ಆ ನೋವಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪ್ರಕಾಶ್‌ ರಾಜ್‌..! ಖ್ಯಾತ ನಟನ ಬದುಕಲ್ಲಿ ದುರಂತ

Prakash Raj suicide : ಪ್ರಕಾಶ್ ರಾಜ್ ಒಬ್ಬ ಬಹುಬೇಡಿಕೆಯ ಭಾರತೀಯ ನಟ. ನಿರ್ದೇಶಕ, ನಿರ್ಮಾಪಕ, ನಿರೂಪಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಕೆಲ ವರ್ಷಗಳಿಂದ ರಾಜಕೀಯಕ್ಕೂ ಸಹ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ನಟ ತಾವು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದು, ಅವರ ಪ್ಯಾನ್ಸ್‌ಗೆ ಶಾಕ್‌ ನೀಡಿದೆ..

Written by - Krishna N K | Last Updated : Mar 28, 2024, 03:57 PM IST
    • ಪ್ರಕಾಶ್ ರಾಜ್ ಒಬ್ಬ ಬಹುಬೇಡಿಕೆಯ ಭಾರತೀಯ ನಟ.
    • ರಾಜ್‌ ಆತ್ನಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ.
    • ನಟ ಈ ನಿರ್ಧಾರದ ಹಿಂದಿದೆ ನೋವು
ಆ ನೋವಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪ್ರಕಾಶ್‌ ರಾಜ್‌..! ಖ್ಯಾತ ನಟನ ಬದುಕಲ್ಲಿ ದುರಂತ title=

Prakash Raj : ನಟ ಪ್ರಕಾಶ್‌ ರಾಜ್‌ ಕನ್ನಡ ಸಿನಿರಂಗದ ಪ್ರತಿಭಾನ್ವಿತ ನಟ. ಧಾರಾವಾಹಿಯಿಂದ ನಟನಾ ವೃತ್ತಿ ಪ್ರಾರಂಭಿಸಿದ ಅವರು, ತಮ್ಮ ನಟನೆಯ ಮೂಲಕ ಇಂದು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.. ಇಂತಹ ಸ್ಟಾರ್‌ ಗಿರಿ ಪಡೆದರೂ ಸಹ ಪ್ರಕಾಶ್‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ.. ಅದಕ್ಕೆ ಕಾರಣವೇನು..? ಬನ್ನಿ ತಿಳಿಯೋಣ..

ಹೌದು.. ಪ್ರಕಾಶ್ ರಾಜ್ ಒಬ್ಬ ಬಹುಬೇಡಿಕೆಯ ಭಾರತೀಯ ನಟ. ನಿರ್ದೇಶಕ, ನಿರ್ಮಾಪಕ, ನಿರೂಪಕರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಕೆಲ ವರ್ಷಗಳಿಂದ ರಾಜಕೀಯಕ್ಕೂ ಸಹ ಎಂಟ್ರಿ ಕೊಟ್ಟಿದ್ದಾರೆ. ತೆಲುಗು, ತಮಿಳು, ಇಂಗ್ಲಿಷ್, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿ ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ನಿಜವಾದ ಲವರ್ ಯಾರು ಗೊತ್ತಾ? ಚಾರುಗಿಂತ ಸುಂದ್ರಿ ಆಕೆ!!  

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪ್ರಕಾಶ್‌ ರಾಜ್‌ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದ್ದು, ಈ ಮಾತು ಕೇಳಿ ಅವರ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಯಸ್‌.. ಮುದ್ದು ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದ ನಟ ಅದರಿಂದ ಹೊರ ಬರಲಾರದೆ ಸಾಯಲು ನಿರ್ಧರಿಸಿದ್ದರಂತೆ.. ಅಲ್ಲದೆ, ಸಮಾಧಿ ಬಳಿ ಹೋಗಿ ಕಾಲ ಕಳೆದಯುತ್ತಿದ್ದರಂತೆ.

ನಟ ಪ್ರಕಾಶ್ ರಾಜ್ ಮೊದಲ ಪತ್ನಿ ಲಲಿತಾ ಕುಮಾರಿ. ಇವರಿಗೆ ಮೂರು ಮಂದಿ ಮಕ್ಕಳಿದ್ದರು. ಮೇಘನಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣುಮಕ್ಕಳು ಹಾಗು ಸಿದ್ದು ಎಂಬ ಒಬ್ಬ ಮಗನಿದ್ದ. ಸಿದ್ದು ಚಿಕ್ಕವಯಸ್ಸಿನಲ್ಲಿ ನಿಧನ ಹೊಂದಿದ್ದರು. ಇದ್ದರಿಂದ ಪ್ರಕಾಶ್‌ ರಾಜ್‌ ಕುಗ್ಗಿ ಹೋಗಿದ್ದರು. 

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಖ್ಯಾತ ನಟ ನವೀನ್ ಪೋಲಿಶೆಟ್ಟಿಗೆ ಗಂಭೀರ ಗಾಯ..! ಆಸ್ಪತ್ರೆಗೆ ದಾಖಲು

ಮೊದಲ ಪತ್ನಿಗೆ ಡಿವೋರ್ಸ್‌ ನೀಡಿದ ಬಳಿಕ ಪ್ರಕಾಶ್‌ ರಾಜ್‌, 2010ರಲ್ಲಿ ಪೋನಿ ವರ್ಮಾ ಎಂಬುವರನ್ನು ಮದುವೆಯಾದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಇನ್ನು ರಾಜಕೀಯದಲ್ಲಿಯೂ ಗುರುತಿಸಿಕೊಂಡಿರುವ ರಾಜ್‌ ತಮ್ಮ ನೇರ ಮಾತುಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News