ಗಂಡನ ಕಾಟಕ್ಕೆ ತವರು ಸೇರಿದ ಹೆಂಡತಿ: ರೊಚ್ಚಿಗೆದ್ದು ಅತ್ತೆಗೆ ಚೂರಿ ಇರಿದ ಅಳಿಯ

ಮನೋಜ್ ಹಾಗೂ ಮಂಡ್ಯ ಮೂಲದ ವರ್ಷಿತಾ ಅಂತ, ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಬೆಳ್ಳಂದೂರು ಸಮೀಪ ಬಾಡಿಗೆ ಮನೆ ಮಾಡಿಕೊಂಡಿದ್ದರು. ಆರಂಭದಲ್ಲಿ ಇಬ್ಬರು ಕೂಡ ದುಡಿದು ಜೀವನ ಮಾಡುತ್ತಿದ್ದರು. ಆದರೆ......

Written by - VISHWANATH HARIHARA | Edited by - Krishna N K | Last Updated : Jun 14, 2023, 05:05 PM IST
  • ಮನೋಜ್ ವರ್ಷಿತಾ ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು.
  • ಅದ್ಯಾಕೋ ಇವನಿಗೆ ಪ್ರೀತಿಸುವಾಗ ಇದ್ದ ನಂಬಿಕೆ ಈಗ ಇಲ್ಲ, ಇತ್ತ ಹೆಂಡತಿ ತವರು ಮನೆ ಸೇರಿದ್ದಳು.
  • ಆಶ್ರಯ ಕೊಟ್ಟ ಅಮ್ಮನಿಗೆ ಅಳಿಯ ಮಾಡಿದ್ದು ಮಾತ್ರ ಘೋರ ದುರಂತ.
ಗಂಡನ ಕಾಟಕ್ಕೆ ತವರು ಸೇರಿದ ಹೆಂಡತಿ: ರೊಚ್ಚಿಗೆದ್ದು ಅತ್ತೆಗೆ ಚೂರಿ ಇರಿದ ಅಳಿಯ title=

ಬೆಂಗಳೂರು : ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಸಂಸಾರದಲ್ಲಿ ಸಣ್ಣ, ಪುಟ್ಟ ಜಗಳ ಕಾಮನ್. ಗಂಡ ಕೂಡ ದುಡಿದು ಸಂಸಾರದ ನೌಕೆ ಸಾಗಿಸಬೇಕು. ಅದ್ಯಾಕೋ ಇವನಿಗೆ ಪ್ರೀತಿಸುವಾಗ ಇದ್ದ ನಂಬಿಕೆ ಈಗ ಇಲ್ಲ, ಇತ್ತ ಹೆಂಡತಿ ತವರು ಮನೆ ಸೇರಿದ್ದಳು. ಆಶ್ರಯ ಕೊಟ್ಟ ಅಮ್ಮನಿಗೆ ಅಳಿಯ ಮಾಡಿದ್ದು ಮಾತ್ರ ಘೋರ ದುರಂತ.

ವೇಮಗಲ್ ಮೂಲದ ಮನೋಜ್ ಹಾಗೂ ಮಂಡ್ಯ ಮೂಲದ ವರ್ಷಿತಾ ಅಂತ, ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಬೆಳ್ಳಂದೂರು ಸಮೀಪ ಬಾಡಿಗೆ ಮನೆ ಮಾಡಿಕೊಂಡಿದ್ದರು. ಆರಂಭದಲ್ಲಿ ಇಬ್ಬರು ಕೂಡ ದುಡಿದು ಜೀವನ ಮಾಡುತ್ತಿದ್ದರು ಅದ್ಯಾಕೋ ಬರ್ತಾ ಬರ್ತಾ ಕುಡಿತಕ್ಕೆ ದಾಸನಾಗಿದ್ದ ಮನೋಜ್ ಫುಲ್ ಟೈಂ ಕುಡಿಯೋದೆ ಕೆಲಸ ಮಾಡಿಕೊಂಡಿದ್ದ. 

ಇದನ್ನೂ ಓದಿ: ಬೆಸ್ಕಾಂ ಗ್ರಾಹಕರೇ ನಕಲಿ ಬಿಲ್‌ ಬಗ್ಗೆ ಎಚ್ಚರವಿರಲಿ !

