IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?

T20 World Cup 2024: ಟಿ20 ವಿಶ್ವಕಪ್‌ 2024ರ  ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22, ಶನಿವಾರ ಆಂಟಿಗುವಾದ ನಾರ್ತ್‌ ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.   

Written by - Zee Kannada News Desk | Last Updated : Jun 22, 2024, 08:31 AM IST
  • ಟಿ 20 ವಿಶ್ವಕಪ್‌ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22 ರಂದು ನಡೆಯಲಿದೆ.
  • ಜೂನ್‌ 21, ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಲೂ ಬಾಯ್ಸ್‌ ಪಡೆ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
  • ಆಂಟಿಗುವಾದ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವಾಮನ ಇಲಾಕೆ ತಿಳಿಸಿದೆ.
IND vs BAN: ಭಾರತ vs  ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..? title=

T20 World Cup 2024: ಟಿ20 ವಿಶ್ವಕಪ್‌ 2024ರ (T20 World Cup 2024) ಗುಂಪು ಹಂತದ ಭಾರತ(India) vs ಬಾಂಗ್ಲಾದೇಶ(Bangladesh) ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22, ಶನಿವಾರ ಆಂಟಿಗುವಾದ ನಾರ್ತ್‌ ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌( Sir Vivian Richards Stadium ) ಕ್ರೀಡಾಂಗಣದಲ್ಲಿ ನಡೆಯಲಿದೆ. 

ಜೂನ್‌ 21, ಶುಕ್ರವಾರ ನಡೆದ ಪಂದ್ಯದಲ್ಲಿ ಬ್ಲೂ ಬಾಯ್ಸ್‌ ಪಡೆ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಮೊದಲ ಸೂಪರ್‌ 8 ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ತಂಡವನ್ನು 47 ರನ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್‌ನತ್ತ ಹೆಜ್ಜೆ ಇಟ್ಟಿದೆ.

ಇದೀಗ ಎರಡನೇ ಪಂದ್ಯ ಆಂಟಿಗುವಾದಲ್ಲಿ ನಡೆಯಲಿದ್ದು ಮಳೆಯರಾಯನು ಪಂದ್ಯಕ್ಕೆ ಸಾಕ್ಷಿಯಾಗುತ್ತಾನಾ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಹಾಗಾದರೆ ಹೇಗಿರಲಿದೆ ಆಂಟಿಗುವಾದ ಹವಾಮಾನ? ಮುಂದೆ ಓದಿ...

ಇದನ್ನೂ ಓದಿ:  T20 World Cup 2024: ವಿಕೆಟ್‌ ಕೀಪಿಂಗ್‌ನಲ್ಲಿ ಕಿಂಗ್‌ ಎನಿಸಿಕೊಂಡ ರಿಷಬ್‌ ಪಂತ್‌..!

ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆಂಟಿಗುವಾದ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವಾಮನ ಇಲಾಕೆ ತಿಳಿಸಿದೆ. ಅಕ್ಯುವೆದರ್ ವರದಿಯ ಪ್ರಕಾರ ಶೇಕಡಾ 40 ರಷ್ಟು ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್‌ ಕೀಪರ್‌), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ

ಇದನ್ನೂ ಓದಿ: T20 World Cup 2024: ವಿಕೆಟ್‌ ಕೀಪಿಂಗ್‌ನಲ್ಲಿ ಕಿಂಗ್‌ ಎನಿಸಿಕೊಂಡ ರಿಷಬ್‌ ಪಂತ್‌..!

ಬಾಂಗ್ಲಾದೇಶ ಪ್ಲೇಯಿಂಗ್ XI: ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ , ಶಕೀಬ್ ಅಲ್ ಹಸನ್, ತೌಹಿದ್ ಹೃದಯೋಯ್, ಮಹ್ಮುದುಲ್ಲಾ, ಮಹೇದಿ ಹಸನ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ತಂಝೀಮ್ ಹಸನ್ ಸಾಕಿಬ್, ರಹ್ಮಾನ್ ಮುಸ್ತಾಫ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News