BBK 10: ನೊಂದು ಬೆಂದವರ ಗುಂಪಿಗೆ ನಾಯಕರಾದ ಕಾರ್ತಿಕ್‌ ಮಹೇಶ್!‌

Bigg Boss Kannada: ಸಂಗೀತಾ ಜೊತೆಗಿನ ಫ್ರೆಂಡ್‌ಶಿಪ್‌ ವಿಚಾರದಲ್ಲಿ ನೊಂದಿರುವ ಕಾರ್ತಿಕ್‌ಗೆ ‘ನೊಂದವರ ಗುಂಪಿಗೆ’ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ನಾಯಕ ಪಟ್ಟವನ್ನಕೊಟ್ಟಿದ್ದಾರೆ. 

Written by - Zee Kannada News Desk | Last Updated : Nov 23, 2023, 11:23 AM IST
  • ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಇದ್ದ ಗುಂಪಿಗೆ ‘ ಸುದೀಪ್ ‘ನೊಂದವರು ಗುಂಪು’ ಎಂದು ಹೆಸರಿಟ್ಟಿದ್ದರು.
  • ಈ ವಾರದ ಟಾಸ್ಕ್‌ಗಳಿಗಾಗಿ ‘ಸಂಪತ್ತಿಗೆ ಸವಾಲ್’ ಹಾಗೂ ‘ಗಜಕೇಸರಿ’ ಎಂಬ ಎರಡು ತಂಡಗಳನ್ನು ರಚಿಸಲಾಗಿದೆ.
  • ಸಂಗೀತಾ ಜೊತೆಗಿನ ಫ್ರೆಂಡ್‌ಶಿಪ್ ವಿಚಾರದಲ್ಲಿ ಕಾರ್ತಿಕ್‌ ನೊಂದಿದ್ದು ತುಕಾಲಿ ಸಂತು ಮತ್ತು ವರ್ತೂರು ಸಂತೋಷ್‌ ‘ನೊಂದವರ ಗುಂಪಿಗೆ’ ನಾಯಕನನ್ನಾಗಿ ಮಾಡಿದ್ದಾರೆ.
BBK 10: ನೊಂದು ಬೆಂದವರ ಗುಂಪಿಗೆ ನಾಯಕರಾದ ಕಾರ್ತಿಕ್‌ ಮಹೇಶ್!‌ title=

Karthik In Bigg Boss: ಬಿಗ್‌ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್  ಉಳಿಯಲು ದೃಢ ನಿರ್ಧಾರ ಮಾಡಿದ ಬಳಿಕ ಒಂದು ಗ್ರೂಪ್ ಫಾರ್ಮ್ ಆಗಿ ಅದರಲ್ಲಿ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಇದ್ದಾರೆ. ಈ ಗುಂಪಿಗೆ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ‘ನೊಂದವರು ಗುಂಪು’ ಎಂದು ಹೆಸರಿಟ್ಟಿದ್ದು, ಒಂದು ವಾರ ವರ್ತೂರು ಸಂತೋಷ್, ತುಕಾಲಿ ಸಂತು ಜೊತೆಗೆ ಚೆನ್ನಾಗಿದ್ದ ಡ್ರೋನ್ ಪ್ರತಾಪ್‌ ಏಕಾಏಕಿ ಗುಂಪಿನಿಂದ ಹೊರಗೆ ಬಂದಿದ್ದಾರೆ. ಓಪನ್‌ ನಾಮಿನೇಷನ್ ವೇಳೆ ತುಕಾಲಿ ಸಂತು ನಾಮಿನೇಟ್ ಮಾಡುವ ಮುಖಾಂತರ ಡ್ರೋನ್ ಪ್ರತಾಪ್‌ ಗುಂಪಿನಿಂದ ಎಕ್ಸಿಟ್ ಆಗಿದ್ದಾರೆ.

