Rakshabandhan 2023 ದಿನ ಶನಿ ಗುರುವಿನ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಧನಲಕ್ಷ್ಮಿಯ ಅಪಾರ ಕೃಪಾಶೀರ್ವಾದ!

Raksha Bandhan 2023 Rarest Coincidence: ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ತಿಥಿಯಂದು ರಕ್ಷಾಬಂಧನ ಉತ್ಸವವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾಬಂಧನದ ದಿನ ಗುರು ಮತ್ತು ಶನಿ ಒಟ್ಟಿಗೆ ಸೇರಿ ಒಂದು ಅಪರೂಪದ ಯೋಗವನ್ನು ರೂಪಿಸುತ್ತಿದ್ದಾರೆ. ಇದು ಜನರ ಕೆಲ ರಾಶಿಗಳ ಜನರ ಭವಿಷ್ಯವನ್ನೇ ಬದಲಾಯಿಸಲಿದೆ ಮತ್ತು ಅವರ ಜೀವನದಲ್ಲಿ ಅಪಾರ ಹಣದ ಹೊಳೆಯನ್ನೇ ಹರಿಸಲಿದೆ.   

Written by - Nitin Tabib | Last Updated : Aug 27, 2023, 05:49 PM IST
  • ಈ ಬಾರಿ ರಕ್ಷಾ ಬಂಧನದಂದು ಶನಿ ಮತ್ತು ಗುರು ಒಟ್ಟಿಗೆ ಬಂದು ಒಂದು ಅಪರೂಪದ ಕಾಕತಾಳೀಯ ಸೃಷ್ಟಿಯಾಗುತ್ತಿದೆ.
  • ರಕ್ಷಾ ಬಂಧನದಂತಹ ಪ್ರಮುಖ ದಿನದಂದು ಶನಿ ಗುರುವಿನ ಹಿಮ್ಮುಖ ಚಲನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ.
  • ಇದಲ್ಲದೇ ರಕ್ಷಾ ಬಂಧನದ ದಿನ ಸಿಂಹರಾಶಿಯಲ್ಲಿ ಸೂರ್ಯ-ಬುಧ ಬುಧಾದಿತ್ಯ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
Rakshabandhan 2023 ದಿನ ಶನಿ ಗುರುವಿನ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಧನಲಕ್ಷ್ಮಿಯ ಅಪಾರ ಕೃಪಾಶೀರ್ವಾದ! title=

ಬೆಂಗಳೂರು: ರಕ್ಷಾಬಂಧನ ಮಹಾಪರ್ವವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ.. ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧಕ್ಕೆ ಈ ಹಬ್ಬವು ಬಹಳ ಮುಖ್ಯವಾಗಿದೆ. ಈ ಬಾರಿ ರಕ್ಷಾಬಂಧನ ಹಬ್ಬವನ್ನು 2 ದಿನಗಳ ಕಾಲ ಆಚರಿಸಲಾಗುತ್ತಿದೆ. ರಕ್ಷಾಬಂಧನವನ್ನು ಆಗಸ್ಟ್ 30 ಮತ್ತು 31 ರಂದು ಆಚರಿಸಲಾಗುತ್ತದೆ. ಈ ಬಾರಿ ರಕ್ಷಾ ಬಂಧನದಂದು ಶನಿ ಮತ್ತು ಗುರು ಒಟ್ಟಿಗೆ ಬಂದು ಒಂದು ಅಪರೂಪದ ಕಾಕತಾಳೀಯ ಸೃಷ್ಟಿಯಾಗುತ್ತಿದೆ. ರಕ್ಷಾ ಬಂಧನದಂತಹ ಪ್ರಮುಖ ದಿನದಂದು ಶನಿ ಗುರುವಿನ ಹಿಮ್ಮುಖ ಚಲನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ.  ಇದಲ್ಲದೇ ರಕ್ಷಾ ಬಂಧನದ ದಿನ ಸಿಂಹರಾಶಿಯಲ್ಲಿ ಸೂರ್ಯ-ಬುಧ ಬುಧಾದಿತ್ಯ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಈ ಎಲ್ಲಾ ಯೋಗಗಳು ಒಟ್ಟಾಗಿ 3 ರಾಶಿಗಳ ಜನರ ಅದೃಷ್ಟವನ್ನು ಬೆಳಗಳಿವೆ. ರಕ್ಷಾ ಬಂಧನವು ಯಾವ ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಈ ರಾಶಿಗಳ ಅದೃಷ್ಟವು ರಕ್ಷಾ ಬಂಧನದ ದಿನ ಬೆಳಗಲಿದೆ
ಮಿಥುನ ರಾಶಿ: ಈ ಬಾರಿಯ ರಕ್ಷಾಬಂಧನ ಹಬ್ಬ ಮಿಥುನ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಈ ಜನರ ಆದಾಯ ಹೆಚ್ಚಾಗಲಿದೆ. ಹಣದ ಬಿಕ್ಕಟ್ಟು ಅಂತ್ಯವಾಗಲಿದೆ. ನಿಮ್ಮ ಉಳಿತಾಯ ಹೆಚ್ಚಾಗಲಿದೆ. ನಿವೇಶನ ಆಸ್ತಿ-ಪಾಸ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿಗೆ ಸಂತೋಷ ಸಿಗುವ ಕೆಲ ಒಳ್ಳೆಯ ಸುದ್ದಿಗಳು ನಿಮಗೆ ಪ್ರಾಪ್ತಿಯಾಗಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಂಡುಬರಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ.

