Amala Paul : ʼಹಿಂದೂಗಳಿಗೆ ಮಾತ್ರ ದೇಗುಲ ಪ್ರವೇಶʼ... ಧಾರ್ಮಿಕ ತಾರತಮ್ಯ ಆರೋಪ ಮಾಡಿದ ಅಮಲಾ ಪೌಲ್‌..!

ಕೇರಳದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದೊಳಗೆ ತಮಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ. ದೇವರ ನಾಡಿನ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವಿಯ ದರ್ಶನಕ್ಕೆ ನಟಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ದೇವಾಲಯದ ಅಧಿಕಾರಿಗಳು, ಹಿಂದೂಗಳಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವಿರುವುದರಿಂದ ತಾವು ಪ್ರೋಟೋಕಾಲ್ ಅನುಸರಿಸಿರುವುದಾಗಿ ತಿಳಿಸಿದ್ದಾರೆ.

Written by - Krishna N K | Last Updated : Jan 18, 2023, 02:48 PM IST
  • ದೇವಸ್ಥಾನದೊಳಗೆ ತಮಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ.
  • ಕೇರಳದ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ.
  • 2023 ರಲ್ಲಿ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ದುಃಖಕರ ವಿಷಯ ಪೌಲ್‌ ಅಸಮಾಧಾನ ಹೊರಹಾಕಿದ್ದಾರೆ.
Amala Paul : ʼಹಿಂದೂಗಳಿಗೆ ಮಾತ್ರ ದೇಗುಲ ಪ್ರವೇಶʼ... ಧಾರ್ಮಿಕ ತಾರತಮ್ಯ ಆರೋಪ ಮಾಡಿದ ಅಮಲಾ ಪೌಲ್‌..! title=

Amala Paul : ಕೇರಳದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದೊಳಗೆ ತಮಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ ಎಂದು ಬಹುಭಾಷಾ ನಟಿ ಅಮಲಾ ಪೌಲ್ ಆರೋಪಿಸಿದ್ದಾರೆ. ದೇವರ ನಾಡಿನ ಹಲವು ದೇವಾಲಯಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವಿಯ ದರ್ಶನಕ್ಕೆ ನಟಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ದೇವಾಲಯದ ಅಧಿಕಾರಿಗಳು, ಹಿಂದೂಗಳಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವಿರುವುದರಿಂದ ತಾವು ಪ್ರೋಟೋಕಾಲ್ ಅನುಸರಿಸಿರುವುದಾಗಿ ತಿಳಿಸಿದ್ದಾರೆ.

ತಿರುವೈರಾನಿಕುಲಂ ಮಹಾದೇವ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ನ್ಯೂಸ್ 18 ಮಲಯಾಳಂಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇವಾಲಯದ ಅಧಿಕಾರಿಗಳು ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳನ್ನು ಮಾತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಬೇರೆ ಬೇರೆ ಧರ್ಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಆದರೆ, ಅದು ಯಾರಿಗೂ ತಿಳಿದಿಲ್ಲ. ಒಬ್ಬ ಸೆಲೆಬ್ರಿಟಿ ಭೇಟಿ ನೀಡಿದಾಗ ಮಾತ್ರ ಏಕೆ ವಿವಾದವಾಗುತ್ತದೆ ಎಂದು ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಬಾಡಿಗಾರ್ಡ್‌ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ ಕಿಚ್ಚ..! ಸುದೀಪ್‌ ಸರಳತೆಗೆ ಫ್ಯಾನ್ಸ್‌ ಫಿದಾ

2023 ರಲ್ಲಿ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ದುಃಖಕರ ವಿಷಯ. ನನಗೆ ದೇವಿಯ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ, ದೂರದಿಂದಲೇ ದರ್ಶನ ಪಡೆದೆ, ಶೀಘ್ರದಲ್ಲೇ ಧಾರ್ಮಿಕ ತಾರತಮ್ಯದಲ್ಲಿ ಬದಲಾವಣೆಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಸಮಯ ಬರುತ್ತದೆ ಮತ್ತು ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುವುದು, ಧರ್ಮದ ಆಧಾರದ ಮೇಲೆ ಅಲ್ಲʼ ಎಂದು ದೇವಾಲಯದ ಸಂದರ್ಶಕರ ನೋಂದಣಿಯಲ್ಲಿ ಅಮಲಾ ಪೌಲ್ ಅವರು ಬರೆದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಜನವರಿ 16, 2023 ರಂದು ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದಲ್ಲಿ 'ನಡತುರಪ್ಪು' ಎಂದು ಕರೆಯಲ್ಪಡುವ ಪಾರ್ವತಿ ದೇವಿಯ 12-ದಿನಗಳ ಉತ್ಸವವು ಪ್ರಾರಂಭವಾಗಿದೆ. ಪಾರ್ವತಿ ದೇವಿಯ ಗರ್ಭಗುಡಿಯು ವರ್ಷದಲ್ಲಿ ಹನ್ನೆರಡು ದಿನಗಳವರೆಗೆ ಮಾತ್ರ ತೆರೆದಿರುತ್ತದೆ ಮತ್ತು ದೇವಾಲಯದ ಮುಖ್ಯ ದೇವರು ಶಿವ, ಪಾರ್ವತಿ ದೇವಿಯು ಪಶ್ಚಿಮಾಭಿಮುಖವಾಗಿ ಪೂರ್ವಾಭಿಮುಖವಾಗಿ ಕುಳಿತಿದ್ದಾಳೆ. ವರದಿಗಳ ಪ್ರಕಾರ, ಅಮಲಾ ಅವರು 'ನಡತುರಪ್ಪು ಉತ್ಸವ'ದ ಸಂದರ್ಭದಲ್ಲಿ ಪಾರ್ವತಿ ದೇವಿಯ ದರ್ಶನ ಪಡೆಯಲು ದೇವಾಲಯಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News