ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಚಾಲಾಕಿ ಅಂದರ್

Bengaluru Crime: ಬಂಧಿತ ಆರೋಪಿ ಸೈಯದ್ ಸರ್ಫರಾಜ್ ಅಹಮದ್ ನಗರದ ಪೂರ್ವ ವಿಭಾಗದ ಹಲವು ಪೊಲೀಸರಿಂದ ಹಣ ಸುಲಿಗೆ (Extorting Money From Police) ಮಾಡಿದ್ದಾನೆ ಎಂಬ ಆರೋಪವಿದೆ. 

Written by - VISHWANATH HARIHARA | Last Updated : Aug 6, 2024, 10:02 AM IST
  • ಪ್ರತಿ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಚಾಲಾಕಿ ಅಸಾಮಿ
  • ಠಾಣೆಗೆ ಹೋಗಿ ಸಿಬ್ಬಂದಿ ಅಧಿಕಾರಿಗಳನ್ನ ಬಳಿ ನೈಸ್ ಮಾಡ್ತಿದ್ದ
  • ನೈಸ್ ಮಾಡಿ ಠಾಣೆಯ ಒಳಗು ಕೂಡ ಎಂಟ್ರಿ ತೆಗೆದುಕೊಳ್ತಾ ಇದ್ದ
ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಚಾಲಾಕಿ ಅಂದರ್ title=

Extorting Money From Police: ಪೊಲೀಸರು ಲಂಚ ಪಡೆಯುತ್ತಾರೆ. ಜನರ ಸುಲಿಗೆ ಮಾಡುತ್ತಾರೆ ಎಂಬ ಆರೋಪಗಳು ಸಹಜವಾಗಿ ಬರುತ್ತವೆ. ಆದರೆ ಇಲ್ಲೊಬ್ಬ ಚಾಲಕಿ ಪೊಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ ಎಂದರೆ ನೀವು ನಂಬಲೇಬೇಕು. ಈತನ ಹೆಸರು ಸೈಯದ್ ಸರ್ಫರಾಜ್ ಅಹಮದ್ ಅಂತಾ. ಸದ್ಯ ಶಿವಾಜಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿ ಸೈಯದ್ ಸರ್ಫರಾಜ್ ಅಹಮದ್ ನಗರದ ಪೂರ್ವ ವಿಭಾಗದ ಹಲವು ಪೊಲೀಸರಿಂದ ಹಣ ಸುಲಿಗೆ (Extorting Money From Police) ಮಾಡಿದ್ದಾನೆ ಎಂಬ ಆರೋಪವಿದೆ. ಇದಕ್ಕೆ ಈತ ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತಿದ್ದ. ‌ಪ್ರತಿ ಪೊಲೀಸ್ ಠಾಣೆಗೆ ಹೋಗಿ ಸಿಬ್ಬಂದಿ ಅಧಿಕಾರಿಗಳನ್ನ ಬಳಿ ಮಾತನಾಡಿ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಈತನ ಟಾರ್ಗೆಟ್ ಸೆಲ್ ಒಳಗೆ ಇರುವ ಆರೋಪಿಗಳು. 

ಇದನ್ನೂ ಓದಿ- ಮೊಮ್ಮಕ್ಕಳಿಗಾಗಿ ಎರಡೇ ಎರಡು ಟೊಮಾಟೊ ಹಣ್ಣು ಕಿತ್ತ ವೃದ್ಧ ಮಹಿಳೆ, ಹೊಲದ ಮಾಲೀಕ ಮಾಡಿದ್ದೇನು?

ಸೆಲ್ ಬಳಿ ತೆರಳಿ  ಆರೋಪಿಗಳನ್ನ ನೈಸ್ ಆಗಿ ಮಾತಾಡಿಸಿ ಅವರ ಬಳಿ ತನ್ನ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸುತ್ತಿದ್ದ. ಆರೋಪಿಯ ಹಿನ್ನೆಲೆ ಏನೂ , ಯಾವ ಕೇಸ್ ಅಂತಾ ಪೂರ್ವಪರ ತಿಳಿದುಕೊಳ್ಳುತ್ತಿದ್ದ. ಇಷ್ಟು ವಿಷಯ ತಿಳಿದುಕೊಂಡವನೇ ಪೊಲೀಸರನ್ನ ಹಿಂಡಿ ಹಿಪ್ಪೆ ಮಾಡುತಿದ್ದ. ಅಕ್ರಮವಾಗಿ ಆರೋಪಿಗಳನ್ನು ಪೊಲೀಸರು ಠಾಣೆಯಲ್ಲಿ (Police Station) ಇಟ್ಟಕೊಂಡಿದ್ದಾರೆ ಎಂದು‌ ನೇರವಾಗಿ ರಾಜ್ಯ ಮಾನವ ಹುಕ್ಕಗಳ ಆಯೋಗಕ್ಕೆ ದೂರು ಕೊಡುತ್ತಿದ್ದ. ಬಳಿಕ ದೂರು ಹಿಂಪಡೆಯುವ ಸಲುವಾಗಿ ಪೊಲೀಸರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. 

ಇದನ್ನೂ ಓದಿ- ಪ್ರವಾಸೋದ್ಯಮ ಇಲಾಖೆಯಲ್ಲಿನ ಅಕ್ರಮ ಹಣ ವರ್ಗಾವಣೆ: ಬ್ಯಾಂಕ್ ಉದ್ಯೋಗಿ ಬಂಧನ

ಅಂತೆಯೇ ಶಿವಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್  ಕ್ರೈಂ ನಂಬರ್ 82 ಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದ. ಬಳಿಕ ದೂರು ವಾಪಸ್ ಪಡೆಯಲು ಶಿವಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಬಳಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ. ಡಿಮ್ಯಾಂಡ್ ಮಾಡಿದ್ದ ಹಣವನ್ನು ಪಡೆಯಲು ಬಂದಾಗ ಈತನನ್ನು ಬಂಧಿಸಲು ಪೊಲೀಸರು ಪ್ಲಾನ್ ಮಾಡಿ ನೆರವು ಪೊಲೀಸ್ ಚೌಕಿ ಬಳಿ ಬರಲು ಹೇಳಿದ್ರು. ಈ ವೇಳೆ ಬಂದ ಸೈಯದ್ ಸರ್ಪರಾಜ್ 25 ಸಾವಿರ ಹಣ ಪಡೆದು ಎಸ್ಕೇಪ್ ಆಗಿದ್ದ.‌ಸ ದ್ಯ ಎಸ್ಕೇಪ್ ಆಗಿದ್ದ ಆರೋಪಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೂ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಸುಮಾರು 30 ಕ್ಕೂ ಅಧಿಕ ಕಡೆ ಈತ ಪೊಲೀಸರಿಗೆ ಬೆದರಿಕೆ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News