BBK 10: ಬಿಗ್‌ಬಾಸ್‌ ಇತಿಹಾಸ ಪುಟದಲ್ಲಿ ಕಳಪೆಯಿಲ್ಲದೇ ಜೈಲು ಸೇರಿದ ತುಕಾಲಿ ಸಂತೋಷ್!

Bigg Boss Kannada: ಬಿಗ್‌ಬಾಸ್‌ ಮನೆಯಲ್ಲಿ ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದಕ್ಕೆ, ಇದೀಗ ಮನೆಯ ಸದಸ್ಯರೆಲ್ಲರೂ ಒಮ್ಮತದಿಂದ ತುಕಾಲಿ ಸಂತೋಷ್‌ನನ್ನು ಜೈಲಿಗೆ ಕಳುಹಿಸಿದ್ದಾರೆ.  

Written by - Zee Kannada News Desk | Last Updated : Nov 29, 2023, 11:30 AM IST
  • ವಾರ ಪೂರ್ತಿ ಮನೆಯಲ್ಲಿ ಆಕ್ಟಿವ್ ಆಗಿಲ್ಲದೆ ಇರುವವರಿಗೆ ಕಳಪೆ ನೀಡುತ್ತಿದ್ದು, ಆ ಕಳಪೆ ನೀಡಿದಾಗಲಾದರೂ ಸದಸ್ಯರು ಆಕ್ಟಿವ್ ಆಗುತ್ತಾರೆ ಎಂಬ ನಂಬಿಕೆ.
  • ಕಿಚ್ಚನ ಪಂಚಾಯ್ತಿಯಲ್ಲಿ ಎರಡು ಬಾರಿ ಸುದೀಪ್ ಹೇಳಿದ್ದರೂ, ಮತ್ತೆ ಮತ್ತೆ ಕಳಪೆ ನೀಡುವ ವಿಚಾರದಲ್ಲಿ ತಪ್ಪು ಮಾಡಿದ್ದಾರೆ.
  • ಕಿಚ್ಚನ ಪಂಚಾಯ್ತಿಯಲ್ಲಿ ತುಕಾಲಿಗೆ ಶಿಕ್ಷೆ ನೀಡಲು ಹೇಳಿ ಮನೆಯವರೆಲ್ಲ ಒಮ್ಮತದಿಂದ ತುಕಾಲಿಯನ್ನು ಜೈಲಿಗೆ ಹಾಕಲು ನಿರ್ಧರಿಸಿದರು.
BBK 10: ಬಿಗ್‌ಬಾಸ್‌ ಇತಿಹಾಸ ಪುಟದಲ್ಲಿ ಕಳಪೆಯಿಲ್ಲದೇ ಜೈಲು ಸೇರಿದ ತುಕಾಲಿ ಸಂತೋಷ್! title=

Tukali Santosh Imprisoned: ಬಿಗ್‌ಬಾಸ್ ಮನೆಯಲ್ಲಿ ಉತ್ತಮ, ಕಳಪೆ, ನಾಮಿನೇಷನ್ ಹೀಗೆ ಎಲ್ಲವೂ ಬಹಳ ಮುಖ್ಯವಾಗುತ್ತಿದ್ದು, ಮನೆಯ ನಿಯಮಗಳನ್ನು ಮೀರಿದರೆ ಅದಕ್ಕೆ ಶಿಕ್ಷೆ ಅಂತು ಖಂಡಿತ ಬಿಗ್‌ಬಾಸ್ ನೀಡಲಿದೆ. ವಾರ ಪೂರ್ತಿ ಮನೆಯಲ್ಲಿ ಆಕ್ಟಿವ್ ಆಗಿಲ್ಲದೆ ಇರುವವರಿಗೆ ಕಳಪೆ ನೀಡುತ್ತಿದ್ದು, ಆ ಕಳಪೆ ನೀಡಿದಾಗಲಾದರೂ ಸದಸ್ಯರು ಆಕ್ಟಿವ್ ಆಗುತ್ತಾರೆ ಎಂಬ ನಂಬಿಕೆ ಅದು. ಆದರೆ, ಈ ಸೀಸನ್‌ನಲ್ಲಿ ಒಂದು ಸಲ ಅಲ್ಲ ಎರಡು ಸಲ ಕಳಪೆಯನ್ನು ಕೊಡುವಾಗ ತಪ್ಪು ಆಯ್ಕೆ ಮಾಡಿದ್ದಾರೆ. 

