Puttakkana Makkalu: ಬಂಗಾರಮ್ಮನ್ನು ಜೈಲಿನಿಂದ ಬಿಡಿಸಿ ಪುಟ್ಟಕ್ಕ: ಕಂಠಿ ಸ್ನೇಹಾಳನ್ನು ಕ್ಷಮಿಸುತ್ತಾನಾ?

Puttakkana Makkalu Kannada Serial: ʻಪುಟ್ಟಕ್ಕನ ಮಕ್ಕಳುʼ ಧಾರವಾಹಿಯಲ್ಲಿ ಪುಟ್ಟಕ್ಕ ಏನೂ ತಪ್ಪನ್ನು ಮಾಡದೆ ಜೈಲಿನಿಂದ ಶಿಕ್ಷೆಯನ್ನು ಅನುಭವಿಸಿದ ಬಂಗಾರಮ್ಮನನ್ನು ಸೆರೆಮನೆ ವಾಸದಿಂದ ಬಿಡಿಸಿ ಕರೆದುಕೊಂಡು ಬರುತ್ತಾಳೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : Apr 19, 2024, 02:10 PM IST
  • ಪುಟ್ಟಕ್ಕ ಮತ್ತು ಕಂಠಿ ಇಬ್ಬರು ಸ್ನೇಹಾ ಗೆಳತಿಯ ಮನೆಗೆ ಹೋದಾಗ, ಅಲ್ಲಿಯ ಹಣವನ್ನು ಬೀರುವಿನಲ್ಲಿ ಇಡುತ್ತಿರುವುದನ್ನು ಪುಟ್ಟಕ್ಕ ನೋಡುತ್ತಾಳೆ.
  • ಅದೇ ಸಂದರ್ಭದಲ್ಲಿ ಪೊಲೀಸ್‌ಗೆ ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳಲು ಬಂದಿರಬಹುದೆಂದು ಗೊತ್ತಾಗುತ್ತದೆ.
  • ಇನ್ನೊಂಡು ಕಡೆ ರಾಧಾ ಬಂಗಾರಮ್ಮ ಜೈಲಿನಲ್ಲಿ ಕೊಳೆಯಬೇಕೆಂದು ಅದೆಷ್ಟೇ ಪ್ಲಾನ್ ಮಾಡಿದರೂ, ಅದೆಲ್ಲವನ್ನೂ ಪುಟ್ಟಕ್ಕ ಹಾಳು ಮಾಡಿದ್ದಾಳೆ.
Puttakkana Makkalu: ಬಂಗಾರಮ್ಮನ್ನು ಜೈಲಿನಿಂದ ಬಿಡಿಸಿ ಪುಟ್ಟಕ್ಕ: ಕಂಠಿ ಸ್ನೇಹಾಳನ್ನು ಕ್ಷಮಿಸುತ್ತಾನಾ? title=

Puttakka Released Banagaramma From Jail: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ ಧಾರವಾಹಿಯಲ್ಲಿ ಪುಟ್ಟಕ್ಕ ಬಂಗಾರಮ್ಮನನ್ನು ಜೈಲಿನಿಂದ ಬಿಡಿಸುತ್ತಾಳೆ. ಪುಟ್ಟಕ್ಕ 
ತನ್ನ ಮಗಳು ಸ್ನೇಹಾ ಜೀವನವನ್ನು ಉಳಿಸಲು, ಬಂಗಾರಮ್ಮನನ್ನು ಜೈಲಿನಿಂದ ಬಿಡುಗಡೆ ಮಾಡಲು ಹರ ಸಾಹಸ ಪಡುತ್ತಿದ್ದಾರೆ. ಮೊದಲೇ ಬಂಗಾರಮ್ಮನಿಗೆ ಸ್ನೇಹಾ ಮೇಲೆ ವಿಪರೀತ ಸಿಟ್ಟು ಇದ್ದರೇ, ಪುಟ್ಟಕ್ಕನ ಮೇಲೆ  ಮಾತ್ರ ಅಷ್ಟೇ ಪ್ರೀತಿ ಗೌರವ ಇದೆ. ಪುಟ್ಟಕ್ಕನಿಗೆ ಮಕ್ಕಳು ತಪ್ಪು ಮಾಡಿದರೂ ಅವರ ಜೀವನಕ್ಕೆ ಏನು ತೊಂದರೆ ಆಗಬಾರದೆಂಬ ಕಾಳಜಿಯಿದೆ. 

