ಹಾಲಿನ ದರ ಏರಿಕೆ ಬಿಸಿ : ಲೀಟರ್ ಹಾಲಿಗೆ ಮೂರು ರೂ. ಹೆಚ್ಚಳ ಸಾಧ್ಯತೆ : ಮುಂದಿನ ವಾರದಿಂದಲೇ ಹೊಸ ದರ ಜಾರಿ

Milk Price Hike : ಅಧಿಕಾರಿಗಳ ಮನವಿಯಂತೆ ಸರ್ಕಾರ ದರ ಏರಿಕೆ ಮಾಡಿದರೆ ಲೀಟರ್ ಹಾಲಿನ ದರ 5 ರೂಪಾಯಿಯಷ್ಟು ಹೆಚ್ಚಳವಾಗಲಿದೆ. ಹಾಲು ದರ ಏರಿಕೆಗೆ ಸಿಎಂ ಅಂಕಿತ ಒಂದೇ ಬಾಕಿ. 

Written by - Ranjitha R K | Last Updated : Jul 12, 2023, 09:48 AM IST
  • ಸದ್ಯದಲ್ಲೇ ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ.
  • ಹಾಲಿನ ದರ ಏರಿಕೆ ಖಚಿತ
  • ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ
ಹಾಲಿನ ದರ ಏರಿಕೆ ಬಿಸಿ : ಲೀಟರ್ ಹಾಲಿಗೆ ಮೂರು ರೂ. ಹೆಚ್ಚಳ ಸಾಧ್ಯತೆ : ಮುಂದಿನ ವಾರದಿಂದಲೇ ಹೊಸ ದರ ಜಾರಿ  title=

ಬೆಂಗಳೂರು :  ಸದ್ಯದಲ್ಲೇ  ಗ್ರಾಹಕರಿಗೆ ಹಾಲಿನ ದರ ಏರಿಕೆ ಬಿಸಿ ತಟ್ಟಲಿದೆ. ಹಾಲಿನ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಮುಂದಿನ ವಾರದಿಂದಲೇ ಹೊಸ ದರ ಜಾರಿಗೆ ಬರಲಿದೆ ಎನ್ನಲಾಗಿದೆ. ಅಧಿಕಾರಿಗಳ ಮನವಿಯಂತೆ ಸರ್ಕಾರ ದರ ಏರಿಕೆ ಮಾಡಿದರೆ ಲೀಟರ್ ಹಾಲಿನ ದರ 5 ರೂಪಾಯಿಯಷ್ಟು ಹೆಚ್ಚಳವಾಗಲಿದೆ. ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೆಎಂಎಫ್ ಪದಾಧಿಕಾರಿಗಳು ಸಮಾಲೋಚನೆ ಕೂಡಾ ನಡೆಸಿದ್ದಾರೆ. ಹಾಲು ದರ ಏರಿಕೆಗೆ ಸಿಎಂ ಅಂಕಿತ ಒಂದೇ ಬಾಕಿ. 

ಹಾಲಿನ ದರ ಏರಿಕೆ ಖಚಿತ : 
ರಾಜ್ಯದಲ್ಲಿ ಹಾಲಿನ ದರ ಏರಿಕೆ ಬಹುತೇಕ ಖಚಿತ ಎನ್ನಲಾಗಿದೆ. ಮುಂದಿನ ವಾರದಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.  ಈಗಾಗಲೇ  ಹಾಲಿನ ದರ ಏರಿಕೆ ವಿಚಾರವಾಗಿ  ಕೆಎಮ್ ಎಫ್ ಪದಾಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಶುಕ್ರವಾರ ಮತ್ತೆ ಕೆಎಮ್ ಎಫ್ ಪದಾಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ದರ ಏರಿಕೆ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. 

