Payel Mukherjee : ದಾರಿ ಮಧ್ಯ ಖ್ಯಾತ ನಟಿ ಪಾಯಲ್ ಮೇಲೆ ಹಲ್ಲೆ..! ಕಾರಿನ ಗ್ಲಾಸ್‌ ಒಡೆದು ಆಗಂತುಕ..

Attack on Payel Mukherjee : ಖ್ಯಾತ ನಟಿಯ ಕಾರಿನ ಮೇಲೆ ಹಲ್ಲೆ ನಡೆದಿದೆ.. ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ. ಘಟನೆಯಿಂದ ಹೆದರಿ ಕಣ್ಣೀರು ಹಾಕುತ್ತಾ.. ಭಯದಲ್ಲಿಯೇ ಬಿಕ್ಕು ಬಿಕ್ಕು ಅಳುತ್ತಾ ವಿಡಿಯೋ ಮೂಲಕ ನಟಿ ನೋವನ್ನು ತೋಡಿಕೊಂಡಿದ್ದಾಳೆ.. ಅಷ್ಟಕ್ಕೂ ಆಗಿದ್ದೇನು..? ಬನ್ನಿ ನೋಡೋಣ..

Written by - Krishna N K | Last Updated : Aug 24, 2024, 05:12 PM IST
    • ಖ್ಯಾತ ನಟಿಯ ಕಾರಿನ ಮೇಲೆ ಹಲ್ಲೆ ನಡೆದಿದೆ..
    • ನಟಿಯ ಕಾರಿನ ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ.
    • ಘಟನೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
Payel Mukherjee : ದಾರಿ ಮಧ್ಯ ಖ್ಯಾತ ನಟಿ ಪಾಯಲ್ ಮೇಲೆ ಹಲ್ಲೆ..! ಕಾರಿನ ಗ್ಲಾಸ್‌ ಒಡೆದು ಆಗಂತುಕ.. title=

Payel Mukherjee : ಸಿನಿಮಾ ನಟಿ-ನಟರು ಕಾಣಿಸಿಕೊಂಡರೆ ಅಭಿಮಾನಿಗಳು ಫೋಟೊ ತೆಗೆದುಕೊಳ್ಳು ಮುಗಿಬಿಳುತ್ತಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ನಾಯಕಿಯನ್ನು ಹತ್ತಿರದಿಂದ ನೋಡಲು ಅವರನ್ನು ಹಿಂಬಾಲಿಸುತ್ತಾರೆ.. ಕೆಲವರು ಹೀರೋ ಮತ್ತು ಹಿರೋಯಿನ್‌ ಕಾರನ್ನು ಅಡ್ಡಗಟ್ಟಿದ ಉದಾರಹಣೆಗಳೂ ಸಹ ಇವೆ.. ಇದೀಗ ಈ ಕ್ರಮದಲ್ಲಿ ಖ್ಯಾತ ನಟಿ ಪಾಯಲ್‌ ಮುಖರ್ಜಿ ಕಾರಿನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ..

ಹೌದು.. ಬಂಗಾಳದಲ್ಲಿ ಜನಿಸಿದ ಪಾಯಲ್ ಮುಖರ್ಜಿ ತೆಲುಗು ಮತ್ತು ತಮಿಳು ಪ್ರೇಕ್ಷಕರಿಗೆ ಚಿರಪರಿಚಿತರು. ಇತ್ತೀಚಿಗೆ ಅವರು ತಮ್ಮ ಕಾರಿನಲ್ಲಿ ಜನನಿಬಿಡ ರಸ್ತೆಯಲ್ಲಿ ಹೋಗುತ್ತಿದ್ದಾಗ ನಟಿಯ ಮೇಲೆ ದಾಳಿ ನಡೆದಿದೆ. ಇದರಿಂದ ಆಘಾತಕ್ಕೊಳಗಾಗಿದ್ದ ಪಾಯಲ್‌ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ:ಸಿನಿರಂಗದಲ್ಲಿ ನಟಿಯರಿಗಷ್ಟೇ ಅಲ್ಲ, ನಟರಿಗೂ ಲೈಂಗಿಕ ಕಿರುಕುಳ..! ಶಾಕಿಂಗ್‌ ವಿಚಾರ ಬಹಿರಂಗ

ನಟಿ ಕಾರಿನಲ್ಲಿ ಹೋಗುತ್ತಿದ್ದಾಗ, ಅಪರಿಚಿತ ಬೈಕ್ ಸವಾರ ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆಯನ್ನು ಪಾಯಲ್‌ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಿ ರೆಕಾರ್ಡ್ ಮಾಡಿದ್ದಾರೆ. ಘಟನೆಯ ನಂತರ ಬಿಕ್ಕಿ ಬಿಕ್ಕಿ ಅಳುತ್ತ ಸಂದರ್ಭವನ್ನು ವಿವರಿಸಿದ್ದಾರೆ.. ಸಧ್ಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪಾಯಲ್ ಹೇಳುವಂತೆ, ನಾನು ಕೋಲ್ಕತ್ತಾ ನಗರದಲ್ಲಿ ನನ್ನ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನ ಹಿಂದಿನಿಂದ ಬೈಕ್‌ನಲ್ಲಿ ಬಂದ ವ್ಯಕ್ತಿ ಕಾರನ್ನು ನಿಲ್ಲಿಸಲು ಹೇಳಿದ. ಕಾರನ್ನು ನಿಲ್ಲಿಸದಿದ್ದಾಗ ಹೆಲ್ಮೆಟ್‌ನಿಂದ ಕಾರಿನ ಗಾಜು ಒಡೆದು ಕಾರಿನೊಳಗೆ ಪೌಡರ್ ಎಸೆದಿದ್ದಾನೆ. ಆ ನಂತರವೂ ಕಾರಿನಿಂದ ಇಳಿಯುವಂತೆ ಒತ್ತಾಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ..

ಇದನ್ನೂ ಓದಿ:ನಟ ದುನಿಯಾ ವಿಜಯ್‌ಗೆ ಸಂಕಷ್ಟ: ಭೀಮನಿಗೆ ಸಿಸಿಬಿ ನೋಟಿಸ್ ಸಾಧ್ಯತೆ

ಇನ್ನು ಆಗಸ್ಟ್ 09 ರಂದು ಕೋಲ್ಕತ್ತಾದಲ್ಲಿ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಪಾಯಲ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆ ಕಾರಣಕ್ಕೆ ಪಾಯಲ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿವೆ. ಆದರೆ ಸತ್ಯಾಂಶ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News