Mangal Gochar: ಮಂಗಳನ ರಾಶಿ ಬದಲಾವಣೆ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ

ಮಂಗಳ ಸಂಚಾರ 2022: ಅಕ್ಟೋಬರ್ 16ರಂದು ಮಿಥುನ ರಾಶಿಯಲ್ಲಿ ಮಂಗಳ ಸಾಗಲಿದೆ. ಇದು 3 ರಾಶಿಯ ಜನರ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತದೆ.

Written by - Puttaraj K Alur | Last Updated : Sep 4, 2022, 09:49 AM IST
  • ಮಿಥುನ ರಾಶಿಯವರಿಗೆ ಮಂಗಳ ಸಂಕ್ರಮಣದಿಂದ ಶುಭ ದಿನಗಳು ಆರಂಭವಾಗಲಿದೆ
  • ಕರ್ಕ ರಾಶಿಯವರು ಹೊಸ ಉದ್ಯೋಗದ ಪ್ರಸ್ತಾಪ ಪಡೆಯಬಹುದು
  • ಮಂಗಳ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ
Mangal Gochar: ಮಂಗಳನ ರಾಶಿ ಬದಲಾವಣೆ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ title=
Mangal Gochar 2022

ನವದೆಹಲಿ: ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಭೂಮಿ, ಧೈರ್ಯ, ಶಕ್ತಿ, ಮದುವೆಯ ಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಗ್ರಹವು ಅಶುಭ ಸ್ಥಾನದಲ್ಲಿದ್ದರೆ ಹಾನಿಯನ್ನುಂಟುಮಾಡುತ್ತದೆ, ಶುಭವಾಗಿದ್ದರೆ ಕೆಲವರು ರಾಶಿಯವರಿಗೆ ಲಾಭ ತಂದುಕೊಡುತ್ತದೆ. ಮಂಗಳವನ್ನು ಗ್ರಹಗಳ ಕಮಾಂಡರ್ ಎಂದು ಹೇಳಲಾಗುತ್ತದೆ.

ಇದೀಗ ಮಂಗಳ ಗ್ರಹವು ವೃಷಭ ರಾಶಿಯಲ್ಲಿದೆ. ಅಕ್ಟೋಬರ್ 16ರಂದು ಮಂಗಳ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮಂಗಳನ ರಾಶಿಯ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಬದಲಾವಣೆಯು 3 ರಾಶಿಯವರಿಗೆ ತುಂಬಾ ಒಳ್ಳೆಯದು. ಯಾವ ರಾಶಿಯವರಿಗೆ ಮಂಗಳ ಗ್ರಹ ಸಂಕ್ರಮಣ ಶುಭವಾಗಲಿದೆ ಎಂದು ತಿಳಿಯಿರಿ.

ಇದನ್ನೂ ಓದಿ: IND vs PAK : ಪಂದ್ಯದ ಮೊದಲೆ ಪಾಕ್ ಟೀಂಗೆ ಬಿಗ್ ಶಾಕ್ : ತಂಡದಿಂದ ಈ ವೇಗದ ಬೌಲರ್ ಔಟ್

ಮಂಗಳ ಸಂಚಾರದಿಂದ ಈ ರಾಶಿಯವರ ಅದೃಷ್ಟ ಬೆಳಗಲಿದೆ

ಮಿಥುನ ರಾಶಿ: ಅಕ್ಟೋಬರ್ 16ರಿಂದ ಮಿಥುನ ರಾಶಿಯವರಿಗೆ ಮಂಗಳ ಸಂಕ್ರಮಣದಿಂದ ಶುಭ ದಿನಗಳು ಆರಂಭವಾಗಲಿದೆ. ಆದಾಯ ಹೆಚ್ಚಲಿದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕೆಲಸವು ಉತ್ತಮವಾಗಿರುತ್ತದೆ, ಅದು ಪ್ರಶಂಸೆ ಪಡೆಯುತ್ತದೆ. ಹಿರಿಯರ ಸಹಾಯ ದೊರೆಯಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಯಶಸ್ಸನ್ನು ಪಡೆಯಬಹುದು.

ಕರ್ಕ ರಾಶಿ: ಕರ್ಕ ರಾಶಿಯವರಿಗೆ ಮಂಗಳ ಸಂಚಾರವು ಉತ್ತಮವಾಗಿರುತ್ತದೆ. ನೀವು ಹೊಸ ಉದ್ಯೋಗ ಪ್ರಸ್ತಾಪ ಪಡೆಯಬಹುದು. ವರ್ಕಿಂಗ್ ನೆಟ್‌ವರ್ಕ್ ಬಲವಾಗಿರುತ್ತದೆ. ಹೊಸ ಒಪ್ಪಂದ ಅಂತಿಮವಾಗಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ.

ಇದನ್ನೂ ಓದಿ: Ravindra Jadeja : ಟೀಂ ಇಂಡಿಯಾಗೆ ಭಾರಿ ಹಿನ್ನಡೆ : ಟಿ20 ವಿಶ್ವಕಪ್‌ನಿಂದ ರವೀಂದ್ರ ಜಡೇಜಾ ಔಟ್

ಸಿಂಹ ರಾಶಿ: ಮಂಗಳ ಸಂಚಾರವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ. ನಿಮ್ಮ ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ಅದೃಷ್ಟದ ಸಹಾಯದಿಂದ ನೀವು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ. ದೂರದ ಊರಿಗೆ ಪ್ರವಾಸ ಹೋಗಬಹುದು. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News