ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್‌ ಮಾರ್ಕ್‌ ಇರೋನು ಯಾರೂ ಇಲ್ಲ..!

ಸದ್ಯ ಸಂಕ್ರಾಂತಿ ಹಬ್ಬ ಮುಗಿದಿದೆ, ಇನ್ಮುಂದೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ʼಕ್ರಾಂತಿʼ ಹಬ್ಬ ಶುರುವಾಗಲಿದೆ. ವರ್ಷದ ಮೊದಲ ಹಬ್ಬವನ್ನು ʼಯಜಮಾನʼ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಆಚರಿಸಿದ್ದಾರೆ. ಈ ವೇಳೆ ಯೂಟ್ಯೂಬ್‌ ಚಾನೆಲ್‌ ಒಂದರ ಜೊತೆ ಮಾತನಾಡಿರುವ ದಚ್ಚು, ಮನಬಿಚ್ಚಿ ಮಾತನಾಡಿದ್ದು, ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್‌ ಮಾರ್ಕ್‌ ಇರೋನು ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

Written by - Krishna N K | Last Updated : Jan 19, 2023, 04:41 PM IST
  • ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ʼಕ್ರಾಂತಿʼ ಹಬ್ಬ ಶುರು.
  • ವರ್ಷದ ಮೊದಲ ಹಬ್ಬವನ್ನು ʼಯಜಮಾನʼ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಆಚರಿಸಿದ್ದಾರೆ.
  • ಅಲ್ಲದೆ, ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್‌ ಮಾರ್ಕ್‌ ಇರೋನು ಯಾರೂ ಇಲ್ಲ ಅಂತ ಹೇಳಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್‌ ಮಾರ್ಕ್‌ ಇರೋನು ಯಾರೂ ಇಲ್ಲ..! title=

Darshan DBoss : ಸದ್ಯ ಸಂಕ್ರಾಂತಿ ಹಬ್ಬ ಮುಗಿದಿದೆ, ಇನ್ಮುಂದೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ʼಕ್ರಾಂತಿʼ ಹಬ್ಬ ಶುರುವಾಗಲಿದೆ. ವರ್ಷದ ಮೊದಲ ಹಬ್ಬವನ್ನು ʼಯಜಮಾನʼ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಆಚರಿಸಿದ್ದಾರೆ. ಈ ವೇಳೆ ಯೂಟ್ಯೂಬ್‌ ಚಾನೆಲ್‌ ಒಂದರ ಜೊತೆ ಮಾತನಾಡಿರುವ ದಚ್ಚು, ಮನಬಿಚ್ಚಿ ಮಾತನಾಡಿದ್ದು, ಚಿತ್ರರಂಗದಲ್ಲಿ ನನ್ನಷ್ಟು ಬ್ಲಾಕ್‌ ಮಾರ್ಕ್‌ ಇರೋನು ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಹೌದು.. ಸದ್ಯ ಸಿನಿ ಪ್ರೇಕ್ಷಕರು ಕ್ರಾಂತಿ ಸಿನಿಮಾ ಯಾವಾಗಪ್ಪಾ ರಿಲೀಸ್‌ ಆಗುತ್ತೆ ಅಂತ ಬಕ ಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಈಗಾಗಲೇ ಕ್ರಾಂತಿ ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಅಲ್ಲದೆ, ಇತ್ತೀಚಿಗೆ ಬಿಡುಗಡೆಯಾದ ಟ್ರೇಲರ್‌ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೆ, ಡಿ ಬಾಸ್‌ ಪ್ಯಾನ್ಸ್‌ಗಳು ಬಾಕ್ಸಾಫೀಸ್‌ ಸುಲ್ತಾನ್‌ ಇಸ್‌ ಬ್ಯಾಕ್‌ ಅಂತ ಸಂಭ್ರಮ ಮಾಡಿದ್ದರು.

ಇದನ್ನೂ ಓದಿ: ʼಮ್ಯಾನ್‌ ಅಪ್‌ ಮಾಸ್‌ʼ ಎನ್‌ಟಿಆರ್‌ ಭೇಟಿಯಾದ ಕ್ರಿಕೆಟಿಗ ಚಹಲ್‌, ಸೂರ್ಯಕುಮಾರ್‌..!

ಇನ್ನು ಸಂಕ್ರಾಂತಿ ಹಬ್ಬದಂದು ಯೂಟ್ಯೂಬ್ ಚಾನೆಲ್‌ ಒಂದಕ್ಕೆ ದರ್ಶನ್‌ ಸಂದರ್ಶನ ನೀಡಿದ್ದರು. ತಮ್ಮ ತೋಟ, ಪ್ರಾಣಿ ಪಕ್ಷಿಗಳನ್ನು ತೋರಿಸಿದ್ದರು. ಗೆಳೆಯರ ಜೊತೆ ಜೋಕ್‌ ಮಾಡಿಕೊಂಡು ನಗು ನಗುತ್ತಾ ದರ್ಶನ್‌ ಇರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ, ಇದೆ ವೇಳೆ ನಿರೂಪಕ ಕೇಳಿದ ಪ್ರಶ್ನೆಗೆ ಸಂಬಂಧಪಟ್ಟಂತೆ ಮಾತನಾಡುತ್ತಾ.. ʼಕೆಲವೊಂದಿಷ್ಟು ಹಿಟ್ ಹಾಗೂ ಪ್ಲಾಪ್ ಚಿತ್ರಗಳನ್ನೂ ಕೊಟ್ಟಿದ್ದೀನಿ. ಅದಕ್ಕೆ ನಾನು ನನ್ನನ್ನು ನೋಡಿಕೊಳ್ಳುವುದಿಲ್ಲ. ನನ್ನಲ್ಲಿ ಜನ ಏನ್‌ ನೋಡ್ತಾರೆ ಅಂತ ನಂಗೆ ಗೊತ್ತಿಲ್ಲ. ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲʼ ಅಂತ ಕೆಲವೊಂದಿಷ್ಟು ವಿವಾದಗಳ ಕುರಿತು ದಚ್ಚು ಬೇಸರ ವ್ಯಕ್ತಪಡಿಸಿದರು.

ಇನ್ನು ವಿಡಿಯೋದಲ್ಲಿ ದರ್ಶನ್‌ ಅವರ ಸರಳತೆ ಎದ್ದು ಕಾಣುತ್ತದೆ. ಇಂಟರ್ವ್ಯೂವ್‌ ಅಂದ ತಕ್ಷಣ ಬರ್ಜರಿಯಾಗಿ ರೆಡಿಯಾಗಿ ಬರುವ ಸ್ಟಾರ್‌ ನಟರ ನಡುವೆ ತಮ್ಮ ಹೊಲದಲ್ಲಿ ಪ್ರಾಣಿ ಪಕ್ಷಿಗಳ ನಡುವೆ ಸಾಮಾನ್ಯರಂತೆ ದರ್ಶನ್‌ ಕಾಣಿಸಿಕೊಂಡಿದ್ದಾರೆ. ಇದು ದರ್ಶನ್‌ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಕ್ರಾಂತಿ ಸಿನಿಮಾ ಜ.26 ರಂದು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News