ಯಾವಾಗ ಗೋಚರಿಸುವುದು ಮುಂದಿನ ಸೂರ್ಯ ಗ್ರಹಣ? ಯಾರ ಮೇಲೆ ಹೆಚ್ಚಿನ ಪ್ರಭಾವ ?

ವರ್ಷದ ಎರಡನೇ ಸೂರ್ಯಗ್ರಹಣ ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಸಂಭವಿಸುತ್ತದೆ. ಅದರ ಶುಭ ಅಥವಾ ಅಶುಭ ಪರಿಣಾಮವು ರಾಶಿಯವರ ಮೇಲೆ ಬೀಳುತ್ತದೆ. ಅದಕ್ಕಾಗಿಯೇ ಸೂರ್ಯಗ್ರಹಣದ ಸಮಯದಲ್ಲಿ ಕೆಲವರು ಎಚ್ಚರದಿಂದಿರಬೇಕು. 

Written by - Ranjitha R K | Last Updated : May 19, 2023, 02:53 PM IST
  • ಭಾರತದಲ್ಲಿ ಮುಂದಿನ ಸೂರ್ಯಗ್ರಹಣದ ಪರಿಣಾಮ
  • ಕೊನೆಯ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಗೋಚರ
  • ಕನ್ಯಾರಾಶಿಯಲ್ಲಿ ಗೋಚರಿಸಲಿದೆ ಸೂರ್ಯಗ್ರಹಣ
ಯಾವಾಗ ಗೋಚರಿಸುವುದು ಮುಂದಿನ ಸೂರ್ಯ ಗ್ರಹಣ? ಯಾರ ಮೇಲೆ ಹೆಚ್ಚಿನ ಪ್ರಭಾವ ?  title=

ಬೆಂಗಳೂರು : ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಸೂತಕ ಕಾಲವು ಗ್ರಹಣಕ್ಕೆ ಸ್ವಲ್ಪ ಮೊದಲು ಪ್ರಾರಂಭವಾಗುತ್ತದೆ. 2023ರಲ್ಲಿ ಒಟ್ಟು 4 ಸೂರ್ಯಗ್ರಹಣಗಳು ಮತ್ತು ಚಂದ್ರಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ 2 ಸೂರ್ಯಗ್ರಹಣ ಮತ್ತು 2 ಚಂದ್ರಗ್ರಹಣ. ಅದರಲ್ಲಿ ಒಂದು ಸೂರ್ಯಗ್ರಹಣ ಮತ್ತು ಒಂದು ಚಂದ್ರಗ್ರಹಣ ಈಗಾಗಲೇ ಸಂಭವಿಸಿದೆ. ಇನ್ನೊಂದು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಇನ್ನೂ ಗೋಚರಿಸಬೇಕಿದೆ. ವರ್ಷದ ಮುಂದಿನ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ ಮತ್ತು ಭಾರತದಲ್ಲಿ ಅದರ ಪರಿಣಾಮ ಏನು ಎನ್ನುವ ಮಾಹಿತಿ ಇಲ್ಲಿದೆ. 

ಭಾರತದಲ್ಲಿ ಮುಂದಿನ ಸೂರ್ಯಗ್ರಹಣದ ಪರಿಣಾಮ :
ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣದ ಘಟನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್  20 ,2023 ರಂದು ಸಂಭವಿಸಿತ್ತು. ಈಗ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವು ಅಕ್ಟೋಬರ್  14 ರಂದು ಗೋಚರಿಸಲಿದೆ. ಈ ಸೂರ್ಯಗ್ರಹಣವು ಅಶ್ವಿನಿ ಮಾಸದ ಅಮಾವಾಸ್ಯೆಯಂದು ಸಂಭವಿಸುತ್ತದೆ. ಇದು ಕನಕನ  ಮತ್ತು ಕಂಕಣಾಕೃತಿ ಸೂರ್ಯಗ್ರಹಣವಾಗಿರುತ್ತದೆ. ಭಾರತದಲ್ಲಿ ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 14, 2023 ರಂದು ಶನಿವಾರ ರಾತ್ರಿ 08:34 ಕ್ಕೆ ಪ್ರಾರಂಭವಾಗಿ ಮಧ್ಯರಾತ್ರಿ 02:25 ಕ್ಕೆ ಕೊನೆಗೊಳ್ಳುತ್ತದೆ. 

