Covid variant JN.1: ಸೋಮವಾರದವರೆಗೆ 6 ಕೋವಿಡ್ -19 ಸಾವುಗಳು ವರದಿಯಾಗಿವೆ. ಈ ಪೈಕಿ ಕೇರಳದಲ್ಲಿ 5 ಮತ್ತು ಉತ್ತರ ಪ್ರದೇಶದಲ್ಲಿ 1 ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕರ್ನಾಟಕದಲ್ಲಿ ಮಂಗಳವಾರ 1 ಕೋವಿಡ್ -19 ಸಾವು ವರದಿಯಾದ ನಂತರ ಸಾವಿನ ಸಂಖ್ಯೆ ಈಗ 7ಕ್ಕೆ ಏರಿಕೆಯಾಗಿದೆ.
Covid-19 Cases rise 38 percent in India: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,542 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರೆ. ಈ ಅವಧಿಯಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ -19 ಸೋಂಕಿತ ಸಕ್ರಿಯ ರೋಗಿಗಳ ಸಂಖ್ಯೆ 63,562ಕ್ಕೆ ತಲುಪಿದೆ.
Post-Mortem Rule Update: ಇನ್ಮುಂದೆ ಸೂರ್ಯಾಸ್ತದ ನಂತರವೂ ದೇಶದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಬಹುದು ಎಂದು ಕೇಂದ್ರ ಆರೋಗ್ಯ (Union Health Ministry) ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಹೇಳಿದ್ದಾರೆ. ಬ್ರಿಟಿಷರ ಕಾಲದ ವ್ಯವಸ್ಥೆ ಕೊನೆಗೊಂಡಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಸಂಜೆ 6 ಗಂಟೆಯವರೆಗೆ, ಭಾರತವು ಒಂದು ದಿನದಲ್ಲಿ 1.09 ಕೋಟಿ ಡೋಸ್ಗಳ ಅತ್ಯುನ್ನತ ದಾಖಲೆಯನ್ನು ಸಾಧಿಸಿದೆ ಎಂದು ಹೇಳಿದರು. ಐದು ದಿನಗಳಲ್ಲಿ ಎರಡನೇ ಬಾರಿಗೆ ಒಂದು ಕೋಟಿಗಿಂತ ಹೆಚ್ಚು ಕರೋನಾ ಡೋಸ್ಗಳನ್ನು ನೀಡಿರುವ ಈ ಸಾಧನೆಗಾಗಿ ಅವರು ಇಡೀ ದೇಶವನ್ನು ಶ್ಲಾಘಿಸಿದ್ದಾರೆ.
Vaccination To Pregnant Women - ಇನ್ಮುಂದೆ ದೇಶದ ಗರ್ಭವತಿ ಮಹಿಳೆಯರಿಗೂ ಕೂಡ ಕೊರೊನಾದಿಂದ (Coronavirus) ರಕ್ಷಣೆ ನೀಡಲು ಲಸಿಕೆಯನ್ನು ಹಾಕಲಾಗುವುದು. ಕೇಂದ್ರ ಆರೋಗ್ಯ ಸಚಿವಾಲಯ ಗರ್ಭವತಿ ಮಹಿಳೆಯರಿಗೂ (Pregnant Ladies) ಕೂಡ ಲಸಿಕೆ ಹಾಕಲು ಅನುಮತಿ ನೀಡಿದೆ.
Coronavirus Third Wave Impact On Children - ಮಕ್ಕಳಲ್ಲಿ ಕರೋನಾ ವೈರಸ್ ಸೋಂಕಿನ ಬಗ್ಗೆ ಭಯದ ಪರಿಸ್ಥಿತಿ ಇದೆ,ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮೂರನೇ ಅಲೆಯ (Coronavirus Third Wave) ಕುರಿತು. ಈ ಬಗ್ಗೆ ಬುಧವಾರ ಸ್ಪಷ್ಟಪಡಿಸಿರುವ ಆರೋಗ್ಯ ಸಚಿವಾಲಯ (Union Health Ministry) ಹೆಚ್ಚಿನ ಮಕ್ಕಳು ಲಕ್ಷಣ ರಹಿತರಾಗಿದ್ದಾರೆ ಮತ್ತು ತುಂಬಾ ವಿರಳವಾಗಿ ಆಸ್ಪತ್ರೆಗೆ ಅವರಿಗೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಬೀಳುತ್ತದೆ.
