MS Dhoni: ಮೈದಾನದಲ್ಲಿಯೇ ರಕ್ತ ಉಗುಳಿದ ಎಂಎಸ್ ಧೋನಿ! ಏನಾಯ್ತು ಕ್ಯಾಪ್ಟನ್ ಕೂಲ್’ಗೆ?

MS Dhoni spit blood: ಆದರೆ ಟೀಂ ಇಂಡಿಯಾದಲ್ಲಿರುವಾಗ ಒಂದು ಘಟನೆ ಸಂಭವಿಸಿತ್ತು. ಅದು ಎಂ ಎಸ್ ಧೋನಿ ಆಡಿದ ಕೊನೆಯ ವಿಶ್ವಕಪ್ ಪಂದ್ಯದ ಕ್ಷಣ. ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಬೆರಳಿಗೆ ಗಾಯವಾಗಿತ್ತು. ಅಷ್ಟೇ ಅಲ್ಲ ರಕ್ತ ಕೂಡ ಸುರಿಯಲಾರಂಭಿಸಿತು.

Written by - Bhavishya Shetty | Last Updated : Mar 8, 2023, 04:25 PM IST
    • ಅದು ಎಂ ಎಸ್ ಧೋನಿ ಆಡಿದ ಕೊನೆಯ ವಿಶ್ವಕಪ್ ಪಂದ್ಯದ ಕ್ಷಣ.
    • ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಬೆರಳಿಗೆ ಗಾಯವಾಗಿತ್ತು.
    • ತಕ್ಷಣವೇ ಧೋನಿ ಹೆಬ್ಬೆರಳನ್ನು ಬಾಯಲ್ಲಿಟ್ಟುಕೊಂಡು ರಕ್ತವನ್ನು ಕೊಂಚ ಹೀರಿ ಮೈದಾನದಲ್ಲಿ ಉಗುಳಿದರು.
MS Dhoni: ಮೈದಾನದಲ್ಲಿಯೇ ರಕ್ತ ಉಗುಳಿದ ಎಂಎಸ್ ಧೋನಿ! ಏನಾಯ್ತು ಕ್ಯಾಪ್ಟನ್ ಕೂಲ್’ಗೆ? title=
MS Dhoni

MS Dhoni spit blood: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇನ್ನು ಕ್ರಿಕೆಟಿಗರಾಗಿ ಅವರ ಯಶಸ್ವಿ ವೃತ್ತಿಜೀವನದ ಹೊರತಾಗಿ, ಎಂಎಸ್ ಧೋನಿ ಹಲವಾರು ಉದ್ಯಮಗಳಲ್ಲಿ ಯಶಸ್ವಿಯಾಗಿದ್ದಾರೆ. ಇದುವೇ ಅವರ ಆದಾಯದ ಮೂಲವನ್ನು ಅಭಿವೃದ್ಧಿಗೊಳಿಸಿದೆ ಎನ್ನಬಹುದು.

ಇದನ್ನೂ ಓದಿ: MS Dhoni: ಎಂಎಸ್ ಧೋನಿ ಇನ್’ಸ್ಟಾಗ್ರಾಂನಲ್ಲಿ ಫಾಲೋ ಮಾಡೋದು ಈ 4 ಜನರನ್ನು ಮಾತ್ರ… ಅವರು ಯಾರಂದ್ರೆ..!

ಆದರೆ ಟೀಂ ಇಂಡಿಯಾದಲ್ಲಿರುವಾಗ ಒಂದು ಘಟನೆ ಸಂಭವಿಸಿತ್ತು. ಅದು ಎಂ ಎಸ್ ಧೋನಿ ಆಡಿದ ಕೊನೆಯ ವಿಶ್ವಕಪ್ ಪಂದ್ಯದ ಕ್ಷಣ. ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಬೆರಳಿಗೆ ಗಾಯವಾಗಿತ್ತು. ಅಷ್ಟೇ ಅಲ್ಲ ರಕ್ತ ಕೂಡ ಸುರಿಯಲಾರಂಭಿಸಿತು. ತಕ್ಷಣವೇ ಧೋನಿ ಹೆಬ್ಬೆರಳನ್ನು ಬಾಯಲ್ಲಿಟ್ಟುಕೊಂಡು ರಕ್ತವನ್ನು ಕೊಂಚ ಹೀರಿ ಮೈದಾನದಲ್ಲಿ ಉಗುಳಿದರು. ಈ ದೃಶ್ಯ ಅಭಿಮಾನಿಗಳಿಗೆ ಬಹಳಷ್ಟು ನೋವುಂಟು ಮಾಡಿತ್ತು. ಸದ್ಯ ಈ ಫೋಟೋ ವೈರಲ್ ಆಗಿದೆ.

ಇನ್ನು ಎಂಎಸ್ ಧೋನಿ ಅವರ ಯಶಸ್ವಿ ಜೀವನ ವಿಚಾರಕ್ಕೆ ಬಂದರೆ, 2023 ರಲ್ಲಿ ಅವರ ನಿವ್ವಳ ಮೌಲ್ಯವು ಸುಮಾರು ರೂ. 1030 ಕೋಟಿ ಇದೆ ಎಂದು ತಿಳಿದುಬಂದಿದೆ. ಇದು ಕ್ರಿಕೆಟ್, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌’ಗಳು ಮತ್ತು ಇತರ ವ್ಯಾಪಾರ ಉದ್ಯಮಗಳಿಂದ ಅವರು ಗಳಿಕೆ ಮಾಡಿದ್ದಾಗಿದೆ.

ಇದನ್ನೂ ಓದಿ: Shubman Gill: “ಶುಭ್ಮನ್ ಕ್ರಶ್ ರಶ್ಮಿಕಾ’: ವಿಚಾರ ತಿಳಿದು ಕೆರಳಿ ಕೆಂಡವಾದ ಗಿಲ್ ಏನಂದ್ರು ನೋಡಿ!

ಎಂಎಸ್ ಧೋನಿ ಅವರಿಗೆ ಕ್ರಿಕೆಟ್‌’ನಿಂದ ಬರುವ ಆದಾಯವು, ಅವರ ನಿವ್ವಳ ಮೌಲ್ಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ತಂಡವನ್ನು 2011 ರ ವಿಶ್ವಕಪ್ ಸೇರಿದಂತೆ ಹಲವಾರು ವಿಜಯಗಳತ್ತ ಮುನ್ನಡೆಸಿದ್ದಾರೆ. ಮೈದಾನದಲ್ಲಿ ಅವರು ನೀಡಿದ ಅದ್ಭುತ ಪ್ರದರ್ಶನಗಳು ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ನೀಡುವಂತೆ ಮಾಡಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News