Sachin Tendulkar : ಈ ಆಟಗಾರನನ್ನು ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ ಕಾಮೆಂಟೇಟರ್

ಭಾರತದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಅಜಯ್ ಜಡೇಜಾ ಅವರು ಭಾರತದ ಲೆಜೆಂಡರಿ ಸ್ಟಾರ್ ಶಿಖರ್ ಧವನ್ ಅವರನ್ನು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ್ದಾರೆ.

Written by - Channabasava A Kashinakunti | Last Updated : Aug 20, 2022, 12:41 PM IST
  • ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಲೆಜೆಂಡ್
  • ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಅಜಯ್ ಜಡೇಜಾ
  • ಭಾರತದ ಲೆಜೆಂಡರಿ ಸ್ಟಾರ್ ಶಿಖರ್ ಧವನ್
Sachin Tendulkar : ಈ ಆಟಗಾರನನ್ನು ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ ಕಾಮೆಂಟೇಟರ್ title=

Shikhar Dhawan : ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಲೆಜೆಂಡ್ ಎಂದು ಕರೆಯಲಾಗುತ್ತದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾದ ಆಟಗಾರ. ಭಾರತದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಅಜಯ್ ಜಡೇಜಾ ಅವರು ಭಾರತದ ಲೆಜೆಂಡರಿ ಸ್ಟಾರ್ ಶಿಖರ್ ಧವನ್ ಅವರನ್ನು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಗೆ ಹೋಲಿಸಿದ್ದಾರೆ. ಧವನ್ ತಮ್ಮ ಬ್ಯಾಟಿಂಗ್ ವಿಧಾನದಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.

ಜಡೇಜಾ ಈ ಹೇಳಿದ್ದು ಹೀಗೆ

ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, 'ನೀವು ಹಿಡಿಯಬೇಕು. ಕೆಲವೊಮ್ಮೆ ಹಿರಿಯ ಆಟಗಾರರಾಗಿ ನೀವು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತೀರಿ, ನೀವು ಇಷ್ಟು ದಿನ ಇದ್ದೀರಿ. ನೀವು ಒಂದು ನಿರ್ದಿಷ್ಟ ಸ್ಥಳದಲ್ಲಿ ಫಿಕ್ಸ್ ಆಗುತ್ತೀರಿ.' ಕಳೆದ ಕೆಲವು ವರ್ಷಗಳಲ್ಲಿ, ಧವನ್ ತಮ್ಮ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ : “ಸಚಿನ್ ಗೆ ಎಲ್ಲವೂ ಗೊತ್ತು, ಆದರೆ..” ಆರ್ಥಿಕ ಸಂಕಷ್ಟದ ಬಗ್ಗೆ ಮೌನ ಮುರಿದ ವಿನೋದ್ ಕಾಂಬ್ಳಿ

ಕಾಲಕ್ಕೆ ತಕ್ಕಂತೆ ಬದಲಾವಣೆ

ಮುಂದಿನ ಪೀಳಿಗೆ ಬಂದಾಗ ಅದು ನಿಮ್ಮನ್ನು ತಳ್ಳಲು ಪ್ರಾರಂಭಿಸುತ್ತದೆ ಎಂದು ಅಜಯ್ ಜಡೇಜಾ ಹೇಳಿದರು. ಮೊದಲ ಬಾರಿಗೆ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಬಂದಾಗ ಮತ್ತು ಮುಂದಿನ ಬದಲಾವಣೆಯು ಯುವರಾಜ್, ಸೆಹ್ವಾಗ್ ಮತ್ತು ಧೋನಿ ಬಂದಾಗ ಮತ್ತು ನೀವು ಶಿಖರ್ ಧವನ್ ಅವರೊಂದಿಗೆ ಅದೇ ರೀತಿ ನೋಡಬಹುದು ಎಂದರು.

ದಾಖಲೆ ಬರೆದ ಶಿಖರ್ ಧವನ್ 

ಶಿಖರ್ ಧವನ್ ಭಾರತ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ದೊಡ್ಡ ದಾಖಲೆ ಬರೆದಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 6500 ರನ್ ಪೂರೈಸಿದರು. 6000ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ 10ನೇ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ. ಈ ಅವಧಿಯಲ್ಲಿ ಅವರು 38 ಅರ್ಧ ಶತಕ ಮತ್ತು 17 ಶತಕಗಳನ್ನು ಗಳಿಸಿದ್ದಾರೆ. ಶಿಖರ್ ಧವನ್ ಟೆಸ್ಟ್ ಮತ್ತು ಟಿ20 ತಂಡದಿಂದ ಬಹಳ ದಿನಗಳಿಂದ ಹೊರಗುಳಿದಿದ್ದರು. ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಇದನ್ನೂ ಓದಿ : ಆಗಸ್ಟ್ 20ಕ್ಕೆ ಮುಂಬೈ ಹಾಫ್ ಮ್ಯಾರಥಾನ್: ಸಚಿನ್ ತೆಂಡುಲ್ಕರ್‌ರಿಂದ ಚಾಲನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News