ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಇವರೇ ಅಂತೆ.. ಆರ್ಯವರ್ಧನ್‌ ಭವಿಷ್ಯ ನಿಜವಾದ್ರೆ ಜಿಂಗಲಕಾ ಲಕಾ ಲಕಾ ಪಕ್ಕಾ!!

Aryavardhan Guruji predicts Bigg Boss 10 winner : ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಯಾರಾಗಬಹುದೆಂದು ಭವಿಷ್ಯ ನುಡಿದಿದ್ದಾರೆ.  

Written by - Chetana Devarmani | Last Updated : Nov 9, 2023, 12:58 PM IST
  • ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ
  • ಬಿಗ್‌ ಬಾಸ್‌ ವಿನ್ನರ್‌ ಯಾರಾಗಬಹುದೆಂದು ಭವಿಷ್ಯ
  • ಅಚ್ಚರಿಯ ಹೆಸರು ಹೇಳಿದ ಆರ್ಯವರ್ಧನ್
ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಇವರೇ ಅಂತೆ.. ಆರ್ಯವರ್ಧನ್‌ ಭವಿಷ್ಯ ನಿಜವಾದ್ರೆ ಜಿಂಗಲಕಾ ಲಕಾ ಲಕಾ ಪಕ್ಕಾ!!  title=
Aryavardhan Guruji

Aryavardhan Guruji On Bigg Boss Kannada season 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಬಗ್ಗೆ ಆರ್ಯವರ್ಧನ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ. ದಿನದಿಂದ ದಿನಕ್ಕೆ ಬಿಗ್‌ ಬಾಸ್‌ ಪೈನಿಲಿಸ್ಟ್‌ಗಳು ಯಾರಾಗಬಹುದೆಂಬ ಕುತೂಹಲ ಜನರಲ್ಲಿ ಹೆಚ್ಚಾಗುತ್ತಿದೆ. ಬಿಗ್‌ ಬಾಸ್‌ ಪೈನಿಲಿಸ್ಟ್‌ಗಳಾಗಲು ಅರ್ಹತೆಯುಳ್ಳ ಹಲವು ಸ್ಪರ್ಧಿಗಳು ಈ ಬಾರಿ ಕಾಣ ಸಿಗುತ್ತಿದ್ದಾರೆ. ಇದವರಲ್ಲಿ ಯಾಋು ವಿನ್‌ ಆಗಬಹುದೆಂದು ಹೇಳುವುದು ಬಲು ಕಷ್ಟಕರ ಸಂಗತಿ. ಈ ನಡುವೆ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಯಾರಾಗಬಹುದೆಂದು ಭವಿಷ್ಯ ನುಡಿದಿದ್ದಾರೆ. 

ಆರ್ಯವರ್ಧನ್‌ ಗುರೂಜಿ ಹೇಳಿರುವ ಹೆಸರು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಈ ವ್ಯಕ್ತಿ ಬಿಗ್‌ ಬಾಸ್‌ ಗೆಲ್ಲೋದಾ ಎಂದು ಕೆಲವರು ಯೋಚಿಸುತ್ತಿದ್ದಾರೆ. ಅರಚಾಡಿ ಕಿರುಚಾಡಿ.. ತೊಡೆ ತಟ್ಟಿ ನಿಂತು ಟಾಸ್ಕ್‌ ಆಡಿ.. ಜಗಳ ಮಾಡಿ.. ಕಣ್ಣೀರಿಟ್ಟು ಹೈಡ್ರಾಮಾ ಸೃಷ್ಟಿಸುವವರ ನಡುವೆ ಸೈಲೆಂಟ್‌ ಆಗಿ ಮನೆಯೊಳಗೆ ಅಗತ್ಯವಿದ್ದಷ್ಟೇ ಮಾತನಾಡುವ ಈ ವ್ಯಕ್ತಿ ಬಿಗ್‌ ಬಾಸ್‌ ಗೆಲ್ಲುತ್ತಾರೆ ಎಂದು ಆರ್ಯವರ್ಧನ್‌ ಗುರೂಜಿ ಹೇಳಿದ್ದಾರೆ. 

ಇದನ್ನೂ ಓದಿ : Salman Khan Tiger 3 Fees : ಚಿತ್ರದ ಬಜೆಟ್‌ಗೆ ಸಮವಾದ ಸಲ್ಮಾನ್ ಖಾನ್ ಸಂಭಾವನೆ..! 

ಆರ್ಯವರ್ಧನ್ ಗುರೂಜಿ ಈ ಬಾರಿ ವರ್ತೂರ್ ಸಂತೋಷ್ ಬಿಗ್‌ ಬಾಸ್‌ ವಿನ್‌ ಆಗೋದು ಎಂದು ಹೇಳಿದ್ದಾರೆ. ವರ್ತೂರ್ ಸಂತೋಷ್ ಅವರದ್ದು ಮೀನ ರಾಶಿ. ಈ ರಾಶಿಯವರಿಗೆ ಇದು ಅನುಕೂಲಕರ ಸಮಯ. ಹೀಗಾಗಿ ಅವರು ಬಿಗ್‌ ಬಾಸ್‌ ಗೆಲ್ಲುವ ಸಾಧ್ಯತೆಯಿದೆ ಎಂದು ಆರ್ಯವರ್ಧನ್‌ ಗುರೂಜಿ ಹೇಳಿದ್ದಾರೆ.

ವರ್ತೂರ್ ಸಂತೋಷ್ ಒಳ್ಳೆಯ ವ್ಯಕ್ತಿ, ರೈತನ ಮಗ. ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಸಿನಿಮಾ ಹಾಗೂ ಕಿರುತೆರೆಯಿಂದ ಬಂದ ಜನರೇ ಹೆಚ್ಚಾಗಿದ್ದಾರೆ. ಆದರೆ ವರ್ತೂರ್‌ ಸಂತೋಷ್‌ ರೈತ. ಮನೆಯ ಒಳಗೆ ಅವರನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಹೊರಗೆ ಕಾನೂನು ರೀತಿಯಾಗಿ ಅವರನ್ನು ಕುಗ್ಗಿಸಲಾಗಿದೆ. ಜನ ಅವರನ್ನು ಬೆಂಬಲಿಸಬೇಕು. ಬ್ಯಾಟ್ಸ್ ಮನ್ 100 ರನ್‌ ಬಾರಿಸಲು ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಲೇ ಬೇಕಾಗುತ್ತದೆ ಎಂದು ಆರ್ಯವರ್ಧನ್‌ ಹೇಳಿದ್ದಾರೆ.

ಇದನ್ನೂ ಓದಿ : ನಟನೆಗೆ ಕಾಲಿಟ್ರಾ ಕಾಂಗ್ರೆಸ್‌ ನಾಯಕಿ ʼಸೋನಿಯಾ ಗಾಂಧಿ.ʼ.? ಪೋಸ್ಟರ್‌ ವೈರಲ್‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News