“50 ಓವರ್ ಮಾದರಿಯಲ್ಲಿ ಈ ದೇಶದ ಬೌಲಿಂಗ್ ದಾಳಿ ಅತ್ಯುತ್ತಮವಾಗಿದೆ”- ರವಿಶಾಸ್ತ್ರಿ ಕೊಂಡಾಡಿದ್ದು ಯಾರನ್ನು ಗೊತ್ತಾ?

Ravi Shastri Advice to Team India: ಭಾರತ ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದಿತ್ತು. ಇದಾದ ಬಳಿಕ ಮತ್ತೊಮ್ಮೆ ಈ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಭಾರತದ ಕೈಯಲ್ಲಿದೆ. ಇದಕ್ಕೂ ಮುನ್ನ ರವಿಶಾಸ್ತ್ರಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

Written by - Bhavishya Shetty | Last Updated : Nov 12, 2023, 04:13 PM IST
    • ಭಾರತ ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದಿತ್ತು.
    • ಮತ್ತೊಮ್ಮೆ ಈ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಭಾರತದ ಕೈಯಲ್ಲಿದೆ.
    • ಇದಕ್ಕೂ ಮುನ್ನ ರವಿಶಾಸ್ತ್ರಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.
“50 ಓವರ್ ಮಾದರಿಯಲ್ಲಿ ಈ ದೇಶದ ಬೌಲಿಂಗ್ ದಾಳಿ ಅತ್ಯುತ್ತಮವಾಗಿದೆ”- ರವಿಶಾಸ್ತ್ರಿ ಕೊಂಡಾಡಿದ್ದು ಯಾರನ್ನು ಗೊತ್ತಾ?  title=
Ravi Shastri

Ravi Shastri Advice to Team India: 2023ರ ವಿಶ್ವಕಪ್‌’ನಲ್ಲಿ ಟೀಮ್ ಇಂಡಿಯಾ ಇಲ್ಲಿಯವರೆಗೆ ಪ್ರಾಬಲ್ಯ ಸಾಧಿಸುತ್ತಿದೆ. ಟೂರ್ನಿಯಲ್ಲಿ ಸತತ 8 ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿ ಸೆಮಿಫೈನಲ್‌ ಪ್ರವೇಶ ಪಡೆದಿತ್ತು. ಅಂದಹಾಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ನೆದರ್ಲ್ಯಾಂಡ್ಸ್ ವಿರುದ್ಧ ಶ್ರೇಷ್ಠ ದಾಖಲೆ ಬರೆದ ರೋಹಿತ್ ಶರ್ಮಾ!

ಇನ್ನು ಭಾರತ ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದಿತ್ತು. ಇದಾದ ಬಳಿಕ ಮತ್ತೊಮ್ಮೆ ಈ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಭಾರತದ ಕೈಯಲ್ಲಿದೆ. ಇದಕ್ಕೂ ಮುನ್ನ ರವಿಶಾಸ್ತ್ರಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

“12 ವರ್ಷಗಳ ಹಿಂದೆ ಭಾರತ ತಂಡ ಕೊನೆಯ ಬಾರಿ ಈ ಪ್ರಶಸ್ತಿಯನ್ನು ಗೆದ್ದಿತ್ತು. ಮತ್ತೊಮ್ಮೆ ಕಪ್ ಗೆಲ್ಲಲು ನಮಗೆ ಅವಕಾಶ ಬಂದಿದೆ. ಪ್ರಸ್ತುತ ನಮ್ಮ ತಂಡ ಆಡುತ್ತಿರುವ ರೀತಿಯ ನೋಡಿದರೆ ಅತ್ಯುತ್ತಮ ಅವಕಾಶವಿದೆ. ಆದರೆ ಈ ಬಾರಿ ಮಿಸ್ ಮಾಡಿಕೊಂಡರೆ ಮುಂದಿನ ಮೂರು ವಿಶ್ವಕಪ್‌’ಗಳಲ್ಲಿ ಟ್ರೋಫಿ ಗೆಲ್ಲಲು ಕಾಯಬೇಕಾಗುತ್ತದೆ” ಎಂದು ಹೇಳಿದ್ದಾರೆ.

