ಹುಡುಗಿ ಪಕ್ಕ ಕೂತಿದ್ದೀಯಾ ಎಂದು ವ್ಯಕ್ತಿಗೆ ಯುವಕರ ಗುಂಪಿನಿಂದ ಮನಬಂದಂತೆ ಹಲ್ಲೆ..!

ಗುಂಡ್ಲುಪೇಟೆ  ತಾಲೂಕಿನ  ಮಂಗಲ ಗ್ರಾಮದ ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು ಒಳೇಟಿನಿಂದ ಚಾಮರಾಜನಗರ  ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್, ಗೋಪಾಲ ಹಾಗೂ ತೇಜು ಎಂಬವರ  ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Written by - Yashaswini V | Last Updated : Jun 22, 2023, 10:44 AM IST
  • ನಾಗೇಶ್ ಮತ್ತು ಅವರ ತಾಯಿ ಬಸ್ ಹತ್ತಲು ನಿಂತ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಗೇಶ್ ಪಕ್ಕ ನಿಂತಿದ್ದನ್ನು ಕಂಡು ಸಹಿಸಿದ ಹುಡುಗರು
  • ರೊಚ್ಚಿಗೆದ್ದು ನಾಗೇಶ್‍ನ ಬಟ್ಟೆ ಹರಿದು ಹಲ್ಲೆ
  • ನಾಲ್ಕು ಆರೋಪಿಗಳೊಂದಿಗೆ ಇತರರು ನಾಗೇಶ್‍ನ ಹಲ್ಲೆಯ ಜೊತೆಗೆ ಚಪ್ಪಲಿಯಲ್ಲೂ ಹೊಡೆದಿದ್ದಾರೆ‌.
ಹುಡುಗಿ ಪಕ್ಕ ಕೂತಿದ್ದೀಯಾ ಎಂದು ವ್ಯಕ್ತಿಗೆ ಯುವಕರ ಗುಂಪಿನಿಂದ ಮನಬಂದಂತೆ ಹಲ್ಲೆ..! title=

ಚಾಮರಾಜನಗರ: ಹುಡುಗಿ ಪಕ್ಕ ಕೂತಿದಿಯಾ ಎಂದು ಆಕ್ರೋಶಗೊಂಡ ಹುಡುಗರ ದಂಡು ವ್ಯಕ್ತಿಯೊಬ್ಬನ ಬಟ್ಟೆ ಹರಿದು, ಚಪ್ಪಲಿಯಲ್ಲಿ ಹೊಡೆದು ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ಹಂಗಳ ಗ್ರಾಮದಲ್ಲಿ ನಡೆದಿದೆ.

ಗುಂಡ್ಲುಪೇಟೆ  ತಾಲೂಕಿನ  ಮಂಗಲ ಗ್ರಾಮದ ನಾಗೇಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು ಒಳೇಟಿನಿಂದ ಚಾಮರಾಜನಗರ  ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್, ಗೋಪಾಲ ಹಾಗೂ ತೇಜು ಎಂಬವರ  ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಲ ಗ್ರಾಮದ ನಾಗೇಶ್ ಮತ್ತು ಅವರ ತಾಯಿಗೆ ಹುಷಾರಿಲ್ಲದ ಕಾರಣ ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದ ಬಳಿಕ ಮಂಗಲದ ಬಸ್‍ಗೆ ಹೋಗಲು ಹಂಗಳ ಬಸ್ ನಿಲ್ಲುವ ಸ್ಥಳಕ್ಕೆ ಬಂದು ನಿಂತಿದ್ದಾರೆ.

ಇದನ್ನೂ ಓದಿ- ವಿವಿಧ ಪ್ರಕರಣಗಳ ಅಕ್ರಮ ಮದ್ಯ ದಾಸ್ತಾನು ನಾಶ

ನಾಗೇಶ್ ಮತ್ತು ಅವರ ತಾಯಿ ಬಸ್ ಹತ್ತಲು ನಿಂತ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಗೇಶ್ ಪಕ್ಕ ನಿಂತಿದ್ದನ್ನು ಕಂಡು ಸಹಿಸಿದ ಹುಡುಗರು ರೊಚ್ಚಿಗೆದ್ದು ನಾಗೇಶ್‍ನ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ.  ನಾಲ್ಕು ಆರೋಪಿಗಳೊಂದಿಗೆ ಇತರರು ನಾಗೇಶ್‍ನ ಹಲ್ಲೆಯ ಜೊತೆಗೆ ಚಪ್ಪಲಿಯಲ್ಲೂ ಹೊಡೆದಿದ್ದಾರೆ‌.

ಹಲ್ಲೆ ನಡೆಸುವ ವೇಳೆ ಯುವಕರ ಗುಂಪಲ್ಲಿ ಓಬ್ಬಾತ ಬ್ಲೇಡ್‍ನಿಂದ ನಾಗೇಶ್‍ನ ಮುಖಕ್ಕೆ ಚುಚ್ಚಲು ಮುಂದಾದಾಗ ನಾಗೇಶ್ ತನ್ನ ಕೈ ಅಡ್ಡ ಹಾಕಿದಾಗ ಕೈಗಳಿಗೆ ಬ್ಲೇಡ್ ಏಟು ಬಿದ್ದಿವೆ.

ಇದನ್ನೂ ಓದಿ- ರಾತ್ರಿ ಓಡಾಡಬೇಡ ಎಂದಿದ್ದಕ್ಕೆ ಚೂರಿ ಇರಿದ ಪುಡಿ ರೌಡಿ: ಮಾಜಿ ಸಿಎಂ ಮನೆ ಕೂಗಳತೆ ದೂರದಲ್ಲೇ ಅಟ್ಟಹಾಸ

ಹಾಡಹಗಲೇ ಯಾವುದೇ ಕಾರಣ ಇಲ್ಲದೇ ವ್ಯಕ್ತಿಗೆ ಹಲ್ಲೆ ಮಾಡಿರುವುದು ಆತಂಕಕಾರಿಯಾಗಿದೆ‌. ನಾಲ್ವರನ್ನು ಬಂಧಿಸಲು ಗುಂಡ್ಲುಪೇಟೆ ಪೊಲೀಸರು ತಂಡವನ್ನು ರಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News