ಪುಟ್ಟಕ್ಕ ಮತ್ತು ಕಂಠಿ ಇಬ್ಬರು ಸ್ನೇಹಾ ಗೆಳತಿಯ ಮನೆಗೆ ಹೋದಾಗ, ಅಲ್ಲಿಯ ಹಣವನ್ನು ಬೀರುವಿನಲ್ಲಿ ಇಡುತ್ತಿರುವುದನ್ನು ಪುಟ್ಟಕ್ಕ ನೋಡುತ್ತಾಳೆ. ಆದರೆ, ಎಲ್ಲರ ಮುಂದೆ ಆಕೆಗೆ ಬಾಕಿ ಕೇಳಿದರೆ ಏನು ಉತ್ತರ ನೀಡುವುದು ಇಲ್ಲ ಎಂದು ತಿಳಿದ ಪುಟ್ಟಕ್ಕ ಅಲ್ಲಿಂದ ಹೋಗುತ್ತಾರೆ. ಆದರೆ ಪುಟ್ಟಕ್ಕನ ಮನಸ್ಸು ತಡೆಯದೆ ಸ್ನೇಹಾ ಗೆಳತಿಯ ತಾಯಿ ಯಾಕೆ ಹೀಗಾಡುತ್ತಿದ್ದಾರೆ? ಆಕೆಗೆ ಬಂಗಾರಮ್ಮನ ಮೇಲೆ ಕೋಪ ಯಾಕೆ? ಎನ್ನುವ ಅನುಮಾನ ಬರುತ್ತದೆ. ಆದರೆ ಪುಟ್ಟಕ್ಕ ಸ್ನೇಹಾ ಗೆಳತಿಯ ಮನೆಗೆ ಯಾರು ಇಲ್ಲದ ಸಮಯದಲ್ಲಿ ಬಂದು, ಪುಟ್ಟಕ್ಕ, ಸ್ನೇಹಾ ಗೆಳತಿಯ ಜೊತೆ ಕೊಂಚ ಗಡುಸಾಗಿ ವರ್ತಿಸುತ್ತಾರೆ. 

ಇದನ್ನೂ ಓದಿ: Shilpa Shetty: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ED ಬಿಗ್‌ ಶಾಕ್‌.. 98 ಕೋಟಿ ಮೌಲ್ಯದ ಆಸ್ತಿ ಜಪ್ತಿ !

ಪುಟ್ಟಕ್ಕ ಸ್ನೇಹಾ ಗೆಳತಿಯ ತಾಯಿಗೆ "ಯಾಕೆ ನೀನು ಹೀಗೆ ಮಾಡುತ್ತಿದ್ದಿಯಾ? ಬೀರುವಿನಲ್ಲಿ ಇಷ್ಟೆಲ್ಲ ಹಣ ಇದ್ದರೂ ಹಣ ಇಲ್ಲ ಎಂದು ಏಕೆ ಎಲ್ಲರ ಮುಂದೆ ಹೇಳಿದೆ? ಇದು ನಿನಗೆ ಸರಿ ಕಾಣಿಸುತ್ತಾ? ಯಾಕೆ ಹೀಗೆಲ್ಲ ಮಾಡಿದೆ?" ಎಂದು ಸ್ವಲ್ಪ ಕೋಪದಲ್ಲಿ ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಸ್ನೇಹಾ, ಗೆಳತಿಯ ತಾಯಿ  ಮೊದಲು ತನ್ನ ಬಳಿ ಹಣ ಇಲ್ಲವೆಂದು ವಾದಿಸುತ್ತಾಳೆ. ತದನಂತರ "ನನ್ನದು ತಪ್ಪಾಯಿತು. ನನ್ನ ಗಂಡ ಕುಡಿದು ರೋಡಲ್ಲಿ ಬಿದ್ದಿದ್ದರು. ಆದರೆ, ಆತನನ್ನು ಜನರೆ ಕರೆದುಕೊಂಡು ಬರುವಾಗ ಬಂಗಾರಮ್ಮ ಅವರ ಮನೆಯವರು ನನಗೆ ಸಿಕ್ಕಿದರು" ಎಂದು ಹೇಳುತ್ತಾಳೆ. 

