ಬೆಂಗಳೂರು: ಇಂದಿನಿಂದ ಮಧ್ಯ ಕರ್ನಾಟಕ ಭಾಗದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಲ್ಕು ದಿನಗಳ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಪ್ರವಾಸದಲ್ಲಿ ಶಾ ದೇವಸ್ಥಾನ, ಮಠ, ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಲಿಂಗಾಯತ ಧರ್ಮದ ರಾಜಕಾರಣದ ಮಧ್ಯೆ ಅಮಿತ್ ಶಾ ಕೂಡಲಸಂಗಮ ಭೇಟಿ ಮಹತ್ವ ಪಡೆದುಕೊಂಡಿದೆ.
ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯ ಪ್ರವಾಸದ ಫುಲ್ ಡೀಟೇಲ್ಸ್
ಅಮಿತ್ ಶಾ ಇಂದಿನ ರಾಜ್ಯ ಪ್ರವಾಸದ ವಿವರ
Heartily welcome BJP National President Shri @AmitShah to Karnataka. He will be visiting Ballary, Koppala, Kukanuru and Gangawati as a part of Karunadu Jagruthi Yatre. Here is his schedule for the 1st day: pic.twitter.com/cHyQIYNxt1
— BJP Karnataka (@BJP4Karnataka) April 27, 2018
- ಬೆಳಿಗ್ಗೆ 09:30ಕ್ಕೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ
- ಬೆಳಿಗ್ಗೆ 10:50ಕ್ಕೆ ಕನಕ ದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆವರೆಗೆ ರೋಡ ಶೋ
- ಮಧ್ಯಾಹ್ನ 12:00ಕ್ಕೆ ಹೋಟೆಲ್ ರಾಯಲ್ ಫೋರ್ಟ್ ನಲ್ಲಿ ಸಂಘಟನಾತ್ಮಕ ಸಭೆ
- ಮಧ್ಯಾಹ್ನ 03:00ಕ್ಕೆ ಶಾರದಾ ಟಾಕೀಸ್ ನಲ್ಲಿ ಮತ್ತೊಂದು ಸಂಘಟನಾತ್ಮಕ ಸಭೆ
- ಸಂಜೆ 04:00ಕ್ಕೆ ಗವಿ ಮಠಕ್ಕೆ ಭೇಟಿ
- ಸಂಜೆ 05:20ಕ್ಕೆ ಕುಕನೂರಿನಲ್ಲಿ ಸಾರ್ವಜನಿಕ ಸಭೆ
- ಸಂಜೆ 06:50ಕ್ಕೆ ಗಂಗಾವತಿಯಲ್ಲಿ ಸಾರ್ವಜನಿಕ ಸಭೆ