ಎಷ್ಟೇ ಕಷ್ಟ ಪಟ್ಟು ದುಡಿದರೂ ದುಡ್ಡು ಉಳಿಯುವುದಿಲ್ಲವೇ? ಬುಧವಾರ ತುಪ್ಪ ಮತ್ತು ಬೆಲ್ಲ ತೆಗೆದುಕೊಂಡು ಹೀಗೆ ಮಾಡಿ !ಕೂಡಿ ಬರುವುದು ಧನಯೋಗ

ಬುಧವಾರ ಗಣಪತಿಗೆ ಸಮರ್ಪಿತವಾದ ದಿನ. ಈ ದಿನ ಗಣಪತಿಯನ್ನು ಪೂಜಿಸುವುದರ ಜೊತೆಗೆ ಕೆಲವೊಂದು ಪರಿಹಾರಗಳನ್ನು ತೆಗೆದುಕೊಂಡರೆ ಎಲ್ಲಾ ರೀತಿಯ ಬಾಧೆಗಳಿಂದ ಮುಕ್ತಿ ದೊರೆಯುತ್ತದೆ. 

Written by - Ranjitha R K | Last Updated : Aug 28, 2024, 02:19 PM IST
  • ಸನಾತನ ಧರ್ಮದಲ್ಲಿ ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ.
  • ಹಿಂದೂ ಧರ್ಮಗ್ರಂಥಗಳಲ್ಲಿ ಗಣೇಶನಿಗೆ ಮೊದಲ ಪೂಜೆ
  • ಗಣೇಶನ ವಿಶೇಷ ಪೂಜೆ ಮತ್ತು ಪರಿಹಾರಗಳನ್ನು ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ
ಎಷ್ಟೇ ಕಷ್ಟ ಪಟ್ಟು ದುಡಿದರೂ ದುಡ್ಡು ಉಳಿಯುವುದಿಲ್ಲವೇ? ಬುಧವಾರ ತುಪ್ಪ ಮತ್ತು ಬೆಲ್ಲ ತೆಗೆದುಕೊಂಡು ಹೀಗೆ ಮಾಡಿ !ಕೂಡಿ ಬರುವುದು ಧನಯೋಗ    title=

ಬೆಂಗಳೂರು : ಸನಾತನ ಧರ್ಮದಲ್ಲಿ ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನದಂದು ಗಣೇಶನ ವಿಶೇಷ ಪೂಜೆ ಮತ್ತು ಜ್ಯೋತಿಷ್ಯ ಪರಿಹಾರಗಳನ್ನು ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ ಎನ್ನುವುದು ನಂಬಿಕೆ.ಹಿಂದೂ ಧರ್ಮಗ್ರಂಥಗಳಲ್ಲಿ ಗಣೇಶನಿಗೆ ಮೊದಲ ಪೂಜೆ. ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಗಣೇಶನನ್ನು ಸ್ತುತಿಸಿದರೆ ಆ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬುಧವಾರದಂದು ಗಣಪತಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ವ್ಯಕ್ತಿಯನ್ನು ಎಲ್ಲಾ ತೊಂದರೆಗಳಿಂದ ಮುಕ್ತಗೊಳಿಸುತ್ತದೆ. 

ಇದನ್ನೂ ಓದಿ : ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಒಂದೇ ಸಮನೆ ಹೆಚ್ಚುತ್ತಾ ಹೋಗುವುದು ಸಿರಿ ಸಂಪತ್ತು!ಒಲಿದು ಬರುವುದು ನಿರೀಕ್ಷೆಗೂ ಮೀರಿದ ಯಶಸ್ಸು

ಬುಧವಾರದ ಪವಾಡ ಪರಿಹಾರ : 
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬುಧವಾರದಂದು ಗಣಪತಿಯನ್ನು ಪೂಜಿಸುವಾಗ ಗರಿಕೆ ಹುಲ್ಲನ್ನು ಬಳಸಬೇಕು.ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಿಸುವುದರಿಂದ ಆತ  ಪ್ರಸನ್ನನಾಗುವುದರೊಂದಿಗೆ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.  

- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬುಧವಾರದಂದು ಮನೆಯಲ್ಲಿ ಶಮಿ ಗಿಡಗಳನ್ನು ನೆಡುವುದು ಮಂಗಳಕರ.ಶಮಿ ಗಣೇಶನಿಗೆ ಪ್ರಿಯವಾದ ಗಿಡ. ಈ ಗಿಡ ಬೆಳೆದಂತೆ ಮನೆಯಲ್ಲಿ ಸಂಪತ್ತು ಕೂಡಾ ಹೆಚ್ಚುತ್ತದೆ. 

- ಬುಧವಾರದಂದು ಗಣೇಶನಿಗೆ ಬೆಲ್ಲ ಮತ್ತು ತುಪ್ಪವನ್ನು ಅರ್ಪಿಸಬೇಕು.ಈ ಪರಿಹಾರವನ್ನು ತ್ವರಿತವಾಗಿ ಮಾಡುವುದರಿಂದ ಗಣಪತಿ ಸಂತುಷ್ಟನಾಗುತ್ತಾನೆ. ಇದರೊಂದಿಗೆ ಜೀವನದಲ್ಲಿ ಎದುರಾಗುವ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುವುದು. 

ಇದನ್ನೂ ಓದಿ:  ಗುರುವಿನ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ದುಪ್ಪಟ್ಟು ಆದಾಯ

-ಯಾವುದೇ ಕೆಲಸವು ದೀರ್ಘ ಸಮಯದವರೆಗೆ ಪೂರ್ಣಗೊಳ್ಳದೆ ಬಾಕಿ ಉಳಿದಿದ್ದರೆ, ಬುಧವಾರ ಮನೆಯಿಂದ ಹೊರಡುವಾಗ ಹಸಿರು ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.ಮನೆಯಿಂದ ಹೊರಡುವ ಮೊದಲು ಸ್ವಲ್ಪ ಸೊಂಪು ತಿನ್ನಿ.ಇದು ಎಲ್ಲಾ ರೀತಿಯ ಕಾರ್ಯಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. 

(ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News