ಇದನ್ನೂ ಓದಿ : Reliance Jio: ಜಿಯೋ ತನ್ನ ಬಳಕೆದಾರರಿಗೆ 2 ಅಗ್ಗದ ಯೋಜನೆಗಳನ್ನು ಪರಿಚಯಿಸಿದೆ

ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ : 
ಇನ್ನು ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ದರ ಹೆಚ್ಚಿಸುವಂತೆ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ 5 ರೂಪಾಯಿಯಲ್ಲಿ ರೈತರಿಗೆ 3 ರೂಪಾಯಿ ಪ್ರೋತ್ಸಾಹ ದನ ಹಾಗೂ ಸಂಸ್ಕರಣ ವೆಚ್ಚ 2 ರೂಪಾಯಿ ಎಂದು ಕೆಎಂಎಫ್  ಪ್ರಸ್ತಾವನೆ ಸಲ್ಲಿಸಿದೆ. ಆದರೆ ಪ್ರತಿ ಲೀಟರ್ ಹಾಲಿಗೆ 2 ರಿಂದ ಮೂರು ರೂಪಾಯಿ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆ ಹೆಚ್ಚು. ಅಂದರೆ ಲೀಟರ್ ಹಾಲಿಗೆ 2 ರಿಂದ 3 ರೂಪಾಯಿಯಷ್ಟು ದರ ಏರಿಕೆ ಪಕ್ಕಾ ಎನ್ನಲಾಗುತ್ತಿದೆ. 

ಹಾಲಿನ ದರ ಏರಿಕೆ ಅನಿವಾರ್ಯ : 
ಕೆಎಂಎಫ್ ಪ್ರತಿ ಲೀಟರ್ ಹಾಲಿಗೆ  ರೈತರಿಗೆ ನೀಡುತ್ತಿರುವ ದರಕ್ಕಿಂತ  ಖಾಸಗಿ ವ್ಯಕ್ತಿಗಳು ಅಧಿಕ ದರ ನೀಡುತ್ತಿದ್ದಾರೆ. ಹಾಗಾಗಿ ರೈತರು ಖಾಸಗಿ ಹಾಲು ಮಾರಟದಾರರಿಗೆ ಹಾಲನ್ನು ನೀಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಹಾಲಿನ ದರ ನಮ್ಮ ರಾಜ್ಯಕ್ಕಿಂತ ಹೆಚ್ಚಿದೆ.  ಅಲ್ಲದೆ ಪಶು ಸಂಗೋಪನೆ ವೆಚ್ಚ ಹೆಚ್ಚಳವಾಗಿದೆ. 
ರೈತರು ಹಾಲು ಉತ್ಪಾದಕ ಸಂಘಗಳು ಕಷ್ಟದಲ್ಲಿವೆ. ಹಾಗಾಗಿ ರಾಜ್ಯದಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯ ಎನ್ನುವುದು  ಕೆಎಂಎಫ್ ಪದಾಧಿಕಾರಿಗಳ ವಾದ . 

ಇದನ್ನೂ ಓದಿ : Maruti Car Offers: ಮಾರುತಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಮತ್ತೊಂದೆಡೆ, ತರಕಾರಿ ಬೆಲೆ ಕೂಡಾ ಗಗನಕ್ಕೆರಿದು ಇದರ ಬೆಲೆ ಗ್ರಾಹಕರಿಗೆ ಮಾತ್ರವಲ್ಲ ವ್ಯಾಪಾರಿಗಳಿಗೂ ತಟ್ಟಿದೆ. ಟೋಮಟೊ, ಬೀನ್ಸ, ಕ್ಯಾರೆಟ್, ಶುಂಟಿ ಹಲವರು ತರಕಾರಿಗಳ  ಬೆಲೆ ತೀವ್ರವಾಗಿ ಹೆಚ್ಚಳವಾಗಿದ್ದು, ಜನ ಸಾಮಾನ್ಯರು ತರಕಾರಿ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ವ್ಯಾಪರ ಡಲ್ ಇರುವುದರಿಂದ ಅಂಗಡಿ ಬಾಡಿಗೆ ಕಟ್ಟಲು ವ್ಯಾಪಾರಿಗಳು ಪರದಾಡುವಂತಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News