Prashanth Neel : ಯಶಸ್ಸಿನ ಮೂಲಕವೇ ಸಿನಿ ಜಗತ್ತಿಗೆ ಪರಿಚಯವಾದ ಪ್ರತಿಭಾನ್ವಿತ ನಿರ್ದೇಶಕರಿವರು

Happy Birthday Prashanth Neel : ಸರಳ ಹಾಗೂ ಪ್ರತಿಭಾನ್ವಿತ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದೇ ಬಹಳ ಇಂಟ್ರೆಸ್ಟಿಂಗ್‌ ವಿಷಯ. 

Written by - Zee Kannada News Desk | Last Updated : Jun 4, 2023, 10:27 AM IST
  • ಕನ್ನಡ ಚಿತ್ರರಂಗ ಇಂತಹ ಓರ್ವ ನಿರ್ದೇಶಕನ್ನು ಹೊಂದುತ್ತದೆ.
  • ಉಗ್ರಂ ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್‌ ನೀಲ್‌
  • ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ನಿರ್ಮಿಸಿದ ಕೆಜಿಎಫ್‌ ಸಿನಿಮಾ ನಿರ್ದೇಶಿಸಿದ ಮಾಸ್‌ ನಿರ್ದೇಶಕರಿವರು
Prashanth Neel : ಯಶಸ್ಸಿನ ಮೂಲಕವೇ ಸಿನಿ ಜಗತ್ತಿಗೆ ಪರಿಚಯವಾದ ಪ್ರತಿಭಾನ್ವಿತ ನಿರ್ದೇಶಕರಿವರು  title=

Sandalwood : ಕನ್ನಡ ಚಿತ್ರರಂಗ ಇಂತಹ ಓರ್ವ ನಿರ್ದೇಶಕನ್ನು ಹೊಂದುತ್ತದೆ. ಆತ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡಿ ಎಲ್ಲರು ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ರೀತಿಯಲ್ಲಿ ಮಾಡುತ್ತಾರೆ ಎಂದು ಯಾರು ಊಹೆ ಸಹ ಮಾಡಿರಲಿಲ್ಲ. 

ಹತ್ತಾರು ವರ್ಷಗಳಿಂದ ಚಿತ್ರರಂಗದಲ್ಲಿ ಅನೇಕ ಚಿತ್ರಗಳನ್ನು ಮಾಡಿದ ಬಳಿಕ ನಿರ್ದೇಶಕರು ಪಡೆದುಕೊಳ್ಳುವ ಯಶಸ್ಸು ಹಾಗೂ ಬೇಡಿಕೆಯನ್ನು ಅತಿ ವೇಗವಾಗಿ ಎರಡು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪಡೆದುಕೊಂಡ ಹೆಗ್ಗಳಿಕೆ ಪ್ರಶಾಂತ್‌ ನೀಲ್‌ ಅವರದು. 

ಉಗ್ರಂ ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್‌ ನೀಲ್‌ ಇದೇ ಸಿನಿಮಾದ ಮೂಲಕ ದೊಡ್ಡ ಯಶಸ್ಸು ಕಂಡ ಇವರು ಕೆಜಿಎಫ್‌ ಚಿತ್ರದಂತಹ ಬ್ಲಾಕ್‌ಬ್ಲಾಸ್ಟ್‌ರ್‌ ಸಿನಿಮಾಗಳ ಸರಣಿ ಮಾಡುವ ಮೂಲಕ ಇಡೀ ದೇಶವೇ ಮೆಚ್ಚಿ ಕೊಂಡಾಡುವಂತಹ ಸಿನಿಮಾ ನಿರ್ದೇಶಕರಾಗಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿಯೂ ತಮ್ಮ ಛಾಪು ಮೂಡಿಸಲು ರೆಡಿಯಾದ ಪ್ರಶಾಂತ್‌ ನೀಲ್‌ ಎಲ್ಲೆಡೆ ಬಹುಬೇಡಿಕೆ ನಿರ್ದೇಶಕರಾಗಿದ್ದಾರೆ. 

ಇದನ್ನೂ ಓದಿ-ಕನಸ್ಸಲ್ಲೂ ಕಾಡುವಂತಿದೆ ಕಪ್ಪು ಸೀರೆತೊಟ್ಟ ಕೀರ್ತಿ ಕಣ್ಣೋಟ : ಫೋಟೋಸ್‌ ನೋಡಿ

ಇಷ್ಟು ದೊಡ್ಡ ಮಟ್ಟಿಗೆ ಖ್ಯಾತಿಯನ್ನು ವೇಗವಾಗಿ ಸಂಪಾದಿಸಿರುವ ಪ್ರಶಾಂತ್‌ ನೀಲ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿರ್ದೇಶಕರದು ಇದು 43ನೇ ಹುಟ್ಟುಹಬ್ಬ ತಮ್ಮ ಸೂಪರ್‌ ಹಿಟ್‌ ಚಿತ್ರಗಳ ಮೂಲಕವೇ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಪ್ರಶಾಂತ್‌ ನೀಲ್‌ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಸುರಿಮಳೆಯೆ ಆಗುತ್ತಿದೆ. 

ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ನಿರ್ಮಿಸಿದ ಕೆಜಿಎಫ್‌ ʼನೀನು ಗೆದ್ದರೆ ಜಗತ್ತಿಗೆ ನಿನ್ನ ಪರಿಚಯವಾಗುತ್ತದೆʼ ಎನ್ನುವ ಡೈಲಾಗ್‌ನಂತೆ ತಮ್ಮ ಯಶಸ್ಸಿನ ಬಳಿಕವೇ ಸಿನಿಮಾ ಜಗತ್ತಿಗೆ ಪರಿಚಯವಾದ ಸರಳ ಮತ್ತು ಪ್ರತಿಭಾನ್ವಿತ ನಿರ್ದೇಶಕ ಇವರು. ಕೆಜಿಎಫ್‌ ಚಾಪ್ಟರ್‌ 1&2 ಭಾರತೀಯ ಚಿತ್ರರಂಗವಲ್ಲದೇ ಇಡೀ ವಿಶ್ವದೆಲ್ಲಡೆ ಹೊಸ ದಾಖಲೆ ಬರೆದು ಇಡೀ ಜಗತ್ತಿಗೆ ಪರಿಚಯವಾದರು. 

ಸದ್ಯ ತೆಲುಗಿನಲ್ಲೂ ಜೂ. ಎನ್‌ಟಿಆರ್‌, ಪ್ರಭಾಸ್‌ ಸೇರಿ ಸಾಕ್ಷಟು ಸ್ಟಾರ್‌ ಹಿರೋಗಳ ಸಿನಿಮಾಗಳಿಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಮೇಲೆ ಪ್ರತಯೊಬ್ಬ ಕನ್ನಡಿಗನಿಗೂ ಹೆಮ್ಮೆಯುಂಟು.

ಇದನ್ನೂ ಓದಿ-Bahubali Movie: ‘ಬಾಹುಬಲಿ’ ಮಾಡಲು ಎಸ್ ಎಸ್ ರಾಜಮೌಳಿ ಇಷ್ಟು ದೊಡ್ಡ ಬಡ್ಡಿಗೆ 400 ಕೋಟಿ ಸಾಲ ಮಾಡಿದ್ದರು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News