ಸದ್ಯ ಎಲ್ಲಾ ಕನ್ನಡಿಗರು ನೋಡಲೇಬೇಕು ಎಂದು ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಪುನೀತ್ ರಾಜ್ಕುಮಾರ್ ಅವರ ʼಗಂಧದಗುಡಿʼ. ಬಿಡುಗಡೆಗೂ ಮುನ್ನವೇ ಅಪ್ಪು ಕನಸಿನ ಕೂಸಿಗೆ ಭಾರತದಾದ್ಯಂತ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಅದರಂತೆ ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ ಗಂಧದಗುಡಿ ಸಿನಿಮಾ ಕೂಡಾ ಅಂದಿನ ಕಾಲದಲ್ಲಿಯೇ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿತ್ತು. ಅಲ್ಲದೆ, ಸಿನಿರಂಗದ ದಿಗ್ಗಜರ ನಿದ್ದೆ ಕೆಡುವಂತೆ ಮಾಡಿತ್ತು.
ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ʼಪುನೀತ್ ಪರ್ವʼಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಕಾರಣಾಂತರದಿಂದ ಗೈರಾಗಿದ್ದರು. ಆದ್ರೆ ಅವರಿಬ್ಬರಿಗೂ ಅಪ್ಪು ಅವರ ಮೇಲಿರುವ ಅಭಿಮಾನ, ಪ್ರೀತಿ ಮಾತ್ರ ಅಪಾರ. ಆದರೂ ಇಬ್ಬರೂ ನಟರು ಪುನೀತ್ ಪರ್ವಕ್ಕೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಮತ್ತು ಇಬ್ಬರು ಸ್ಟಾರ್ಗಳ ಫ್ಯಾನ್ಸ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಟಾಕ್ ವಾರ್ ಶುರುವಾಗಿದೆ.
ಕನ್ನಡ ಕಂದ, ಕರುನಾಡಿನ ಮಗ ಪುನೀತ್ ರಾಜಕುಮಾರ್ ಶಾರೀರಿಕವಾಗಿ ನಮ್ಮ ಮಧ್ಯ ಇಲ್ಲ ಅಂದರೂ, ಕರ್ನಾಟಕದಲ್ಲಿ ಬಿಸುವ ಕನ್ನಡದ ಗಾಳಿಯಲ್ಲಿ ಸದಾ ಅಮರ. ಕನ್ನಡಾಭಿಮಾನಿಗಳ ನೆಚ್ಚಿನ ದೊರೆಯ ಬಗ್ಗೆ ದಿನವೂ ಮಾತನಾಡಲಿಲ್ಲ ಅಂದ್ರೆ ಆ ದಿನ ಸಂಪೂರ್ಣವಾಗುವುದಿಲ್ಲ. ಇವತ್ತು ನಿಮಗೊಂದು ಇಂಟ್ರಸ್ಟಿಂಗ್ ವಿಚಾರ ಹೇಳಲೇ ಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.