Bollywood: ಚಿತ್ರರಂಗಕ್ಕೆ ಗುಡ್‌ ಬೈ ಹೇಳಲಿದ್ದಾರೆ ಈ ಖ್ಯಾತ ನಟ! ಅಸಲಿ ಕಾರಣ ಇದು!

Bollywood Actor: ನಟರು ಸ್ಟಾರ್ ಹೀರೋ ಆದ ನಂತರ ನಟನೆಯಿಂದ ದೂರ ಉಳಿಯುವುದಿಲ್ಲ. ಕಾರಣಗಳು ತುಂಬಾ ದೊಡ್ಡದಾಗಿದ್ದರೂ.. ನಟಿಸುತ್ತಲೇ ಇರುತ್ತಾರೆ. ಆದರೆ ಇದೀಗ ಖ್ಯಾತ ನಟನೊಬ್ಬ ಸಂವೇದನಾಶೀಲ ನಿರ್ಧಾರ ತೆರೆಗೆದುಕೊಂಡಿದ್ದು.. ಸಿನಿರಂಗದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.. 

Written by - Savita M B | Last Updated : Mar 16, 2024, 09:58 AM IST
  • ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಚಿತ್ರಗಳಿಗೆ ಗುಡ್ ಬೈ ಹೇಳಲಿದ್ದಾರೆ
  • ಸದ್ಯ ಈ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ.
  • ಸಿನಿಮಾಗಳಿಂದ ದೂರ ಉಳಿದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
Bollywood: ಚಿತ್ರರಂಗಕ್ಕೆ ಗುಡ್‌ ಬೈ ಹೇಳಲಿದ್ದಾರೆ ಈ ಖ್ಯಾತ ನಟ! ಅಸಲಿ ಕಾರಣ ಇದು! title=

Bollywood Star Actor Amir Khan: ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಚಿತ್ರಗಳಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ವರದಿಗಳಿವೆ. ಸದ್ಯ ಈ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ. ಹಾಗಾದ್ರೆ ಈ ಸ್ಟಾರ್‌ ನಟ ಸಿನಿರಂಗಕ್ಕೆ ವಿದಾಯ ಹೇಳುತ್ತಿರುವುದು ಯಾಕೆ ಅಂತೀರಾ ಇಲ್ಲಿದೆ ಉತ್ತರ..

 ನಟ ಅಮೀರ್‌ ಖಾನ್ ಇನ್ನು ಮುಂದೆ ಸಿನಿಮಾ ಮಾಡೋದಿಲ್ಲ ಅಂತ ಕಥೆ ಹೇಳಿಕೊಂಡು ಬರುತ್ತಿರುವ ನಿರ್ದೇಶಕರಿಗೆ ಅಮೀರ್ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.. ಅಲ್ಲದೇ ಅವರು ಸದ್ಯ ಚೆನ್ನೈನಲ್ಲಿ ನೆಲೆಯೂರಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ... ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆಗಾಗಿ ಆಗಾಗ ಚೆನ್ನೈನಲ್ಲಿಯೇ ಇರಬೇಕಾಗುತ್ತದೆ. ಹೀಗಾಗಿ ಸಿನಿಮಾಗೆ ಗುಡ್ ಬೈ ಹೇಳಿ ಚೆನ್ನೈನಲ್ಲಿ ನೆಲೆಯೂರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.. ನಟ ಇದಕ್ಕಾಗಿ ಈಗಾಗಲೇ ಐಷಾರಾಮಿ ಮನೆಯನ್ನು ಸಹ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ-ವಿಶ್ವ ಸುಂದರಿ ವಿನ್ನರ್ ಪಟ್ಟ.. ನಟಿಸಿದ ಸಿನಿಮಾಗಳೆಲ್ಲ ಹಿಟ್‌.. ಸದ್ಯ ತೆರೆಯಿಂದ ಕಣ್ಮರೆಯಾದ ಖ್ಯಾತ ನಟಿ ಈಕೆ!

 ಇನ್ನು ನಟ ಅಮೀರ್‌ ಖಾನ್‌ ಅವರ ಕೊನೆಯ ಚಿತ್ರ ಲಾಲ್ ಸಿಂಗ್ ಚಡ್ಡಾ.. ಈ ಭಾಕ್ಸಾಫಿಸ್‌ನಲ್ಲಿ ಸಿನಿಮಾ ಡಿಸಾಸ್ಟರ್ ಆಗಿತ್ತು. ಆ ವೇಳೆ ಬಂದ ಟ್ರೋಲಿಂಗ್ ಸಹಿಸಲಾಗದೇ ನಟ ಅಮೀರ್‌ ಸದ್ಯ ಯಾವುದೇ ಚಿತ್ರಕ್ಕೆ ಕಮಿಟ್ ಆಗದಿರಲು ನಿರ್ಧರಿಸಿದ್ದಾರೆ ಎನ್ನುವ ವರದಿಯೂ ಇದೆ... ಈ ಸುದ್ದಿ ಈಗ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. 

ಅಮೀರ್ ಖಾನ್ ಅವರಂತಹ ಪ್ರತಿಭಾವಂತ ನಟ ಸಿನಿಮಾರಂಗದಿಂದ ಹೊರಬರುತ್ತಿದ್ದಾರೆ ಎಂದು ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಕೆಲವರು ಇದನ್ನೆಲ್ಲಾ ಫೇಕ್ ನ್ಯೂಸ್ ಎಂದು ತಳ್ಳಿ ಹಾಕುತ್ತಿದ್ದಾರೆ ಆದರೆ ಅಮೀರ್ ಇದುವರೆಗೂ ಒಂದೇ ಒಂದು ಸಿನಿಮಾವನ್ನು ಒಪ್ಪಿಕೊಂಡಿಲ್ಲ, ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿರುವುದರಿಂದ ಯಾವ ಕಥೆಯನ್ನು ನೀಡಬೇಕು? ಎನ್ನುವ ಇಕ್ಕಟ್ಟಿಗೆ ನಟ ಸಿಲುಕಿದ್ದು, ಸಿನಿಮಾಗಳಿಂದ ದೂರ ಉಳಿದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದರ ಸತ್ಯಾ ಸತ್ಯತೆ ಏನಿದೆ ಎನ್ನುವುದನ್ನು ತಿಳಿಯಲು ಕಾಯಬೇಕಿದೆ..  

ಇದನ್ನೂ ಓದಿ-'Bastar: The Naxal Story' Review : ಕಣ್ಣೀರು ಸುರಿಸುವಂತೆ ಮಾಡುತ್ತೆ ಈ ಸಿನಿಮಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News