ಉಪ್ಪಿ ಅಣ್ಣನ ಮಗನ ʼಸೂಪರ್‌ ಸ್ಟಾರ್‌ʼ ಸಿನಿಮಾಗೆ ಸಂಕಷ್ಟ : ಹಣ ವಂಚನೆ ಆರೋಪ..!

ಉದಯೋನ್ಮುಖ ನಟ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಅಭಿನಯದ ʼಸೂಪರ್‌ ಸ್ಟಾರ್‌ʼ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರದ ನಿರ್ದೇಶಕ ಆರ್‌ ವೆಂಕಟೇಶ್‌ ಬಾಬು ವಿರುದ್ಧ ನಿರ್ಮಾಪಕ ಮೈಲಾರಿ ಹಣ ವಂಚನೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ವಂಚಿಸಿದ್ದಾಗಿ ದೂರು ದಾಖಲಿಸಿದ್ದಾರೆ.

Written by - Krishna N K | Last Updated : Nov 14, 2022, 02:01 PM IST
  • ಉಪ್ಪಿ ಅಣ್ಣನ ಮಗನ ʼಸೂಪರ್‌ ಸ್ಟಾರ್‌ʼ ಸಿನಿಮಾಗೆ ಸಂಕಷ್ಟ
  • ಸೂಪರ್‌ ಸ್ಟಾರ್‌ ನಿರ್ದೇಶಕನ ಮೇಲೆ ಹಣ ವಂಚನೆ ಆರೋಪ
  • ನಿರ್ಮಾಪಕ ಮೈಲಾರಿಯಿಂದ ಆರ್‌ ವೆಂಕಟೇಶ್‌ ಮೇಲೆ ದೂರು
ಉಪ್ಪಿ ಅಣ್ಣನ ಮಗನ ʼಸೂಪರ್‌ ಸ್ಟಾರ್‌ʼ ಸಿನಿಮಾಗೆ ಸಂಕಷ್ಟ : ಹಣ ವಂಚನೆ ಆರೋಪ..! title=

ಬೆಂಗಳೂರು : ಉದಯೋನ್ಮುಖ ನಟ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಅಭಿನಯದ ʼಸೂಪರ್‌ ಸ್ಟಾರ್‌ʼ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರದ ನಿರ್ದೇಶಕ ಆರ್‌ ವೆಂಕಟೇಶ್‌ ಬಾಬು ವಿರುದ್ಧ ನಿರ್ಮಾಪಕ ಮೈಲಾರಿ ಹಣ ವಂಚನೆ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ವಂಚಿಸಿದ್ದಾಗಿ ದೂರು ದಾಖಲಿಸಿದ್ದಾರೆ.

ʼಸೂಪರ್‌ ಸ್ಟಾರ್‌ʼ ಬಹು ನೀರಿಕ್ಷೆ ಮೂಡಿಸಿದ್ದ ಚಿತ್ರ. ಅದ್ಧೂರಿಯಾಗಿ ಸಿನಿಮಾದ ಮುಹೂರ್ತವನ್ನು ಮಾಡಲಾಗಿತ್ತು. ಚಿತ್ರಕ್ಕೆ ಮೈಲಾರಿ ಎಂಬುವರು ಹಣ ಹಾಕಿದ್ದರು. ಸದ್ಯ ಅವರೇ ನಿರ್ದೇಶಕನ ಮೇಲೆ 1 ಕೋಟಿ 10 ಲಕ್ಷ ವಂಚನೆ ಮಾಡಿದ ಆರೋಪ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಓಡುತ್ತೆ ಎಂದು ನಿರ್ಮಾಪಕನಿಗೆ ನಿರ್ದೇಶಕರು ಪ್ರಚೋದನೆ ನೀಡಿ ಹಣ ಹಾಕಿಸಿದ್ದರಂತೆ. ಆದ್ರೆ ನಿರ್ದೇಶಕರು ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಅದು ಅಲ್ಲದೆ, ನಿರ್ಮಾಪಕನ ಚಿತ್ರವನ್ನ ನಿರ್ಮಾಪಕನಿಗೆ ಗೊತ್ತಿಲ್ಲದಂತೆ ಮಾರಾಟ ಮಾಡಿದ್ದಾರೆ ಎಂದು ಮೈಲಾರಿಯವರು ದೂರಿದ್ದಾರೆ.

ಇದನ್ನೂ ಓದಿ: Haripriya: ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ, ಮದ್ವೆ ಬಗ್ಗೆ ಕೊಡ್ತಾರಾ ಗುಡ್‌ ನ್ಯೂಸ್?‌

ನಿರ್ದೇಶಕ ವೆಂಕಟೇಶ್ ಬಾಬು, ಹೊಸ ನಿರ್ಮಾಪಕರಾದ ಸತ್ಯನಾರಾಯಣ, ರಮಾದೇವಿ ವಿರುದ್ಧ ದೂರು ದಾಖಲು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾತೃಶ್ರಿ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ನಿರ್ಮಾಣ ಮಾಡುತ್ತಿದ್ದರು. ಕೋವಿಡ್ ಕಾರಣ ಹಿನ್ನೆಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು. ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಿದ್ದರು. 

ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗೂ ಸತ್ಯನಾರಾಯಣ ಅವರನ್ನ ಹಾಕಿಕೊಂಡ ನಿರ್ದೇಶಕ ವೆಂಕಟೇಶ್ ಬಾಬು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಇತ್ತ ಹಾಕಿದ ಬಂಡವಾಳ ವಾಪಾಸ್ ಕೇಳಲು ಹೋದ್ರೆ ಪ್ರಾಣಬೆದರಿಕೆ, ಧಮ್ಕಿ ಹಾಕಿದ್ದಾರೆ ಎಂದು ಮೈಲಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News