Gautam Gambhir : ಧೋನಿ-ಕೊಹ್ಲಿಗಿಂತ ಅಪಾಯಕಾರಿ ಈ ಆಟಗಾರನ ಬ್ಯಾಟಿಂಗ್ : ಗೌತಮ್ ಗಂಭೀರ್

ಈ ಆಟಗಾರ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Mar 10, 2022, 04:39 PM IST
  • ಮಾರ್ಚ್ 26 ರಿಂದ ಐಪಿಎಲ್ ಆರಂಭವಾಗಲಿದೆ
  • ಗೌತಮ್ ಗಂಭೀರ್ ನಿದ್ದೆ ಕೆಡಿಸಿದ ಈ ಆಟಗಾರ
  • ಮುಂಬೈ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ
Gautam Gambhir : ಧೋನಿ-ಕೊಹ್ಲಿಗಿಂತ ಅಪಾಯಕಾರಿ ಈ ಆಟಗಾರನ ಬ್ಯಾಟಿಂಗ್ : ಗೌತಮ್ ಗಂಭೀರ್ title=

ನವದೆಹಲಿ : ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಸಧ್ಯಇವರ ಬೌಲಿಂಗ್‌ನಲ್ಲಿ ಕೆಲವು ಅದ್ಭುತ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ, ಆದರೆ ಈಗ ಗೌತಮ್ ಗಂಭೀರ್ ಅವರಿಗೆ ಕಣ್ಣಿಗೆ ನಿದ್ದೆಯಿಲ್ಲದ ಟ್ರೇನಿಂಗ್ ನೀಡಲಾಗುತ್ತಿದೆ. ಈ ಆಟಗಾರ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿಗಿಂತ ಅಪಾಯಕಾರಿ ಬ್ಯಾಟ್ಸ್‌ಮನ್ ಎಂದು ಹೇಳಿದ್ದಾರೆ.

ಈ ಆಟಗಾರನಿಗೆ ಅಪಾಯ..!

ಇದೀಗ ಗೌತಮ್ ಗಂಭೀರ್(Gautam Gambhir) ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ನಾಯಕನಾಗಿ ರೋಹಿತ್ ಶರ್ಮಾ ನಿದ್ದೆಯಿಲ್ಲದ ಹಗಲಿರುಳು ಟೀಂ ಇಂಡಿಯಾಗಾಗಿ ಕೆಲಸ ಮಾಡುತ್ತಿರುವ ಏಕೈಕ ಆಟಗಾರ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಕ್ರಿಸ್‌ ಗೇಲ್‌ ಆಗಲಿ, ಎಬಿ ಡಿವಿಲಿಯರ್ಸ್‌ ಆಗಲಿ ಅಥವಾ ಯಾರೇ ಆಗಲಿ ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ಭಯವಿಲ್ಲ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ : ರೋಹಿತ್ ಶರ್ಮಾ ಹೇಳಿಕೆಗೆ ತಲೆ ಕೆಡಿಸಿಕೊಂಡ ಪಾಕಿಸ್ತಾನದ ಆಟಗಾರನ ಬಾಯಿಯಿಂದ ಬಂತು ಇಂಥಹ ಮಾತು

 ಅದ್ಭುತ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ

ರೋಹಿತ್ ಶರ್ಮಾ(Rohit Sharma) ಐಪಿಎಲ್ 2013 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವವಹಿಸಿದರು. ಅದರ ನಂತರ ಅವರು ಈ ಫ್ರಾಂಚೈಸಿಯ ಅದೃಷ್ಟವನ್ನೆ ಬದಲಾಯಿಸಿದರು. ಅವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್‌ಗಳು ಬೆರಳು ಕಚ್ಚಿಕೊಂಡರು. ರೋಹಿತ್ ಯಾವುದೇ ಬೌಲರ್ ನನ್ನ ಕೂಡ ಮಣಿಸಿಯುವ ಶಕ್ತಿ ರೋಹಿತ್ ಬಳಿ ಇದೆ. ಯಾವುದೇ ಪಿಚ್ ನಲ್ಲಿ ರನ್ ಗಳಿಸುವ ಸಾಮರ್ಥ್ಯ ಅವರಲ್ಲಿದೆ. ರೋಹಿತ್ ಆರಂಭದಲ್ಲಿ ಸಾಕಷ್ಟು ತಾಳ್ಮೆಯಿಂದ ತಮ್ಮ ಇನ್ನಿಂಗ್ಸ್ ಅನ್ನು ಶುರು ಮಾಡುತ್ತಾರೆ ಮತ್ತು ಪಂದ್ಯವನ್ನು ಸಂಪೂರ್ಣವಾಗಿ ಒಂದು ಬದಿಗೆ ತಿರುಗಿಸಲು ಮಧ್ಯಮ ಓವರ್‌ಗಳಿಂದ ಕೊನೆಯ ಓವರ್‌ಗಳಿಗೆ ತಮ್ಮ ಗೇರ್ ಅನ್ನು ಬದಲಾಯಿಸುತ್ತಾರೆ. 

ಕೆಕೆಆರ್ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ

ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗಂಭೀರ್ ತಮ್ಮ ಅದ್ಭುತ ನಾಯಕತ್ವದ ಮನಸ್ಸಿನಿಂದ ಕೆಕೆಆರ್ ತಂಡಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಅವರು ಬೌಲಿಂಗ್‌ನಲ್ಲಿ ಉತ್ತಮ ಬದಲಾವಣೆಗಳನ್ನು ಮಾಡುತ್ತಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಪ್ರಸ್ತುತ, ಅವರು ಐಪಿಎಲ್‌ನಿಂದ ಹೊಸದಾಗಿ ಸೇರ್ಪಡೆಗೊಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿದ್ದಾರೆ.

ಇದನ್ನೂ ಓದಿ : Team India: ಡೇ-ನೈಟ್ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಕ್ಕೆ ಮಾರಣಾಂತಿಕ ಬೌಲರ್ ಎಂಟ್ರಿ! ಶ್ರೀಲಂಕಾ ಪಾಳಯದಲ್ಲಿ ಸಂಚಲನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News