"ನಾನು ಆತನಿಂದ ಡಿವೋರ್ಸ್‌ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ"- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆ

Kiran Rao Statement on Aamir Khan Divorce: ಅಮೀರ್ ಖಾನ್ ಮತ್ತು ಕಿರಣ್ ರಾವ್ ಬಾಲಿವುಡ್‌ನ ಟಾಪ್ ಜೋಡಿಗಳಲ್ಲಿ ಒಬ್ಬರು ಎಂದೇ ಪ್ರಸಿದ್ಧಿ ಪಡೆದಿದ್ದರು. ಆದರೆ ಡಿವೋರ್ಸ್‌ ಪಡೆದರು. ಇನ್ನು ವಿಚ್ಛೇದನದ ನಂತರವೂ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಒಳ್ಳೆಯ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದಾರೆ.

Written by - Bhavishya Shetty | Last Updated : Jul 22, 2024, 09:07 PM IST
    • ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ
    • ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದ ಅಮೀರ್ ಖಾನ್ ಮತ್ತು ಕಿರಣ್ ರಾವ್
    • ಏಕೆ ವಿಚ್ಛೇದನ ಪಡೆದರು ಎಂಬುದು ಯಾರಿಗೂ ನಿಖರವಾಗಿ ತಿಳಿದಿರಲಿಲ್ಲ
"ನಾನು ಆತನಿಂದ ಡಿವೋರ್ಸ್‌ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ"- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆ title=
File Photo

Kiran Rao Statement on Aamir Khan Divorce: ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಘೋಷಿಸಿದ ನಂತರ ಎಲ್ಲರೂ ಶಾಕ್ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಏಕೆ ವಿಚ್ಛೇದನ ಪಡೆದರು ಎಂಬುದು ಯಾರಿಗೂ ನಿಖರವಾಗಿ ತಿಳಿದಿರಲಿಲ್ಲ. 

ಇದನ್ನೂ ಓದಿ:  ʼಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್‌ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!   

ಅಮೀರ್ ಖಾನ್ ಮತ್ತು ಕಿರಣ್ ರಾವ್ ಬಾಲಿವುಡ್‌ನ ಟಾಪ್ ಜೋಡಿಗಳಲ್ಲಿ ಒಬ್ಬರು ಎಂದೇ ಪ್ರಸಿದ್ಧಿ ಪಡೆದಿದ್ದರು. ಆದರೆ ಡಿವೋರ್ಸ್‌ ಪಡೆದರು. ಇನ್ನು ವಿಚ್ಛೇದನದ ನಂತರವೂ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಒಳ್ಳೆಯ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಕಿರಣ್ ರಾವ್ ಹೇಳಿಕೆಯೊಂದನ್ನು ನೀಡಿದ್ದು, ವಿಚ್ಛೇದನದ ನಂತರವೂ ನಾನು ಮತ್ತು ಅಮೀರ್ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದೆವು, ಒಟ್ಟಿಗೆ ಊಟ ಮಾಡಿ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದೆವು ಎಂದು ಕಿರಣ್ ರಾವ್ ಹೇಳಿದ್ದಾರೆ. 

ಅದಷ್ಟೇ ಅಲ್ಲದೆ, ಕಿರಣ್ ರಾವ್ ಅವರು ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಕಿರಣ್ ರಾವ್ ಅವರು ಅಮೀರ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ:  ಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಿ...‌ ಬಿಪಿ, ಶುಗರ್, ಕೊಲೆಸ್ಟ್ರಾಲ್‌ ನಿಯಂತ್ರಣವಾಗುತ್ತೆ!

ನೀವು ಯಾಕೆ ವಿಚ್ಛೇದನ ಪಡೆದಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  "ಮದುವೆಗೆ ಮುಂಚೆ ಹಲವು ವರ್ಷಗಳ ಕಾಲ ಒಂಟಿಯಾಗಿದ್ದೆ. ನನ್ನ ಜೀವನದಲ್ಲಿ ನಾನು ಸ್ವಾತಂತ್ರ್ಯವನ್ನು ಪ್ರೀತಿಸುತ್ತೇನೆ. ಸಾಮಾನ್ಯವಾಗಿ, ವಿಚ್ಛೇದನದ ನಂತರ ನಾನು ಎಂದಿಗೂ ಒಂಟಿಯಾಗಿರಲಿಲ್ಲ. ಸಂತೋಷವಾಗಿದ್ದೇನೆ. ಏಕೆಂದರೆ ಆ ಸಮಯದಲ್ಲಿ ನನ್ನ ಮಗ ಆಜಾದ್ ನನ್ನ ಜೊತೆಗಿದ್ದ" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News