ಆಟ ಪಾಠದ ಜೊತೆ ಬಿಗ್ಬಾಸ್ ಮಂದಿಗೆ ಸಖತ್ ಫನ್ ಸಿಗುತ್ತಿದೆ. ದೊಡ್ಮನೆ ಮಂದಿಗೆ ಬಿಗ್ಬಾಸ್ ನೀಡುತ್ತಿರುವ ವಿಚಿತ್ರ ಟಾಸ್ಕ್ಗಳು ತಲೆನೋವಾಗಿ ಪರಿಣಮಿಸಿದ್ರೆ ಟಿವಿ ಮುಂದೆ ಕುಳಿತ ಪ್ರೇಕ್ಷಕರ ನಗುವಿಗೆ ಕಾಣವಾಗುತ್ತಿದೆ. ಇದೀಗ ಪ್ರಶಾಂತ್ ಸಂಬರ್ಗಿ ತುಂಡು ಬಟ್ಟೆತೊಟ್ಟು ಕ್ಯೂಟ್ ಹುಡುಗಿಯ ಅವತಾರ ತಾಳಿದ್ದು ಸಂಬರ್ಗಿಯ ಹೊಸ ಅವತಾರ ನೋಡಿದ ಪ್ರೇಕ್ಷಕರ ತಲೆತಿರುಗಿ ಬಿಳುವಂತಿದೆ.
ಬಿಗ್ಬಾಸ್ ಪ್ಯಾಮಿಲಿ ವೀಕ್ ಪ್ರಭಾವದಿಂದ ರೂಪೇಶ್ ರಾಜಣ್ಣ ಅವರ ಬಹುದಿನದ ಆಸೆ ಈಡೇರಿದೆ. ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿ ಕನ್ನಡಪರ ಹೋರಾಟಗಾರ ರಾಜಣ್ಣ ಆಯ್ಕೆಯಾಗಿದ್ದಾರೆ. ಟಾಸ್ಕ್ ವಿಚಾರ ಸೇರಿದಂತೆ ಮನೆ ಮಂದಿ ಜೊತೆ ಸದಾ ಜಗಳವಾಡುತ್ತಿದ್ದ ರೂಪೇಶ್ ರಾಜಣ್ಣ ಅಸಲಿ ಆಟ ಈಗ ಶುರುವಾಗಿದೆ ಎಂದು ನೆಟಿಜನ್ಸ್ ಹೇಳುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ದಿನವೂ ಒಂದೊಂದು ಚಿತ್ರ ವಿಚಿತ್ರ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಬಿಗ್ಬಾಸ್ ಟಾಸ್ಕ್ ಸ್ಪರ್ಧಿಗಳಿಗೆ ದೊಡ್ಡ ತಲೆನೋವಾಗಿದೆ. ಸುಖವಾಗಿ ಸಂತೋಷವಾಗಿ ನೆಮ್ಮದಿಯಿಂದ ಬೆಳೆದ ಮಂದಿ ಸದ್ಯ ಕಾಡುವಾಸಿಗಳಂತೆ ದೊಡ್ಮನೆಯಿಂದ ಹೊರಗೆ ಬಿಸಿಲಲ್ಲಿ ಕುಳಿತಿದ್ದಾರೆ. ಯಾಕಾದ್ರೂ ಬಿಗ್ಬಾಸ್ಗೆ ಬಂದೆ ಗುರು ಎನ್ನವಂತಹ ಪರಿಸ್ಥಿತಿ ಬಿಗ್ಹೌಸ್ ಮಂದಿಗೆ ನಿರ್ಮಾಣವಾಗಿದೆ.
ದಿನಗಳು ಹತ್ತಿರ ಬಂದಂತೆ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ಪರ್ಧಿಗಳ ಮಧ್ಯ ಧ್ವೇಷ, ಅಸೂಯೆ, ವಾದ ವಿವಾಧಗಳು ಹೆಚ್ಚಾಗುತ್ತಲೇ ಇವೆ. ಸದ್ಯ ಕಿಚ್ಚನ ಮುಂದೆಯೇ ನಡೆದ ಕಾಳಜಿ ಮತ್ತು ಸ್ವಾರ್ಥಿಗಳ ಚರ್ಚೆಯಲ್ಲಿ ಗುರೂಜಿಯನ್ನು ಬಿಟ್ಟರೆ ರಾಜಣ್ಣನೇ ಹೆಚ್ಚು ಸ್ವಾರ್ಥಿ ಎಂದು ಹೇಳಿದ ಮನೆ ಮಂದಿ ವಿರುದ್ಧ ರೂಪೇಶ್ ರಾಜಣ್ಣ ಕೆಂಡಾಮಂಡಲರಾಗಿದ್ದಾರೆ.