ಸ್ನೇಹಾ ಗೆಳತಿಯ ತಾಯಿಗೆ "ಮೊದಲೇ ಅವರ ಮೇಲೆ ನನಗೆ ಸಿಟ್ಟಿತ್ತು. ಆ ಕೂಡಲೇ ಬಂಗಾರಮ್ಮನ ಕಡೆಯವರು ಬಡ್ಡಿ ಕಟ್ಟಲು ಬೆದರಿಸಿದ್ದರು. ಬಂಗಾರಮ್ಮನವರಿಗೆ ಬುದ್ಧಿ ಕಲಿಸಲು ಇದುವೇ ಸರಿಯಾದ ಸಮಯ ಎಂದುಕೊಂಡೆ" ಎಂದು ಪುಟ್ಟಕ್ಕನ ಹತ್ತಿರ ಹೇಳುತ್ತಾಳೆ.  ಅದೇ ಸಂದರ್ಭದಲ್ಲಿ ಪುಟ್ಟಕ್ಕ, "ನೀನು ನನ್ನ ಬಳಿ ಏನು ಹೇಳಿದ್ದಿಯೋ ಅದನ್ನೆಲ್ಲಾ ಸ್ಟೇಶನ್‌ನಲ್ಲಿ ಹೇಳು" ಎಂದು ಪೊಲೀಸ್ ಸ್ಟೇಶನ್‌ಗೆ ಕರೆದುಕೊಂಡು ಬರುತ್ತಾರೆ. ಪುಟ್ಟಕ್ಕ ಹಾಗೂ ಬಂಗಾರಮ್ಮ ವಿರುದ್ದ ಕಂಪ್ಲೇಂಟ್ ಕೊಟ್ಟವರನ್ನು ನೋಡಿ ಪೊಲೀಸರಿಗೆ ಕೊಂಚ ಶಾಕ್ ಆಗುತ್ತದೆ. 

ಇದನ್ನೂ ಓದಿ: Diganth: ಉತ್ತರಕಾಂಡದಲ್ಲಿ ಗುಟ್ಕಾ ಮಲ್ಲಿಗೆಯಾದ ದೂದ್‌ ಪೇಡ ದಿಗಂತ್:‌ ಹೊಸ ರಗಡ್‌ ಲುಕ್‌ನಲ್ಲಿ ನಟ!

