1 ವರ್ಷದ ಬಳಿಕ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಈ ಆಟಗಾರ T20ಯಲ್ಲಿ ಭಾರತ ಸೋಲಲು ಕಾರಣನಾದ!

Ravi Bishnoi: ಟೀಮ್ ಮ್ಯಾನೇಜ್‌’ಮೆಂಟ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸುಮಾರು 1 ವರ್ಷದ ನಂತರ ಈ ಆಟಗಾರನಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ನೀಡಿದ್ದರು. ಆದರೆ ಈ ಆಟಗಾರನು ಪ್ರಮುಖ ಸಂದರ್ಭದಲ್ಲಿ ವಿಫಲನಾದನು.

Written by - Bhavishya Shetty | Last Updated : Aug 7, 2023, 12:39 PM IST
    • ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯ
    • ಐದು ಪಂದ್ಯಗಳ ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ ಹಿನ್ನಡೆ ಅನುಭವಿಸಿದೆ.
    • ಕಳಪೆ ಪ್ರದರ್ಶನದಿಂದಾಗಿ ಮ್ಯಾನೇಜ್‌ಮೆಂಟ್ ಹಾಗೂ ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
1 ವರ್ಷದ ಬಳಿಕ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಈ ಆಟಗಾರ T20ಯಲ್ಲಿ ಭಾರತ ಸೋಲಲು ಕಾರಣನಾದ!  title=
Ravi Bishnoi

IND vs WI, News: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲು ಕಂಡಿದೆ. ಐದು ಪಂದ್ಯಗಳ ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ ಹಿನ್ನಡೆ ಅನುಭವಿಸಿದೆ. ಇನ್ನು ಈ ಆಟಗಾರ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಸೋಲಲು ಕಾರಣನಾದನೇ ಎಂಬ ಅನುಮಾನ ಈಗ ಮೂಡುತ್ತಿದೆ. ಅಷ್ಟೇ ಅಲ್ಲದೆ, ಕಳಪೆ ಪ್ರದರ್ಶನದಿಂದಾಗಿ ಮ್ಯಾನೇಜ್‌ಮೆಂಟ್ ಹಾಗೂ ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಓದಿದ್ದು ಬಿ.ಟೆಕ್, ಆಗಿದ್ದು ಕ್ರಿಕೆಟರ್: 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಈ ಸ್ಪಿನ್ನರ್ ಆಸ್ತಿ ಮೌಲ್ಯ ಬರೋಬ್ಬರಿ 120 ಕೋಟಿ!

ಟೀಮ್ ಮ್ಯಾನೇಜ್‌’ಮೆಂಟ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸುಮಾರು 1 ವರ್ಷದ ನಂತರ ಈ ಆಟಗಾರನಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ನೀಡಿದ್ದರು. ಆದರೆ ಈ ಆಟಗಾರನು ಪ್ರಮುಖ ಸಂದರ್ಭದಲ್ಲಿ ವಿಫಲನಾದನು. ಈ ಆಟಗಾರ ಬೇರಾರು ಅಲ್ಲ, ಅವರೇ ರವಿ ಬಿಷ್ಣೋಯ್. ರವಿ ತನ್ನ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಸೆಪ್ಟೆಂಬರ್ 2022 ರಲ್ಲಿ ಪಾಕಿಸ್ತಾನದ ವಿರುದ್ಧ ದುಬೈ ಮೈದಾನದಲ್ಲಿ ಆಡಿದ್ದರು.

4 ಸೆಪ್ಟೆಂಬರ್ 2022 ರಂದು ದುಬೈ ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ T20 ಪಂದ್ಯದ ನಂತರ ಕಳಪೆ ಪ್ರದರ್ಶನದ ಕಾರಣ ರವಿ ಬಿಷ್ಣೋಯ್ ಭಾರತದ T20 ತಂಡದಿಂದ ಹೊರಗುಳಿದಿದ್ದರು, ಆದರೆ ಈಗ ರವಿ ಬಿಷ್ಣೋಯ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಸೇರಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ವಿಫಲರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಈ ಕಳಪೆ ಪ್ರದರ್ಶನದಿಂದಾಗಿ ರವಿ ಬಿಷ್ಣೋಯ್ ಗೆ ಟೀಂ ಇಂಡಿಯಾಗೆ ಮತ್ತಷ್ಟು ಅವಕಾಶ ಸಿಗುವುದು ಅನುಮಾನವೇ...

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯ್ 4 ಓವರ್‌’ಗಳಲ್ಲಿ 31 ರನ್ ನೀಡಿದರು. ಈ ಅವಧಿಯಲ್ಲಿ ರವಿ ಬಿಷ್ಣೋಯ್ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಕುಲದೀಪ್ ಯಾದವ್ ಬದಲಿಗೆ ರವಿ ಬಿಷ್ಣೋಯ್ ಅವರನ್ನು ಎರಡನೇ ಟಿ20 ಪಂದ್ಯದ ಪ್ಲೇಯಿಂಗ್ 11 ಸೇರಿಸಿಕೊಳ್ಳಲಾಗಿತ್ತು. ಇದು ನಾಯಕ ಹಾರ್ದಿಕ್ ಪಾಂಡ್ಯ ಅವರ ಕೆಟ್ಟ ನಿರ್ಧಾರ ಎಂದು ಸಾಬೀತಾಯಿತು.

ಇದನ್ನೂ ಓದಿ: ಯುವಿ ನಿವೃತ್ತಿ ಬಳಿಕ ಖಾಲಿಯಿದ್ದ ನಂ.4 ಸ್ಥಾನಕ್ಕೆ 20ರ ಹರೆಯದ ಈ ಸ್ಟಾರ್ ಬ್ಯಾಟ್ಸ್’ಮನ್ ಫಿಕ್ಸ್!

ಕುಲದೀಪ್ ಯಾದವ್ ವಿಕೆಟ್ ಟೇಕರ್ ಬೌಲರ್. ಒಂದು ವೇಳೆ ಅವರು ಪ್ಲೇಯಿಂಗ್ ಇಲೆವೆನ್‌’ನಲ್ಲಿದ್ದರೆ ಟೀಂ ಇಂಡಿಯಾ ಈ ಪಂದ್ಯದ ಸೋಲುತ್ತಿರಲಿಲ್ಲವೇನೋ..! ರವಿ ಬಿಷ್ಣೋಯ್ ಬದಲಿಗೆ ಕುಲದೀಪ್ ಯಾದವ್ ಟೀಂ ಇಂಡಿಯಾದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News