ತುಟಿಗೆ ತುಟಿ ತಾಗುವಂತೆ ಈ ನಟನ ಜೊತೆ ಮಾವಿನ ಕಾಯಿ ತಿಂದ ಮೇಘಾ ಶೆಟ್ಟಿ

Megha Shetty and Dhanveer Gowda Video: ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಕಿರಿಕ್ ಪಾರ್ಟಿ, ಕಾಂತಾರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದ್ದ ಅಜನೀಶ್ ಲೋಕನಾಥ್ ಅವರೇ ಈ ಸಿನಿಮಾಗೂ ಸಂಗೀತ ಸಂಯೋಜಿಸಿದ್ದು, ಶ್ವೇತ್ ಪ್ರಿಯಾ ನಾಯಕ್ ಛಾಯಾಗ್ರಹಣ ಮಾಡಿದ್ದಾರೆ.  

Written by - Bhavishya Shetty | Last Updated : Dec 4, 2023, 06:41 PM IST
    • ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೈವಾ
    • ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟನೆ
    • ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ನಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಸಂದರ್ಶನ
ತುಟಿಗೆ ತುಟಿ ತಾಗುವಂತೆ ಈ ನಟನ ಜೊತೆ ಮಾವಿನ ಕಾಯಿ ತಿಂದ ಮೇಘಾ ಶೆಟ್ಟಿ title=
Megha Shetty-Dhanveer Gowda

Megha Shetty and Dhanveer Gowda Video: ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೈವಾ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಕೈವಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಜಯತೀರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದಿನಕರ್ ತೂಗುದೀಪ, ಜಯರಾಮ್ ಕಾರ್ತಿಕ್ (ಜೆಕೆ), ನಂದ ಗೋಪಾಲ್, ಉಗ್ರಂ ಮಂಜು, ರಘು ಶಿವಮೊಗ್ಗ, ರಮೇಶ್ ಇಂದಿರಾ, ಮಹಾಂತೇಶ ಹಿರೇಮಠ, ಜಾನ್ವಿ ರಾಯಲ, ಬಿಎಂ ಜಿರಿರಾಜ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್’ನಿಂದ ಹೊರಬರುತ್ತಿದ್ದಂತೆ ಕಾರ್ತಿಕ್-ಸಂಗೀತಾ ಲವ್ ಸ್ಟೋರಿ ಬಗ್ಗೆ ಸತ್ಯ ರಿವೀಲ್ ಮಾಡಿದ ನೀತು!

ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಕಿರಿಕ್ ಪಾರ್ಟಿ, ಕಾಂತಾರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದ್ದ ಅಜನೀಶ್ ಲೋಕನಾಥ್ ಅವರೇ ಈ ಸಿನಿಮಾಗೂ ಸಂಗೀತ ಸಂಯೋಜಿಸಿದ್ದು, ಶ್ವೇತ್ ಪ್ರಿಯಾ ನಾಯಕ್ ಛಾಯಾಗ್ರಹಣ ಮಾಡಿದ್ದಾರೆ.  

ಅಂದಹಾಗೆ ಕೈವಾ ಸಿನಿಮಾದ ಕಥೆಯು 1983ರ ಬೆಂಗಳೂರಿನ ನೈಜ ಘಟನೆಗಳ ಹಿನ್ನೆಲೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಡಿಸೆಂಬರ್ 8 ರಂದು ಥಿಯೇಟರ್‌’ಗಳಲ್ಲಿ ಬಿಡುಗಡೆಯಾಗಲು ‘ಕೈವಾ’ ಸಿದ್ಧವಾಗಿದೆ.

ಇವೆಲ್ಲದರ ಹೊರತಾಗಿ ಈ ಸಿನಿಮಾದ ನಟ ಧನ್ವೀರ್ ಮತ್ತು ನಟಿ ಮೇಘಾ ಶೆಟ್ಟಿ ಸಂದರ್ಶನದ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ನಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಸಂದರ್ಶನ ಮಾಡಲಾಗಿದೆ. ಈ ಸಂದರ್ಶನದ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಈ ಪ್ರೋಮೋದಲ್ಲಿ ಮೇಘಾ ಶೆಟ್ಟಿ ಬಾಯಲ್ಲಿಟ್ಟಿದ್ದ ಮಾವಿನ ಕಾಯನ್ನು ಧನ್ವೀರ್ ಕಚ್ಚಿದ್ದಾರೆ. ಅಂದರೆ ತುಟಿಗೆ ತುಟಿ ತಾಗುವಂತೆ ಕಚ್ಚಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

 

 

ಇದನ್ನೂ ಓದಿ: 2024ರಲ್ಲಿ ಮಹಾಶಿವನ ಕೃಪೆಯಿಂದ ಈ ರಾಶಿಯ ಜನರಿಗೆ ವೃತ್ತಿಯಲ್ಲಿ ಭಾರೀ ಆದಾಯ: ನಿಮ್ಮ ರಾಶಿಯೂ ಇದೆಯೇ?

ಈ ಸಂದರ್ಶನದಲ್ಲಿ ಅನುಶ್ರೀ ಅವರು ಇವರಿಗೆ ಟಾಸ್ಕ್ ಕೊಟ್ಟಿರಬಹುದು. ಅದಕ್ಕಾಗಿ ಈ ರೀತಿ ಮಾಡಿದ್ದಾರೆ ಅಂತ ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News