ಅದೇ ಸಂದರ್ಭದಲ್ಲಿ ಪೊಲೀಸ್‌ಗೆ ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳಲು ಬಂದಿರಬಹುದೆಂದು ಗೊತ್ತಾಗುತ್ತದೆ. ಇನ್‌ಸ್ಟೆಕ್ಟರ್ ಸ್ವಲ್ಪ ಜೋರು ಧ್ವನಿಯಲ್ಲಿ "ನೀವು ಏನು ಹೆದರಬೇಡಿ. ಏನೆಲ್ಲ ಆಯಿತು ಅದನ್ನು ಹೇಳಿ. ನಾವು ನಿಮಗೆ ನ್ಯಾಯ ಕೊಡಿಸುತ್ತೇವೆ" ಎಂದಾಗ ಹೇಳುತ್ತಾರೆ. ಆವಾಗ ಆಕೆ "ನನ್ನ ಗಂಡ ಬಹಳ ದೊಡ್ಡ ಕುಡುಕ. ಆತ ಕುಡಿದು ತೂರಾಡಿ ಬಿದ್ದಿದ್ದ. ಆತನಿಗೆ ಎರಡು ದಿನ ಆದರೂ ಎಚ್ಚರ ಆಗಲಿಲ್ಲ. ಬಂಗಾರಮ್ಮನ ಮೇಲೆ ನನಗೆ ವಿಪರೀತ ಕೋಪ ಇತ್ತು. ಅದಕ್ಕೆ ನನ್ನ ಯಜಮಾನರು ಬರೆದ ಹಾಗೆ ಪತ್ರ ಬರೆದು, ನನ್ನ ಸಾವಿಗೆ ಬಂಗಾರಮ್ಮ ಅವರೇ ಕಾರಣ ಎನ್ನುವ ಹಾಗೆ ಬಿಂಬಿಸಿ ಪತ್ರ ಬರೆದು ಗಂಡನ ಬಳಿ ಇಟ್ಟಿದ್ದೆ" ಎಂದು ಹೇಳಿದಾಗ ಎಲ್ಲರಿಗೂ ಆಘಾತವಾಗುತ್ತದೆ. 

ಇನ್ನೊಂಡು ಕಡೆ ರಾಧಾ ಬಂಗಾರಮ್ಮ ಜೈಲಿನಲ್ಲಿ ಕೊಳೆಯಬೇಕೆಂದು ಅದೆಷ್ಟೇ ಪ್ಲಾನ್ ಮಾಡಿದರೂ, ಅದೆಲ್ಲವನ್ನೂ ಪುಟ್ಟಕ್ಕ ಹಾಳು ಮಾಡಿದ್ದಾಳೆ. ಬಂಗಾರಮ್ಮನಂತೆ ಪುಟ್ಟಕ್ಕಳಿಗೂ ಬಂಗಾರಮ್ಮನ ಮೇಲೆ  ಮೇಲೆ ತುಂಬಾನೆ ಪ್ರೀತಿಯಿದ್ದು, ಬಂಗಾರಮ್ಮ ಅವರಿಗೆ ಯಾವುದೇ ತೊಂದರೆ ಆಗಬಾರದು. ಆಕೆ ಚೆನ್ನಾಗಿ ಇರಬೇಕು ಎನ್ನುವ ಆಸೆಯಾಗಿತ್ತು. ಪುಟ್ಟಕ್ಕ ಕಷ್ಟದಲ್ಲಿ ಇರಬೇಕಾದರೆ, ಬಂಗಾರಮ್ಮ ಬಹಳ ಸಹಾಯ ಮಾಡಿರುತ್ತಾರೆ. ಅವರಿಗೆ ಪುಟ್ಟಕ್ಕ ಎಂದರೆ ಬಹಳ ಪ್ರೀತಿಯಿದ್ದು, ಅದಕ್ಕೆ ತಕ್ಕ ಹಾಗೆ ಬಂಗಾರಮ್ಮ ನಡೆದುಕೊಳ್ಳುತ್ತಾರೆ. ಇದೀಗ ಪುಟ್ಟಕ್ಕ, ಬಂಗಾರಮ್ಮನನ್ನು ಜೈಲಿನಿಂದ ರಿಲೀಸ್ ಮಾಡಿಸುತ್ತಾರೆ. ಆದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಬಂಗಾರಮ್ಮ ಮತ್ತು ಕಂಠಿ ಸ್ನೇಹಾಗೆ ಕ್ಷಮಿಸುತ್ತಾರ ಎಂಬುದನ್ನು ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Trending News