ಪೆರಿಯಾರ್ ಗೌರವವನ್ನು ತಮಿಳರಾದ ನಾವು ಕಾಪಾಡುತ್ತೇವೆ -ಕಮಲ್ ಹಾಸನ್

    

Last Updated : Mar 7, 2018, 06:16 PM IST
ಪೆರಿಯಾರ್ ಗೌರವವನ್ನು ತಮಿಳರಾದ ನಾವು ಕಾಪಾಡುತ್ತೇವೆ -ಕಮಲ್ ಹಾಸನ್  title=

ಚೆನ್ನೈ: ಪೆರಿಯಾರ್ ಮೂರ್ತಿ ರಕ್ಷಿಸಲು ಪೊಲೀಸರ ಅಗತ್ಯವಿಲ್ಲ, ತಮಿಳರು ಪೆರಿಯಾರ್ ರವರ ಗೌರವವನ್ನು ಕಾಪಾಡಲು ಸಶಕ್ತರಾಗಿದ್ದಾರೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. 

ಬಿಜೆಪಿ ನಾಯಕ ಎಚ್.ರಾಜಾ  ಹೇಳಿಕೆ ನಂತರ ಪೆರಿಯಾರ್ ಮೂರ್ತಿ ಮೇಲೆ ದಾಳಿ ನಡೆದ ಹಿನ್ನಲೆಯಲ್ಲಿ ಪ್ರತಿಕ್ರಯಿಸಿರುವ ಕಮಲ್ ಹಾಸನ್ "ಪೆರಿಯಾರ್ ಪ್ರತಿಮೆಯ ರಕ್ಷಣೆಗೆ ಪೊಲೀಸರನ್ನು ನಿಯೋಜಿಸುವ  ಅಗತ್ಯವಿಲ್ಲ, ತಮಿಳರಾದ ನಾವು ಅದನ್ನು ರಕ್ಷಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.

ಕಾವೇರಿ ನದಿ ನಿರ್ವಹಣಾ ಮಂಡಳಿಯ ರಚನೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಪೆರಿಯಾರ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ ಎಂದು ಕಮಲ್ ಹಾಸನ್ ತಿಳಿಸಿದರು.

Trending News