ಬಿಗ್ಬಾಸ್ ಆಟಕ್ಕೆ ಮನೆಮಂದಿಯಲ್ಲಾ ಸುಟ್ಟು ಸುಣ್ಣವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಹೊಸ ಹೊಸ ಆಟಗಳು ಉದಯಿಸುತ್ತಿವೆ. ಇವೇಲ್ಲ ಪ್ರೇಕ್ಷಕರಿಗೆ ಮಜಾ ಕೊಟ್ಟರೆ ಸ್ಪರ್ಧಿಗಳಿಗೆ ಸಂಕಟಪ್ರಾಯವಾಗಿವೆ. ಸದ್ಯ ರೂಪೇಶ್ ರಾಜಣ್ಣ ಅವರು ಕಳೆದುಕೊಂಡ ಚಿನ್ನದ ಉಂಗುರ ಮತ್ತು ಬ್ರೆಸ್ಲೆಟ್ ಕಂಡು ಹಿಡಿಯುವುದಾಗಿ ಹೇಳಿ ಗುರೂಜಿ ಮತ್ತು ರೂಪೇಶ್ ಬಕ್ರಾ ಮಾಡಿದ ಎಪಿಸೋಡ್ ವೀಕ್ಷಕರನ್ನು ನಗೆಗಡಲಿಗೆ ತೆಲಿಸುತ್ತಿದೆ.
ಬಿಗ್ಬಾಸ್ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈಗಾಗಲೇ ನಾಮಿನೆಟ್ ಆಗಿ 6 ಜನ ಸ್ಪರ್ಧಿಗಳು ಮನೆ ಸೇರಿದ್ದಾರೆ. ಉಳಿದ 12 ಜನ ಸ್ಪರ್ಧಿಗಳ ಮಧ್ಯ ದೊಡ್ಡಮನೆಯಲ್ಲಿ ಗೆಲುವಿಗಾಗಿ ಕಾದಾಟ ನಡೆಯುತ್ತಿದೆ. ಈ ಪೈಕಿ ರಾಕೇಶ್ ಅಡಿಗ ಬಿಗ್ಬಾಸ್ ವಿನ್ನರ್ ಆಗ್ತಾರೆ ಎಂಬ ಸುದ್ದಿಯೊಂದು ನೆಟ್ಟಿಗರ ಬಾಯಿಂದ ಕೇಳಿಬರುತ್ತಿದೆ.
ಬಿಗ್ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಲವ್ ಬರ್ಡ್ಸ್ ಮನೆಯಂಗಳದಲ್ಲಿ ಜೋಡಿ ಜೋಡಿಯಾಗಿ ತಿರುಗಾಡುತ್ತಿದ್ದಾರೆ. ಆದ್ರೆ ಕಾವ್ಯಶ್ರೀ ಗೌಡ ಪಾಪ ಸಿಂಗಲ್ ಆಗಿದ್ದಾರೆ ಅಂತೆ. ಅದಕ್ಕೆ ಇವತ್ತು ಮನೆಯಲ್ಲಿ ಗೋಳೋ ಅಂತಿದ್ರು.
ಸದಾ ಬಿಗ್ಬಾಸ್ ಮನೆಯಲ್ಲಿ ಎಲ್ಲರ ನಗುವಿಗೂ ಕಾರಣ ಆರ್ಯವರ್ಧನ್ ಗುರೂಜಿ. ಏನಾದರೊಂದು ಕಿತಾಪತಿ ಮಾಡುವ ಮೂಲಕ ಎಲ್ಲರನ್ನು ನಗಿಸುತ್ತಲೇ ಇರುತ್ತಾರೆ. ಸದ್ಯ ಮನೆ ಮಂದಿಗೆಲ್ಲ ಗ್ರಹಗಳ ಹೊಲಿಕೆ ಮಾಡಲು ಹೋಗಿ ತಮ್ಮ ಮೇಲೆ ತಾವೇ ಗೂಬೆ ಕೂರಿಸಿಕೊಂಡಿದ್ದಾರೆ.
ನೀವು ಕೈ ರೇಖೆ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು, ಅಬ್ಬಬ್ಬಾ ಅಂದ್ರೆ ಕಾಲಿನ ಗೆರೆಯನ್ನಾದ್ರೂ ನೋಡಿ ಭವಿಷ್ಯ ಹೇಳ್ತಾರೆ ಅಂದುಕೊಳ್ಳೋಣ, ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ.. ಯಸ್ ಬಿಗ್ಹೌಸ್ನಲ್ಲಿ ಆರ್ಯವರ್ಧನ ಗುರೂಜಿ ಹಿಂಗೊಂದು ಪ್ರಯೋಗ ಮಾಡಿದ್ದು, ಅಮೂಲ್ಯ ಅಧರ ನೋಡಿ ಭವಿಷ್ಯ ನುಡಿದಿದ್ದಾರೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಲ್ಲಿ ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಜೊತೆಗೆ ಮೊದಲ ಎಲಿಮಿನೇಷನ್ ಕೂಡ ನಡೆದಿದ್ದು, ರೇಸರ್ ಐಶ್ವರ್ಯ ಪಿಸ್ಸೆ ಹೊರಬಂದಿದ್ದಾರೆ.