ಡೆಲ್ಟಾ ಪ್ಲಸ್ ರೂಪಾಂತರಗಳು ವೇಗವಾಗಿ ಹರಡುತ್ತಿದ್ದು ಇದುವರೆಗೆ 48 ಪ್ರಕರಣಗಳು ವರದಿಯಾಗಿವೆ. ಈ ಹಿನ್ನಲೆಯಲ್ಲಿ 8 ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯವು ಕೆಲವು ಸೂಚನೆಗಳನ್ನು ನೀಡಿದೆ.
ಒಟ್ಟಾರೆ ದೇಶದಲ್ಲಿ ಪರಿಸ್ಥಿತಿ ಸ್ಥಿರವಾಗುತ್ತಿದೆ ಮತ್ತು ಹೆಚ್ಚಿನ ಸುಧಾರಣೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
ದೇಶದ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ರಾಜಕೀಯ ಅಂಕಗಳನ್ನು ಗಳಿಸುವ ಕೇಂದ್ರದ ಪ್ರಯತ್ನಗಳು ಅಸಹ್ಯಕರ ಎಂದು ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 68,020 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಕೋವಿಡ್ -19 ಪ್ರಕರಣಗಳ ಸಂಖ್ಯೆ ಸೋಮವಾರ (ಮಾರ್ಚ್ 29) 12,039,644 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಕೋ-ವಿನ್ 1.0 ರಿಂದ ಕೋ-ವಿನ್ 2.0 ಗೆ ಐಟಿ ಸಿಸ್ಟಮ್ ಪರಿವರ್ತನೆಯ ಹಿನ್ನೆಲೆಯಲ್ಲಿ, ಶನಿವಾರ ಮತ್ತು ಭಾನುವಾರ (ಫೆಬ್ರವರಿ 27 ಮತ್ತು 28) ಯಾವುದೇ ವ್ಯಾಕ್ಸಿನೇಷನ್ ಕಾರ್ಯ ಇರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಈಗ ೧೦ ರಾಜ್ಯಗಳಲ್ಲಿ ಉನ್ನತ ಮಟ್ಟದ ತ ತಂಡಗಳನ್ನು ನಿಯೋಜಿಸುವ ನಿರ್ಧಾರವನ್ನು ಕೈಗೊಂಡಿದೆ.
ಭಾರತದಲ್ಲಿ COVID-19 ರ ಯುಕೆ ರೂಪಾಂತರಕ್ಕೆ ಧನಾತ್ಮಕ ಪರೀಕ್ಷೆ ನಡೆಸಿದವರ ಸಂಖ್ಯೆ 150ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.ಅವೆಲ್ಲವನ್ನೂ ಆಯಾ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳಲ್ಲಿ ಒಂದೇ ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
Covid-19 Vaccination Program: ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದು ಸ್ವಯಂಪ್ರೇರಣೆಯಿಂದ ಮಾತ್ರ ಎಂದು ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ, ಇದೆ ವೇಳೆ ಯಾವುದೇ ಓರ್ವ ವ್ಯಕ್ತಿ ಸೋಂಕಿನಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂಬ ಸಲಹೆಯನ್ನು ಕೂಡ ಸಚಿವಾಲಯ ನೀಡಿದೆ. ಇದರ ಜೊತೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದೂ ಕೂಡ ಸಚಿವಾಲಯ ಹೇಳಿದೆ.
ಕೊರೊನಾ ಲಸಿಕೆಯನ್ನು ಮೊದಲು ಸಾರ್ವಜನಿಕ ಮತ್ತು ಖಾಸಗಿ ವಲಯದ ಸುಮಾರು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು, ಮತ್ತು ನಂತರ ಸುಮಾರು ಎರಡು ಕೋಟಿ ಮುಂಚೂಣಿ ಕಾರ್ಮಿಕರಿಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ತನ್ನ ಪ್ರಸ್ತುತಿಯಲ್ಲಿ ತಿಳಿಸಿದೆ.
ಕೊರೊನಾವೈರಸ್ ನಿಂದ 6 ಮಿಲಿಯನ್ ಗೂ ಹೆಚ್ಚು ರೋಗಿಗಳು ಭಾರತದಲ್ಲಿ ಈವರೆಗೆ ಚೇತರಿಸಿಕೊಂಡಿದ್ದಾರೆ, ಕೊರೊನಾ ಇರುವ ಅಧಿಕ ಐದು ರಾಜ್ಯಗಳಲ್ಲೇ ಹೆಚ್ಚಿನ ಚೇತರಿಕೆ ಪ್ರಕರಣಗಳು ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.