ಬಿಗ್‌ಬಾಸ್‌ನಲ್ಲಿ ನಾಮಿನೇಷನ್ ಚಟುವಟಿಕೆ ವೇಳೆ, "ಎಷ್ಟೋ ಸಲ ಎಲ್ಲಾ ವಿಚಾರ ಸರಿ ಇರುತ್ತೆ. ಆದರೂ, ಅವರು ಇಲ್ಲದಿರುವ ವಿಚಾರವನ್ನ ಇಟ್ಟುಕೊಂಡು ಪದೇ ಪದೇ ಎಲ್ಲರ ಮುಂದೆ ಮಾತಾಡ್ತಾರೆ. ಮಾತಾಡೋಕೆ ಅವಕಾಶ ಕೊಡಲ್ಲ. ಮಧ್ಯದಲ್ಲಿ ಇಂಟರಪ್ಟ್ ಮಾಡ್ತಾರೆ" ಎಂದು ಡ್ರೋನ್ ಪ್ರತಾಪ್ ಹೇಳಿ ತುಕಾಲಿ ಸಂತುವನ್ನು ಎಲ್ಲರ ಮುಂದೆ ಓಪನ್ ಆಗಿ ನಾಮಿನೇಟ್ ಮಾಡಿದರು. ಆಗ, "ಗುಂಪು ಒಡೆದು ಹೋಯ್ತು. ನೊಂದವರ ಗುಂಪು ಅಲ್ಲ ಇದು. ಸತ್ತವರ ಗುಂಪು" ಎಂದು ಕಾರ್ತಿಕ್ ಕಾಲೆಳೆದರು.

ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿಗಳ ಹೊಡೆದಾಟಕ್ಕೆ ಕಾರಣವಾಯ್ತು ʼಹೂʼ..! ದೋಸ್ತಿಗಳ ಮಧ್ಯ ಜಿದ್ದಾಜಿದ್ದಿ

ಈ ವಾರದ ಟಾಸ್ಕ್‌ಗಳಿಗಾಗಿ ‘ಸಂಪತ್ತಿಗೆ ಸವಾಲ್’ ಹಾಗೂ ‘ಗಜಕೇಸರಿ’ ಎಂಬ ಎರಡು ತಂಡಗಳನ್ನು ರಚಿಸಲಾಗಿದ್ದು,‘ಸಂಪತ್ತಿಗೆ ಸವಾಲ್’ ತಂಡಕ್ಕೆ ಮೈಕಲ್ ಕ್ಯಾಪ್ಟನ್ ಆದಾಗ ಕ್ಯಾಪ್ಟನ್ ಆಗಲು ತುಕಾಲಿ ಸಂತು, ವರ್ತೂರು ಸಂತೋಷ್‌ಗೆ ಅವಕಾಶ ಸಿಗಲಿಲ್ಲ. ಆಗ ತುಕಾಳಿ ಸಂತು "ಈ ಜನ್ಮದಲ್ಲಿ ನಾವು ಲೀಡರ್‌ ಆಗಲ್ಲ. ನಮ್ಮ ಕಷ್ಟ ನೋಡಿ ‘ಬಿಗ್ ಬಾಸ್‌’ ಕೊಡಬೇಕು ಅಷ್ಟೇ. ಇಲ್ಲಂತೂ ನಮ್ಮ ತಾಯಾಣೆ ಆಗಲ್ಲ." ಎಂದು ನೊಂದು ಹೇಳಿದರು.ಇತ್ತ ನಾಮಿನೇಷನ್ ವಿಚಾರವಾಗಿ, "ಅವನು ಯಾಕೆ ವೋಟ್ ಹಾಕಬೇಕಿತ್ತು? ಅವನೊಬ್ಬ ಸರಿಗೆ ಇದ್ದಿದ್ದರೆ ಇವತ್ತು ನೊಂದವರ ಗುಂಪು ವರ್ಸಸ್ ಆ ತಂಡದ ಮಧ್ಯೆ ಯುದ್ಧ ನಡೆದಿರೋದು. ಅಲ್ಲಿಗೆ ಹೋಗಿ ಹೇಗೆ ಕೂತಿದ್ದಾನೆ ನೋಡು. ಅಲ್ಲಂತೂ ಅವನು ಏನೂ ಮಾಡೋಕೆ ಆಗಲ್ಲ"ಎಂದು ವರ್ತೂರು ಸಂತೋಷ್ ಬಳಿ ಡ್ರೋನ್ ಪ್ರತಾಪ್ ಬಗ್ಗೆ ತುಕಾಲಿ ಸಂತು ಬೇಸರ ವ್ಯಕ್ತಪಡಿಸಿದರು.