Bigg Boss Kannada Season 9 : ಬಿಗ್ ಬಾಸ್ ಕಾರ್ಯಕ್ರಮದ ವೀಕೆಂಟ್ ಹೈಲೈಟ್ಸ್ ಅಂದ್ರೆ ಅದು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ. ವಾರ ಪೂರ್ತಿ ಸೂಪರ್ ಆಗಿ ಆಟ ಆಡುವ ಸ್ಪರ್ಧಿಗೆ ಇದು ಸಿಗುತ್ತದೆ.
ಬಿಗ್ ಬಾಸ್ ಹೌಸ್ಗೆ ಇಂದು ವರನಟ ರಾಜ್ಕುಮಾರ್ ಅವರ ಎಂಟ್ರಿ ಆಗಿತ್ತು. ಹೌದು.. ಆಗಂತ ಸಾಕ್ಷಾತ್ ಅಣ್ಣವ್ರು ಬಂದಿದ್ದಿಲ್ಲ, ಬದಲಿಗೆ ಅರುಣ್ ಸಾಗರ್ ಅವರು ಸುದೀಪ್ ಅವರ ಸಲಹೆ ಮೇರೆಗೆ ನಟಸಾರ್ವಭೌಮನ ಧ್ವನಿಯನ್ನು ಅನುಕರಣೆ ಮಾಡಿ ಮನೆ ಮಂದಿಗೆ ಸಲಹೆ ನೀಡಿದ್ದು ತುಂಬಾ ಇಂಟ್ರೆಸ್ಟಿಂಗ್ ಆಗಿತ್ತು.
Bigg Boss Kannada Season 9 : ಇದೀಗ ಮೊದಲ ವಾರದ ಎಲಿಮಿನೇಷನ್ ಸಮಯ ಬಂದಿದ್ದು, 18 ಸ್ಪರ್ಧಿಗಳಲ್ಲಿ 12 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು, ಇದರಲ್ಲಿ ನಿನ್ನೆ 3 ಜನರನ್ನು ನಿನ್ನೆ ಕಿಚ್ಚ ಸುದೀಪ್ ಸೇಫ್ ಮಾಡಿದ್ದಾರೆ.
ಬಿಗ್ಬಾಸ್ ಮನೆಯ ಸದಸ್ಯರಿಗೆ ಆರ್ಯವರ್ಧನ್ ಗುರೂಜಿ ಟಿಪ್ಸ್ ನೀಡುತ್ತಿದ್ದಾರೆ. ದರ್ಶ್ ಚಂದಪ್ಪ ಅವರಿಗೆ ಯಾವುದಾದ್ರೂ ಹುಡುಗಿನ ಕ್ಯಾಚ್ ಹಾಕೊಂಡ್ರೆ ನೀನು ಮನೆಯಲ್ಲಿ ಉಳಿತಿಯಾ ಎಂದು ಕಿವಿಮಾತು ಹೇಳಿದ್ದು, ಬಿಗ್ಬಾಸ್ ವಾರದ ಕತೆ ಕಿಚ್ಚನ ಜೊತೆ ಪ್ರೋಮೋದಲ್ಲಿದೆ. ಅಲ್ಲದೆ, ಗುರೂಜಿ ಇನ್ನೂ ಯಾರ್ಯಾರಿಗೆ ಏನೇನು ಹೇಳಿದ್ದಾರೆ ಅನ್ನೋದು ರಾತ್ರಿ 9:30 ರಿವಿಲ್ ಆಗಲಿದೆ.
ಬಿಗ್ ಬಾಸ್ ವಾರದ ಅತ್ಯುತ್ತಮ ಮತ್ತು ಕಳಪೆ ಸ್ಪರ್ಧಿಯ ಹೆಸರನ್ನು ಪ್ರಕಟಿಸಿದ್ದು, ಅರುಣ್ ಸಾಗರ್ ಅತ್ಯುತ್ತಮ ಹಾಗೂ ರೂಪೇಶ್ ರಾಜಣ್ಣ ಕಳಪೆ ಕಂಟೆಸ್ಟೆಂಟ್ ಎಂದು ಹೇಳಿದೆ. ಸದ್ಯ ಬಿಗ್ಬಾಸ್ನ ಈ ನಿರ್ಧಾರದಿಂದ ದೊಡ್ಮನೆ ಮಂದಿ ಶಾಕ್ಗೆ ಒಳಗಾಗಿದ್ದಾರೆ.
ಬಿಗ್ ಹೌಸ್ನಲ್ಲಿ ಆರೋಪ, ವಾದ, ಜಗಳದ ವಾತಾವರಣ ಸೃಷ್ಟಿಯಾಗುತ್ತಿದೆ. ಪರಸ್ಪರ ಆರೋಪಗಳನ್ನು ಮಾಡುತ್ತಿರುವ ದೊಡ್ಮನೆ ಮಂದಿ ಕಳಪೆ ಮಟ್ಟದ ಆಟ ಹಾಗೂ ನಕಲಿತನದ ವ್ಯಕ್ತಿತ್ವ ಎನ್ನುತ್ತ ಏರು ಧ್ವನಿಯಲ್ಲಿ ದೂರುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.