Chikkaballapur: ಬುದ್ದಿ ಹೇಳಿದ್ದಕ್ಕೆ ಪೊಲೀಸ್ ಅಧಿಕಾರಿಯ ಸ್ಕೂಟರ್‌ಗೆ ಬೆಂಕಿ ಇಟ್ಟ ಭೂಪ!

Chikkaballapur Crime News: ಬುದ್ದಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ಎಎಸ್‍ಐ(ASI)  ಸ್ಕೂಟರ್‍ಗೆ ಬೆಂಕಿ ಇಟ್ಟು ವಿಕೃತಿ ಮೆರೆದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

Written by - Zee Kannada News Desk | Last Updated : Sep 28, 2023, 07:43 PM IST
  • ಬುದ್ದಿ ಹೇಳಿದ್ದಕ್ಕೆ ASI ಸ್ಕೂಟರ್‍ಗೆ ಬೆಂಕಿ ಇಟ್ಟು ವಿಕೃತಿ ಮೆರೆದ ಭೂಪ
  • ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ
  • ಸಹೋದರರ ಜೊತೆ ಜಗಳವಾಡಿದ್ದಕ್ಕೆ ಬುದ್ದಿ ಹೇಳಿದ್ದ ASI ನಂಜುಂಡ ಶರ್ಮಾ
Chikkaballapur: ಬುದ್ದಿ ಹೇಳಿದ್ದಕ್ಕೆ ಪೊಲೀಸ್ ಅಧಿಕಾರಿಯ ಸ್ಕೂಟರ್‌ಗೆ ಬೆಂಕಿ ಇಟ್ಟ ಭೂಪ! title=
ಸ್ಕೂಟರ್ಗೆ ಬೆಂಕಿ ಇಟ್ಟ ಭೂಪ!

ಚಿಕ್ಕಬಳ್ಳಾಪುರ: ಬುದ್ದಿ ಹೇಳಿದ್ದಕ್ಕೆ ವ್ಯಕ್ತಿಯೊಬ್ಬ ಎಎಸ್‍ಐ(ASI)  ಸ್ಕೂಟರ್‍ಗೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಗುಡಿಬಂಡೆಯ ವಿವೇಕಾನಂದ ನಗರದ ಹಣ್ಣಿನ ವ್ಯಾಪಾರಿ ಖಲೀಂ ಉಲ್ಲಾನೇ ಪೊಲೀಸ್ ಅಧಿಕಾರಿಯ ಹೊಸ ಸ್ಕೂಟರ್‍ಗೆ ಬೆಂಕಿ ಇಟ್ಟಿರುವ ಭೂಪ. ಈತ ತನ್ನ ಸಹೋದರರ ಜೊತೆಗೆ ಜಗಳವಾಡಿ ಅವರ ಹಲ್ಲೆ ಮಾಡಿದ್ದ. ಘಟನೆಯಲ್ಲಿ ಖಲೀಂ ಉಲ್ಲಾ ಮತ್ತು ಆತನ ಸಹೋದರರು ಗಾಯಗೊಂಡಿದ್ದರು. ಹೀಗಾಗಿ ಚಿಕಿತ್ಸೆಗೆಂದು ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ನಾಳೆ ಸಿ‌ಡಬಲ್ಯು‌ಎಮ್‌ಎ ಹೈವೋಲ್ಟೇಜ್‌ ಮೀಟಿಂಗ್: ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಗಂಭೀರ ಚರ್ಚೆ ಸಾಧ್ಯತೆ

ಆದರೆ ಆಸ್ಪತ್ರೆಯಲ್ಲಿಯೂ ಖ್ಯಾತೆ ತೆಗೆದಿದ್ದ ಖಲೀಂ ಉಲ್ಲಾ ವಿನಾಕಾರಣ ಗಲಾಟೆ ಮಾಡುತ್ತಿದ್ದನಂತೆ. ಈ ಬಗ್ಗೆ ಮಾಹಿತಿ ತಿಳಿದ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಗುಡಿಬಂಡೆ ಎಎಸ್‍ಐ ನಂಜುಂಡ ಶರ್ಮಾ ಅವರು ಇತರ ಪೊಲೀಸರೊಂದಿಗೆ ಆಗಮಿಸಿ ಖಲೀಂ ಉಲ್ಲಾಗೆ ಬೈದು ಬುದ್ದಿ ಹೇಳಿದ್ದಾರೆ.  

ನಂತರ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಖಲೀಂ ಉಲ್ಲಾ ಮತ್ತೆ ಮನೆಗೆ ಬಂದು ಸಹೋದರರ ಕಾರಿನ ಗಾಜು ಒಡೆದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಆಗ ಮತ್ತೆ ಮನೆ ಬಳಿ ಬಂದ ಪೊಲೀಸರು ಬೈದು ಆತನಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.  ರಾತ್ರಿಪೂರ್ತಿ ಈತನ ಗಲಾಟೆಯಿಂದ ಸುಸ್ತಾಗಿದ್ದ ಎಎಸ್‍ಐ ನಂಜುಂಡ ಶರ್ಮಾ ಅವರು ಬೆಳಗ್ಗೆ ತಮ್ಮ ಮನೆಗೆ ಹೋಗಿದ್ದರು.

ಇದನ್ನೂ ಓದಿ: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

ತನಗೆ ಬುದ್ದಿ ಹೇಳಿದ್ದಕ್ಕೆ ಕೋಪಗೊಂಡಿದ್ದ ಖಲೀಂ ಉಲ್ಲಾ ನಂಜುಂಡ ಶರ್ಮಾರನ್ನು ಹಿಂಬಾಲಿಸಿಕೊಂಡು ಅವರ ಮನೆಗೆ ಬಂದಿದ್ದಾನೆ. ಬಳಿಕ ಎಎಸ್‍ಐ ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಹೊಸ ಸ್ಕೂಟರ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಬೆಂಕಿ ಹಚ್ಚಿದ ಪರಿಣಾಮ ಹೊಸ ಸ್ಕೂಟರ್ ಸಂಪೂರ್ಣ ಸುಟ್ಟು ಕರಲಾಗಿದೆ. ಕೂಡಲೇ ಖಲೀಂ ಉಲ್ಲಾನನ್ನು ಬಂಧಿಸಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News