ಇದನ್ನೂ ಓದಿ : ಇಂದು ಜ್ಯೇಷ್ಠ ಅಮಾವಾಸ್ಯೆ: ಈ ದಿನ ರಾತ್ರಿ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಲೇಬಾರದು

ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಅದರ ಸೂತಕ ಅವಧಿಯೂ ಮಾನ್ಯವಾಗುವುದಿಲ್ಲ. ವರ್ಷದ ಎರಡನೇ ಸೂರ್ಯಗ್ರಹಣ ಬ್ರೆಜಿಲ್, ಪರಾಗ್ವೆ, ಜಮೈಕಾ, ಹೈಟಿ, ಅಮೇರಿಕಾ, ಚಿಲಿ, ಡೊಮಿನಿಕಾ, ಬಹಾಮಾಸ್, ಕೆನಡಾ, ಅರ್ಜೆಂಟೀನಾ, ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾ, ಬಾರ್ಬಡೋಸ್, ಆಂಟಿಗುವಾ ಮುಂತಾದ ಪ್ರದೇಶಗಳಲ್ಲಿ ಗೋಚರಿಸುತ್ತದೆ. 

ಕನ್ಯಾರಾಶಿಯಲ್ಲಿ ಗೋಚರಿಸಲಿದೆ ಸೂರ್ಯಗ್ರಹಣ :  
ವರ್ಷದ ಎರಡನೇ ಸೂರ್ಯಗ್ರಹಣ ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಸಂಭವಿಸುತ್ತದೆ. ಅದರ ಶುಭ ಅಥವಾ ಅಶುಭ ಪರಿಣಾಮವು ರಾಶಿಯವರ ಮೇಲೆ ಬೀಳುತ್ತದೆ. ಅದಕ್ಕಾಗಿಯೇ ಸೂರ್ಯಗ್ರಹಣದ ಸಮಯದಲ್ಲಿ ಕೆಲವರು ಎಚ್ಚರದಿಂದಿರಬೇಕು. ಸೂರ್ಯಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.  

ಇದನ್ನೂ ಓದಿ : ಶನಿ ಜಯಂತಿಯಂದು ಅದ್ಭುತ ರಾಜಯೋಗಗಳ ನಿರ್ಮಾಣ: ಇಂದಿನಿಂದ ಇವರ ಬಾಳೇ ಬಂಗಾರ

ಕಂಕಣಾಕೃತಿ ಸೂರ್ಯಗ್ರಹಣ :  
ಸೂರ್ಯ ಮತ್ತು ಭೂಮಿಯ ಮಧ್ಯ ಚಂದ್ರ ಬಂದು ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆ ನೆರಳು ಯಾವ ಭಾಗದಲ್ಲಿ ಬೀಳುತ್ತದೆಯೋ, ಅಷ್ಟು ಕಾಲ ಚಂದ್ರನ ನೆರಳಿನಿಂದಾಗಿ  ಸೂರ್ಯಮುಚ್ಚಿ ಹೋಗುತ್ತಾನೆ.  ಈ ರೀತಿ ಸೂರ್ಯಬಿಂಬ ಸಂಪೂರ್ಣವಾಗಿ ಕಾಣದಿದ್ದರೆ ಅದು ‘ಖಗ್ರಾಸ ಸೂರ್ಯಗ್ರಹಣ’ ಮತ್ತು ಸೂರ್ಯಬಿಂಬದ ಕೆಲವಷ್ಟೇ ಭಾಗ ಮುಚ್ಚಿದರೆ, ಅದು ‘ಖಂಡಗ್ರಾಸ ಸೂರ್ಯಗ್ರಹಣ’ಎಂದು ಕರೆಯಲ್ಪಡುತ್ತದೆ.   ಸೂರ್ಯಬಿಂಬ ಕಂಕಣಾಕೃತಿ  ಕಂಡರೆ ಆ ಗ್ರಹಣಕ್ಕೆ ಕಂಕಣಾಕೃತಿ ಗ್ರಹಣ  ಎಂದು ಕರೆಯಲಾಗುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News