ʼಹಿಂದೆ ನಿಂತು ಹೊಡಿ ಅಂತ ಹೇಳಿದ್ರು, ಹೊಡ್ದಿದಾನೆ..ʼ ಇದರ ಹಿಂದೆ ದೊಡ್ಡವರಿದ್ದಾರೆ..!

ನಾಳೆ ಕರುನಾಡಿನಲ್ಲಿ ʼಕ್ರಾಂತಿʼ ಹಬ್ಬ ಶುರುವಾಗಲಿದೆ. ದರ್ಶನ್‌ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ತುದಿಗಾಲಲ್ಲಿ ಕುಳಿತು ಕಾಯುತ್ತಿದ್ದಾರೆ. ಇದೀಗ ದಚ್ಚು ಹೇಳಿದ ಮಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಯೂಟ್ಯೂಬ್‌ ಚಾನೆಲ್‌ ಒಂದರ ಜೊತೆ ಮಾತನಾಡಿರುವ ದರ್ಶನ್‌ ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಶಾಕಿಂಗ್‌ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

Written by - Krishna N K | Last Updated : Jan 25, 2023, 08:10 PM IST
  • ನಾಳೆ ಕರುನಾಡಿನಲ್ಲಿ ʼಕ್ರಾಂತಿʼ ಹಬ್ಬ ಶುರುವಾಗಲಿದೆ.
  • ದರ್ಶನ್‌ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ತುದಿಗಾಲಲ್ಲಿ ಕುಳಿತು ಕಾಯುತ್ತಿದ್ದಾರೆ.
  • ಇದೀಗ ದಚ್ಚು ಹೇಳಿದ ಮಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ʼಹಿಂದೆ ನಿಂತು ಹೊಡಿ ಅಂತ ಹೇಳಿದ್ರು, ಹೊಡ್ದಿದಾನೆ..ʼ ಇದರ ಹಿಂದೆ ದೊಡ್ಡವರಿದ್ದಾರೆ..! title=

Darshan kranti : ನಾಳೆ ಕರುನಾಡಿನಲ್ಲಿ ʼಕ್ರಾಂತಿʼ ಹಬ್ಬ ಶುರುವಾಗಲಿದೆ. ದರ್ಶನ್‌ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ತುದಿಗಾಲಲ್ಲಿ ಕುಳಿತು ಕಾಯುತ್ತಿದ್ದಾರೆ. ಇದೀಗ ದಚ್ಚು ಹೇಳಿದ ಮಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಯೂಟ್ಯೂಬ್‌ ಚಾನೆಲ್‌ ಒಂದರ ಜೊತೆ ಮಾತನಾಡಿರುವ ದರ್ಶನ್‌ ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಶಾಕಿಂಗ್‌ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಡಿ ಕಂಪನಿ ಎಂಬ ಯೂಟ್ಯೂಬ್‌ ಚಾನಲ್‌ ನಡೆಸಿದ ಸಂದರ್ಶನದಲ್ಲಿ ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ನಟ ದರ್ಶನ್ ಅವರನ್ನು ಸಂದರ್ಶಕ ಪ್ರಶ್ನೆ ಮಾಡಿದ್ದರು. ಈ ವೇಳೆ ದಚ್ಚು ಕೂಲ್‌ ಆಗಿ, ನಕ್ಕು, ಮೇಡಂ ಅದನ್ನು ಕೋಡಿ.. ಅಂತ ನಿರೂಪಕಿಗೆ ಕೇಳ್ತಾರೆ.. ಆಗ ಹಿಂದು ಮುಂದೂ ನೋಡದೆ ತಮ್ಮ ಕೈಯಲ್ಲಿದ್ದ ಪೇಪರ್‌ನ್ನು ನಿರೂಪಕಿ ದರ್ಶನ್‌ ಅವರಿಗೆ ಕೊಡಲು ಮುಂದಾಗುತ್ತಾರೆ. ಆಗ ದರ್ಶನ್‌ ನಕ್ಕು.. ನೋಡಿ ನಾನು ಜಸ್ಟ್‌ ಕೋಡಿ ಅಂತ ಕೇಳಿದೆ ನೀವು ಕೊಟ್ರೀ... ಯಾಕೆ ಆಂತ ಕೇಳಲಿಲ್ಲ. ದರ್ಶನ್‌ ಕೇಳಿದ.. ನೀವು ಕೊಟ್ರೀ ಅಷ್ಟೇ...

