Mandya: ‘ಅಪ್ಪು’ ಪುಣ್ಯಸ್ಮರಣೆಯ ದಿನವೇ ಯುವ ಅಭಿಮಾನಿ ಆತ್ಮಹತ್ಯೆ..!

ಅಪ್ಪು ಪುಣ್ಯಸ್ಮರಣೆ ಪ್ರಯುಕ್ತ ಅನ್ನಸಂತರ್ಪಣೆ ಕೂಡ ನಡೆಸಿದ್ದ ಕಿರಣ್ ಕಾರ್ಯಕ್ರಮದ ಬಳಿಕ ಮನೆಗೆ ಬಂದು ಕಣ್ಣೀರಾಕಿದ್ದ.

Written by - Puttaraj K Alur | Last Updated : Oct 30, 2022, 09:04 AM IST
  • ‘ಅಪ್ಪು’ ಪುಣ್ಯಸ್ಮರಣೆ ದಿನವೇ ಮಂಡ್ಯದಲ್ಲಿ ಯುವ ಅಭಿಮಾನಿ ಆತ್ಮಹತ್ಯೆ
  • ‘ಅಪ್ಪು’ ಇಲ್ಲದ ಜೀವನವೇ ಬೇಡವೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ
  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಘಟನೆ
Mandya: ‘ಅಪ್ಪು’ ಪುಣ್ಯಸ್ಮರಣೆಯ ದಿನವೇ ಯುವ ಅಭಿಮಾನಿ ಆತ್ಮಹತ್ಯೆ..! title=
ಯುವ ಅಭಿಮಾನಿ ಆತ್ಮಹತ್ಯೆ!

ಮಂಡ್ಯ: ಕರುನಾಡ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ ದಿನವೇ ಯುವ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ಅಪ್ಪು’ ಇಲ್ಲದ ಜೀವನ ಬೇಡವೆಂದು ನೇಣು ಬಿಗಿದುಕೊಂಡು ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಪುನೀತ್‌ ಶಾಶ್ವತ ರಾಯಭಾರಿಯಾಗಲಿ: ಮಕ್ಕಳಿಗೆ ʻಗಂಧದ ಗುಡಿʼ ಉಚಿತ ವೀಕ್ಷಣೆ ಅವಕಾಶಕ್ಕೆ ಎಎಪಿ ಆಗ್ರಹ

ಹೊಸ ಆನಂದೂರು ಗ್ರಾಮದ ಕಿರಣ್(22) ಮೃತ ಅಪ್ಪು ಅಭಿಮಾನಿಯಾಗಿದ್ದಾನೆ. ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರಿಣ್ ಪೂಜೆ ಸಲ್ಲಿಸಿದ್ದ.   

ಅಪ್ಪು ಪುಣ್ಯಸ್ಮರಣೆ ಪ್ರಯುಕ್ತ ಅನ್ನಸಂತರ್ಪಣೆ ಕೂಡ ನಡೆಸಿದ್ದ ಕಿರಣ್ ಕಾರ್ಯಕ್ರಮದ ಬಳಿಕ ಮನೆಗೆ ಬಂದು ‘ಅಪ್ಪು’ಗಾಗಿ ಕಣ್ಣೀರಾಕಿದ್ದ. ಬಳಿಕ ಮನನೊಂದು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೆಆರ್‍ಎಸ್‍ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Samantha: ವಿಚಿತ್ರ ಕಾಯಿಲೆಯಿಂದ ಬಳುತ್ತಿರುವ ಖ್ಯಾತ ನಟಿ ಸಮಂತಾ ರುತ್ ಪ್ರಭು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News