“ಅಷ್ಟೇ ಅಲ್ಲದೆ, 7-8 ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು. ಈ ಆಟಗಾರರು ಆಡುತ್ತಿರುವ ರೀತಿ ನೋಡಿದರೆ ಟ್ರೋಫಿ ಗೆಲ್ಲುವುದು ಪಕ್ಕಾ ಎನಿಸುತ್ತಿದೆ” ಎಂದರು.

ತಂಡದ ಬೌಲರ್‌ಗಳ ಕುರಿತು ಮಾತನಾಡಿದ ರವಿಶಾಸ್ತ್ರಿ, “ಇದು ಅಸಾಧಾರಣ. ಈ ಸಾಧನೆ ರಾತ್ರೋರಾತ್ರಿ ನಡೆದದ್ದಲ್ಲ. ಈ ಆಟಗಾರರು 4-5 ವರ್ಷಗಳಿಂದ ಆಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಸಿರಾಜ್ ತಂಡ ಸೇರಿದ್ದರು. ಯಾವ ರೀತಿಯ ಪ್ರದೇಶಗಳನ್ನು ಸತತವಾಗಿ ನೀಡಬೇಕೆಂದು ಅವರಿಗೆ ತಿಳಿದಿದೆ. ಬೌಲಿಂಗ್ ಮಾಡುವಾಗ ಯಾವುದು ಮುಖ್ಯವಲ್ಲ ಎಂದು ಅವರಿಗೆ ತಿಳಿದಿದೆ” ಎಂದರು.

ಇದನ್ನೂ ಓದಿ: ಈ ರಾಶಿಯ ಜನರ ಅದೃಷ್ಟದ ಬಾಗಿಲು ಓಪನ್… ಮುಂದಿನ 30 ದಿನ ಧನಸಂಪತ್ತಿಗೆ ಕೊರತೆಯೇ ಇಲ್ಲ-ಸರ್ಕಾರಿ ನೌಕರಿ ಜೊತೆ ವಿದೇಶ ಪ್ರಯಾಣದ ಯೋಗ

ಟೀಂ ಇಂಡಿಯಾದ ಬೌಲರ್‌’ಗಳು ವೈಟ್ ಬಾಲ್ ಕ್ರಿಕೆಟ್‌’ನಲ್ಲಿ ಅತ್ಯುತ್ತಮ ದಾಳಿ ನಡೆಸಿದ್ದಾರೆ ಎಂದು ರವಿಶಾಸ್ತ್ರಿ ಬಣ್ಣಿಸಿದ್ದಾರೆ. ಈ ಬಾರಿಯ ವಿಶ್ವಕಪ್‌’ನಲ್ಲಿ ಯಾವುದೇ ಶಾರ್ಟ್‌ಬಾಲ್‌’ಗಳನ್ನು ಎಸೆದಿಲ್ಲ. ಶಾರ್ಟ್ ಬಾಲ್ ಇದ್ದರೆ ಅದನ್ನು ಅಚ್ಚರಿಯ ಅಸ್ತ್ರವಾಗಿ ಬಳಸಲಾಗುತ್ತದೆ. 90 ರಷ್ಟು ಸಮಯ ಅವರು ಸ್ಟಂಪ್‌’ಗಳನ್ನು ಗುರಿಯಾಗಿಟ್ಟುಕೊಂಡು ಚೆಂಡುಗಳನ್ನು ಬೌಲ್ ಮಾಡಿದ್ದಾರೆ. ಉತ್ತಮ ಸೀಮ್‌’ನಿಂದಾಗಿ ಚೆಂಡು ಚಲಿಸುತ್ತಿದೆ ಮತ್ತು ಬ್ಯಾಟ್ಸ್‌ಮನ್‌ಗಳು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ಆರಂಭವಾದಾಗಿನಿಂದ 50 ಓವರ್‌ಗಳ ಮಾದರಿಯಲ್ಲಿ ಇದು ಅತ್ಯುತ್ತಮ ಬೌಲಿಂಗ್ ದಾಳಿಯಾಗಿದೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News