ಇನ್ನೂ ವರ್ಷಿತಾ ಎಷ್ಟೇ ಬುದ್ದಿ ಹೇಳಿದರು ಕ್ಯಾರೆ ಎನ್ನದೇ  ಆಕೆಯ ಮೇಲೆ ಅನುಮಾನ ಪಡೋದು, ದೈಹಿಕವಾಗಿ ಹಿಂಸೆ ಕೋಡೊದನ್ನ ಮಾಡ್ತಿದ್ದನಂತೆ. ಇದರಿಂದ ಬೇಸತ್ತು ತವರು ಸೇರಿದ್ದ ವರ್ಷಿತಾಗೆ ಮನೆಯ ಹಿರಿಯರು ಬುದ್ದಿ ಹೇಳಿ ವಾಪಸ್‌ ಕಳುಹಿಸಿದ್ರು. ಆದ್ರೂ ಮನೋಜ್ ಮಾತ್ರ ಮತ್ತೆ ಅದೆ ತರ ಕಾಟ ಕೊಡೊದನ್ನ ಮುಂದುವರೆಸಿದ್ದ. ಇದರಿಂದ ಬೇಸತ್ತ ವರ್ಷಿತಾ ತವರು ಮನೇ ಸೇರಿದ್ದಳು. 

ಆರು ತಿಂಗಳು ಕಳೆದ್ರು ವರ್ಷಿತಾ‌ ಗಂಡನ ಮನೆಗೆ ಬಂದಿರಲಿಲ್ಲ. ಇನ್ನೂ ಕಾಲ್ ಮಾಡಿದ್ರೆ ಅತ್ತೆ ಗೀತಾ ಅವಳು ನಿನ್ನ ಜತೆ ಬರೋದಿಲ್ಲ ಕಾಲ್, ಮೆಸೇಜ್ ಮಾಡೋದು ಬಿಟ್ಟು ಬಿಡು ಅಂತ ಹೇಳಿದ್ರಂತೆ. ಮಗಳಿಗೆ ಬುದ್ದಿ ಹೇಳಿ ಕಳಿಸಬೇಕಾದ ಅಮ್ಮನೇ  ಕುಮ್ಮಕ್ಕು ಕೊಡ್ತಿದ್ದಾಳೆ ಎಂದು ಮನೋಜ್ ರೊಚ್ಚಿಗೆದ್ದಿದ್ದ. 

ಇದನ್ನೂ ಓದಿ: ಮಳೆಗಾಲದ ಸಿದ್ದತೆ ಕುರಿತು ಮುಖ್ಯ ಆಯುಕ್ತರಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ

ವರ್ಷಿತಾ ಮೊನ್ನೆ ಸಂಬಂಧಿಕರಿಗೆ ಹುಷಾರಿಲ್ಲ ಎಂದು ಮಂಡ್ಯಗೆ ಹೋಗಿದ್ದಾಳೆ. ಈ ವೇಳೆ  ಅತ್ತೆ ಮನೆಗೆ ಬಂದ ಮನೋಜ್ ಆಕೆಯ ಜೊತೆ ಜಗಳವಾಡಿ  ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.ಇನ್ನೂ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಗೀತಾಳನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ಬಂದ ಮಗಳು ಗಂಡನ ವಿರುದ್ಧ ಬೆಳ್ಳಂದೂರು  ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆರೋಪಿಯನ್ನ ಅರೆಸ್ಟ್ ಮಾಡಿರೋ ಖಾಕಿ ಟೀಂ ಇನ್ವಿಸ್ಟಿಗೇಷನ್ ನಡೆಸುತ್ತಿದ್ದಾರೆ. ಏನೇ ಹೇಳಿ ಪ್ರೀತಿಸುವಾಗ ಇರುವ ನಂಬಿಕೆ, ಪ್ರೀತಿ, ಕಾಳಜಿ ದುಡಿದು ಸಂಸಾರ ಮಾಡೋವಾಗ ಮಾತ್ರ ಯಾಕೆ ಇರೋದಿಲ್ಲ ಎಂಬುದಂತು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News