ಇದನ್ನೂ ಓದಿ: ಹೊಸಪೇಟೆಯಲ್ಲಿ ʼಕ್ರಾಂತಿʼ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್ ಕ್ಯಾನ್ಸಲ್..! ಕಾರಣವೇನು...?

ಇದೇ ತರ.. ಹಿಂದೆ ನಿಂತು ಯಾರೋ ಒಬ್ರು ಅವನಿಗೆ ಹೊಡಿ ಅಂತ ಹೇಳಿದಾರೆ. ಅವನು ಯಾಕೆ...? ಏನು...? ಅಂತ ಯೋಚಿಸದೆ ಹೊಡೆದಿದ್ದಾನೆ.. ಅವನ ಬುದ್ದಿಲೀ ಹೊಡೆದಿರಲ್ಲ.. ಅದೇ ಇರಲಿ.. ಎಲ್ಲಾ ಕಲೆ ಹಾಕ್ತೀದಿವಿ, ಎಲ್ಲಾ ಬರಲಿ.. ಬಟ್‌ ತೆಗೆದ್ರೆ ಮಾತ್ರ ಅದು ಯಾರೋ ಆಗಿದ್ರೂ ಸರಿ ಮುಟ್ಟಿ ನೋಡ್ಕೋಳ್ಳೊ ಹಾಗಂತೂ ಕೊಟ್ಟೆ ಕೊಡ್ತೀವಿ. ಯಾಕಂದ್ರೆ ಅಂತಹ ದೊಡ್ಡ ತಪ್ಪು ನಾವೇನೂ ಮಾಡಿಲ್ವಲ್ಲ. ಯಾರನ್ನಾದರೂ ಎಳೆದಾಡಿದ್ದೀವಾ? ಏನಾದರೂ ಮಾಡಿದ್ದೀವಾ? ಮತ್ತೊಂದು ಮಗೊದಂದು ಮಾಡಿದ್ದೀವಾ? ನಾವು ನಮ್ಮ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆವು. 

ನಾವೇ ದೊಡ್ಡವರು ಅನ್ನೋರು, ನಾವೇ ಎಲ್ಲಾ ಅಂದುಕೊಂಡಿದ್ದವರು ಎಲ್ಲರೂ ಸೇರಿದ್ದಾರೆ. ಆಗಲಿ, ಜಸ್ಟ್‌ ವೇಟ್‌ ಅಂಡ್‌ ವಾಚ್‌. ಸ್ವಲ್ಪ ತಾಳ್ಮೆ ಇರಲಿ, ಕೊಟ್ಟ ಮೇಲೆ ಗೊತ್ತಾಗುತ್ತೇ ಯಾವುದು ರೈಟ್‌ ಯಾವುದು ರಾಂಗ್‌ ಅಂತ... ಹೇಗೆ ಇನ್ನೊಬ್ಬರು ಮಾಡಿಸಿದ್ರೋ ಹಾಗೆ ನಾವು ಏನಾದ್ರೂ ಮಾಡಿ ಅಂತ ಸುಮ್ನೆ ಆಗ್ಬೀಡ್ತೀವಿ.. ಅಂತ ಹೊಸಪೇಟೆಯ ಘಟನೆ ಕುರಿತು ದರ್ಶನ್‌ ನೇರವಾಗಿಯೇ ಮಾತನಾಡಿದರು. ಇದರ ಬೆನ್ನಲ್ಲೆ ದಚ್ಚು ಅವರ ಮೇಲೆ ಈ ರೀತಿಯ ಮಾಡಿಸಿದರು ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News