲ್ಲಿ ಈ ವಸ್ತುಗಳನ್ನು ಖರೀದಿಸಿ!  title=
ಪಿತೃ ಪಕ್ಷ 2023

ನವದೆಹಲಿ: ಹಿಂದೂ ಧರ್ಮದಲ್ಲಿ ಪಿತೃ ಪಕ್ಷವು ಪ್ರಮುಖ ಪಾತ್ರವನ್ನು ಹೊಂದಿದೆ. ಇದು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ. ಅವರನ್ನು ಸಮಾಧಾನಪಡಿಸಲು ವಿವಿಧ ವಿಧಾನಗಳ ಮೂಲಕ ಪೂಜೆ ಸಲ್ಲಿಸುತ್ತಾರೆ. ವಾಸ್ತವವಾಗಿ ಪಿತೃ ಪಕ್ಷವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಜನರು ವಿವಿಧ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸುತ್ತಾರೆ. ಆದರೆ ಪಿತೃ ಪಕ್ಷದ ಸಮಯದಲ್ಲಿ ಖರೀದಿಸಲು ಲಾಭದಾಯಕವಾದ ಕೆಲವು ವಸ್ತುಗಳು ಇವೆ. ಈ ವಸ್ತುಗಳನ್ನು ಖರೀದಿಸುವ ಮೂಲಕ ಪೂರ್ವಜರು ಸಂತೋಷಪಡುತ್ತಾರೆ ಮತ್ತು ವ್ಯಕ್ತಿಯು ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಈ ವಸ್ತುಗಳು ಯಾವುವು ಎಂದು ತಿಳಿಯಿರಿ.

ಕಪ್ಪು ಎಳ್ಳು: ಪಿತೃ ಪಕ್ಷದ ಸಮಯದಲ್ಲಿ ಕಪ್ಪು ಎಳ್ಳನ್ನು ಖರೀದಿಸಿ ಪೂರ್ವಜರ ಶ್ರಾದ್ಧಕ್ಕಾಗಿ ದಾನ ಮಾಡುವುದು ಮಂಗಳಕರ. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷವನ್ನು ತಂದುಕೊಡುತ್ತಾರೆ.

ಬಾರ್ಲಿ: ಬಾರ್ಲಿಗೆ ಚಿನ್ನದ ಸ್ಥಾನಮಾನವನ್ನು ನೀಡಲಾಗಿದೆ. ಪಿತೃಪಕ್ಷದ ಸಮಯದಲ್ಲಿ ಬಾರ್ಲಿಯನ್ನು ಖರೀದಿಸಿ ನಂತರ ಅದನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಬಾರ್ಲಿಯನ್ನು ದಾನ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.

ಇದನ್ನೂ ಓದಿ: Vastu Tips: ಮನೆ ಮುಂದೆ ಬೇವಿನ ಮರ ಇರುವುದು ಶುಭವೋ? ಅಶುಭವೋ?

ಹೊಸ ವಸ್ತ್ರಗಳು: ಪಿತೃ ಪಕ್ಷದಲ್ಲಿ ಹೊಸ ವಸ್ತ್ರಗಳನ್ನು ಖರೀದಿಸಿ ಬ್ರಾಹ್ಮಣರಿಗೆ ಪೂರ್ವಿಕರಿಗಾಗಿ ದಾನ ಮಾಡಬೇಕು. ಪೂರ್ವಜರು ಹೊಸ ವಸ್ತ್ರಗಳ ದಾನದಿಂದ ಸಂತೋಷಪಡುತ್ತಾರೆ. ಅವರ ವಂಶಸ್ಥರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ಒದಗಿಸುತ್ತಾರೆ.

ಅಕ್ಕಿ: ಧಾರ್ಮಿಕ ನಂಬಿಕೆಗಳ ಪ್ರಕಾರ ಅಕ್ಕಿಯನ್ನು ಬೆಳ್ಳಿ ಎಂದು ಪರಿಗಣಿಸಲಾಗುತ್ತದೆ. ಪಿತೃಪಕ್ಷದಂದು ಅಕ್ಕಿಯನ್ನು ಖರೀದಿಸಿ ದಾನ ಮಾಡುವುದರಿಂದ ಪೂರ್ವಜರನ್ನು ಸಂತೋಷಪಡಿಸಿ ಸಂಪತ್ತು ವೃದ್ಧಿಸುತ್ತದೆ.

ಮಲ್ಲಿಗೆ ಎಣ್ಣೆ: ಶಾಸ್ತ್ರಗಳ ಪ್ರಕಾರ ಪಿತೃಪಕ್ಷದ ಸಮಯದಲ್ಲಿ ಪೂರ್ವಜರಿಗೆ ಮಲ್ಲಿಗೆ ಎಣ್ಣೆಅರ್ಪಿಸುವುದರಿಂದ ಅವರನ್ನು ತೃಪ್ತಿಪಡಿಸಬಹುದು. ಇದರಿಂದ ಪೂರ್ವಜರು ಅವರ ವಂಶಸ್ಥರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ನೀಡುತ್ತಾರೆ.

ಇದನ್ನೂ ಓದಿ: ನಿಯ ಸಾಡೇಸಾತಿಯಿಂದ ಮುಕ್ತಿ ನೀಡುತ್ತೇ ಈ ಒಂದು ಚಿಕ್ಕ ಉಪಾಯ!

ಬಿಳಿ ಹೂಗಳು: ಬಿಳಿ ಹೂಗಳು ಪೂರ್ವಜರಿಗೆ ಪ್ರಿಯವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಪಿತೃ ಪಕ್ಷದಂದು ಬಿಳಿ ಹೂವುಗಳನ್ನು ಖರೀದಿಸಿ ಪೂರ್ವಜರಿಗೆ ಅರ್ಪಿಸಬೇಕು. ಇದು ಅವರಿಗೆ ಸಂತೋಷವನ್ನು ನೀಡುತ್ತದೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News