ಸಿಂಹ ರಾಶಿ : ರಕ್ಷಾಬಂಧನದಂದು ನಿರ್ಮಾಣಗೊಳ್ಳುವ ಈ ಯೋಗಗಳು ಸಿಂಹ ರಾಶಿಯವರಿಗೆ ಸಾಕಷ್ಟು  ಲಾಭಗಳನ್ನು ನೀಡಲಿದೆ. ಇದರಿಂದ ನಿಮ್ಮ ಅದೃಷ್ಟ ಬೆಳಗಲಿದೆ. ಲಕ್ಷ್ಮಿಯ ಆಶೀರ್ವಾದದಿಂದ ಧನಸಂಪತ್ತು ಪ್ರಾಪ್ತಿಯಾಗಲಿದೆ. ಸ್ಥಗಿತಗೊಂಡ ಹಣ ಸಿಗಲಿದೆ. ಹೂಡಿಕೆಯಿಂದ ಲಾಭ ಪಡೆಯಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಆರೋಗ್ಯ ಉತ್ತಮವಾಗಿರುತ್ತದೆ. ಸಂಬಂಧಗಳಿಗೆ ಸಂಬಂಧಿಸಿದ ಸಮಸ್ಯೆ ದೂರಾಗಲಿವೆ. ನೀವು ನಿಮ್ಮ ಸ್ಥಾನಮಾನವನ್ನು ಬಳಸುವಿರಿ.

ಇದನ್ನೂ ಓದಿ-ರಕ್ಷಾಬಂಧನದ ದಿನ ಪೂರ್ವಾಫಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಹಣದ ಸುರಿಮಳೆ!

ಧನು ರಾಶಿ: ರಕ್ಷಾ ಬಂಧನದಂದು ನಿರ್ಮಾಣಗೊಳ್ಳುತ್ತಿರುವ ಈ ಗ್ರಹಗಳ ಅಪರೂಪದ ಸಂಯೋಜನೆ ಧನು ರಾಶಿಯವರಿಗೆ ವರದಾನಕ್ಕೆ ಸಮಾನ ಎಂದು ಹೇಳಿದರೆ ತಪ್ಪಾಗಲಾರದು. ಈ ಜನರು ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸಲಿದ್ದಾರೆ. ಘನತೆ-ಗೌರವ ಹೆಚ್ಚಾಗಿ ಸ್ಥಾನಮಾನ-ಪ್ರತಿಷ್ಠೆ ಸಿಗಲಿದೆ. ಆದಾಯ ಹೆಚ್ಚಾಗಲಿದೆ. ಹಣದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಾಲ ಸಂಗಾತಿ ಜೊತೆಗೆ ಸಂಬಂಧ ಚೆನ್ನಾಗಿರಲಿದೆ. ನೀವು ಪ್ರಯಾಣಕ್ಕೆ ಹೋಗಬಹುದು.

ಇದನ್ನೂ ಓದಿ-ವಕ್ರ ಭಾವದಲ್ಲಿ 'ಮಹಾ ವಿಪರೀತ ರಾಜಯೋಗ' ರೂಪಿಸಿದ ಗ್ರಹಗಳ ರಾಜಕುಮಾರ, ಈ ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News