ಸಂಗೀತಾ ಜೊತೆಗಿನ ಫ್ರೆಂಡ್‌ಶಿಪ್ ವಿಚಾರದಲ್ಲಿ ಕಾರ್ತಿಕ್‌ ನೊಂದಿದ್ದು, ಬೇಸರದಲ್ಲಿದ್ದ ಕಾರ್ತಿಕ್‌ ತಟ್ಟೆ, ಲೋಟ ತೊಳೆಯಲು ತುಕಾಲಿ ಸಂತು, ವರ್ತೂರು ಸಂತೋಷ್ ಮುಂದಾದರು. ಆಗ, "ನಾನೇ ತೊಳೆಯುತ್ತೇನೆ" ಎಂದು ಕಾರ್ತಿಕ್ ಮುಂದೆ ಬಂದಾಗ, "ನಮ್ಮ ಸಂಘಕ್ಕೆ ಬಂದ್ಮೇಲೆ ಜ್ಞಾನೋದಯ ಆಗಿದೆ’’ ಎಂದು ವರ್ತೂರು ಸಂತೋಷ್‌ ಚಟಾಕಿ ಹಾರಿಸಿದರು. ಆಗ "ಅಪ್ಪಾಜಿ ನಾನು ಯಾವ ಸಂಘದಲ್ಲೂ ಇಲ್ಲ" ಎಂದಾಗ ಕಾರ್ತಿಕ್, "ಏಯ್.. ನಮಗಿಂತ ಜಾಸ್ತಿ ನೊಂದಿರೋನೇ ನೀನು. ನೊಂದು, ಬೆಂದು, ಬಳಲಿ, ಬೆಂಡಾಗಿ, ಅಲ್ಲಾಡಿ ಕೊನೆಗೆ ನಮಗೆ ಸಿಕ್ಕಿರುವ ರತ್ನ ನೀನೇ" ತುಕಾಲಿ ಸಂತು ಹೇಳಿದರು .

ಇದನ್ನೂ ಓದಿ: BBK 10: ಸಂಗೀತಾ ಶೃಂಗೇರಿ ಹೇಳೋದೊಂದು, ಮಾಡೋದೊಂದು! "ಮಾನವೀಯತೆ" ಬರೀ ಡೈಲಾಗ್‌ಗೆ ಮಾತ್ರ ಸೀಮಿತವಾಯ್ತಾ?

ಬಳಿಕ ತುಕಾಲಿ ಸಂತು ನೀನು ಬಂದಿದ್ದು ನಮಗೆ ಸಾವಿರ ಆನೆ ಬಲ ಬಂದ ಹಾಗೆ ಆಗಿದೆ ಎಂದಾಗ ಕಾರ್ತಿಕ್ ನಾನು ಯಾವ ಗುಂಪಿನಲ್ಲೂ ಇಲ್ಲ ಎಂದರು. ಅದಕ್ಕೆ ವರ್ತೂರು ಸಂತೋಷ್ ನಮ್ಮ ಗುಂಪಿಗೆ ನಾವೇನು ಟ್ಯಾಗ್ ಕೊಡಲ್ಲ. ಆಟೋಮ್ಯಾಟಿಕ್‌ ಆಗಿ ಗೊತ್ತಾಗುತ್ತಿದೆ ಅಂತ ಹೇಳಿದಕ್ಕೆ ಕಾರ್ತಿಕ್ ನಾನಿಲ್ಲ ಎಂದರು. ಮತ್ತೆ ತುಕಾಲಿ ಸಂತು ಹಾಗ್ನೋಡಿದ್ರೆ, ನೊಂದವರ ಗುಂಪು ನಾವಲ್ಲ ಕಣೋ.. ನೀನು.! ನೊಂದವರ ಗುಂಪಿನ ನಾಯಕ ನೀನೇ.! ನಾಯಕನ ಸ್ಥಾನವನ್ನ ನಿನಗಾಗಿ ತ್ಯಾಗ ಮಾಡ್ತೀನಿ ಎಂದು ಹೇಳಿದರು. ತುಕಾಲಿ ಸಂತು ಮತ್ತು ವರ್ತೂರು ಸಂತೋಷ್‌.. ಕಾರ್ತಿಕ್ ಅವರನ್ನ ‘ನೊಂದವರ ಗುಂಪಿಗೆ’ ನಾಯಕನನ್ನಾಗಿ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News