ಹೌದು.. ಕಿಚ್ಚನ ಪಂಚಾಯ್ತಿಯಲ್ಲಿ ಎರಡು ಬಾರಿ ಸುದೀಪ್ ಹೇಳಿದ್ದರೂ, ಮತ್ತೆ ಮತ್ತೆ ಕಳಪೆ ನೀಡುವ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ಆದ್ರೀಗ ಈ ವಾರ ಕಳಪೆಯನ್ನೇ ಪಡೆಯದೆ ತುಕಾಲಿ ಸಂತೋಷ್ ಜೈಲು ಸೇರಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಜೈಲಿಗೆ ಹೋಗುವುದು ಗಂಭೀರ ಶಿಕ್ಷೆಯಾಗಿದ್ದರೇ, ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದ್ದರು. ಇದೇ ಕಾರಣಕ್ಕಾಗಿಯೇ ಕಿಚ್ಚನ ಪಂಚಾಯ್ತಿಯಲ್ಲಿ ತುಕಾಲಿಗೆ ಶಿಕ್ಷೆ ನೀಡಲು ಹೇಳಿ ಮನೆಯವರೆಲ್ಲ ಒಮ್ಮತದಿಂದ ತುಕಾಲಿಯನ್ನು ಜೈಲಿಗೆ ಹಾಕಲು ನಿರ್ಧರಿಸಿದರು. 

ಇದನ್ನೂ ಓದಿ: BBK 10: ಬಿಗ್‌ಬಾಸ್‌ ಮನೆಯಿಂದ ಹೊರನಡೆದ ತನಿಷಾ: ಏನಾಗಿತ್ತು ದೊಡ್ಮನೆಯ ಬೆಂಕಿಗೆ?

ಇದಕ್ಕೆ ಒಪ್ಪಿಗೆ ನೀಡಿದ ಬಿಗ್‌ಬಾಸ್ ತುಕಾಲಿಯನ್ನು ಜೈಲಿಗೆ ಕಳುಹಿಸಲು ಜೈಲಿನ ಕೀ ಕಳುಹಿಸಿಕೊಟ್ಟಿದ್ದಾರೆ. ಬಿಗ್‌ಬಾಸ್ ಒಪ್ಪಿಗೆ ನೀಡಿದರೂ ತುಕಾಲಿ ಅದಕ್ಕೆ ಒಪ್ಪದೆಯಿರುವಾಗ, ಮನೆಯವರೆಲ್ಲಾ ತುಕಾಲಿಯನ್ನು ಬಿಡದೇ, ತನಿಷಾ ಅಂತೂ ಸಿಕ್ಕಾಪಟ್ಟೆ ಖುಷಿ ಪಟ್ಟು, ಬರಿ ಗೈನಲ್ಲಿಯೇ ಆರತಿ ಬೆಳಗಿ ಜೈಲಿನ ಒಳಗೆ ಬಿಟ್ಟು ಬಂದರು. ವರ್ತೂರು ಸಂತೋಷ್ ಮನನೊಂದುಕೊಂಡು ಕಳುಹಿಸಿದಾಗ, ತುಕಾಳಿ ಫ್ರೆಂಡ್‌ಶಿಪ್ ಗೋಸ್ಕರ ಜೈಲಿಗೆ ಹೋಗುತ್ತಾ ಇದ್ದೀನಿ ಅಂತ ಹೇಳಿ ಅಳುತ್ತಾ, ಕಷ್ಟಪಟ್ಟು ಜೈಲಿಗೆ ಇಳಿದರು. 

ತಮಾಷೆ ಮಾಡಲು ಹೋಗಿ ಲಾಕ್ ಆದ ತುಕಾಲಿ, ಇದೀಗ ಜೈಲಿನೊಳಗೆ ಕೂತು ಒಬ್ಬರೆ ಮಾತನಾಡುತ್ತಾ, "ಕಾಮಿಡಿಯಾಗಿ ಇರುತ್ತದೆ ಎಂದು ಹೇಳಿದರೆ ಸೀರಿಯಸ್ ಆಗಿ ಹೋಯಿತು. ಜೈಲಿಂದ ತಪ್ಪಿಸಿಕೊಂಡವರು ಹಾಸಿಗೆ ಮೇಲೆ ಆರಾಮವಾಗಿ ಮಲಗಿದ್ದಾರೆ. ಹಿಸ್ಟರಿ ಕ್ರಿಯೇಟ್ ಮಾಡು ಅಂತ ಹೇಳುವುದಕ್ಕೆ ಹೋಗಿ ಜೈಲು ಸೇರಿದ್ದೀನಿ. ಇಲ್ಲಿ ಒಬ್ಬನೆ ಬೇರೆ. ಇದೇ ಮೊದಲು ಒಬ್ಬನೆ ಮಲಗುತ್ತಿರುವುದು" ಎಂದು ಭಯದಿಂದಾನೇ ಮಲಗಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News