Renukaswamy Murder Case: ಜೈಲಿನ ಊಟದ ಬಗ್ಗೆ ಪವಿತ್ರಾ ಗೌಡ ತಕರಾರು..!

Renukaswamy Murder Case: ಶುಕ್ರವಾರ ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ ನೀಡಲಾಗಿತ್ತು. ಕೇವಲ ಎರಡು ತುತ್ತು ಸೇವಿಸಿದ ಪವಿತ್ರಾ ಗೌಡ ತಾನು ಪೊಲೀಸ್‌ ಕಸ್ಟಡಿಯಲ್ಲಿದ್ದೇನೆ ಎನ್ನುವುದನ್ನೇ ಮರೆತು, ಅನ್ನ ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು? ಅಂತಾ ಪೊಲೀಸ್‌ ಸಿಬ್ಬಂದಿಗೆ ಪ್ರಶ್ನಿಸಿದ್ದಾಳಂತೆ.

Written by - Puttaraj K Alur | Last Updated : Jun 16, 2024, 08:49 AM IST
  • ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡಳಿಗೆ ಬೇಸರ ತರಿಸಿದ ಕಸ್ಟಡಿಯ ಜೀವನ
  • ಜೈಲಿನಲ್ಲಿ ನೀಡಿರುವ ಊಟದ ಬಗ್ಗೆ ತಕರಾರು ತೆಗೆದ A1 ಆರೋಪಿ ಪವಿತ್ರಾ ಗೌಡ
  • ಮೊಸರನ್ನ ಹುಳಿ ಎಂದ ಪವಿತ್ರಾಗೌಡಗೆ ಪೊಲೀಸ್‌ ಸಿಬ್ಬಂದಿ ಹೇಳಿದ್ದೇನು ಗೊತ್ತಾ?
Renukaswamy Murder Case: ಜೈಲಿನ ಊಟದ ಬಗ್ಗೆ ಪವಿತ್ರಾ ಗೌಡ ತಕರಾರು..! title=

Renukaswamy Murder Case: ಚಿತ್ರುದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ A1 ಆರೋಪಿ, ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಗೆಳತಿ ಪವಿತ್ರಾ ಗೌಡ ಪೊಲೀಸ್ ಕಸ್ಟಡಿಯಲ್ಲಿ‌ ಧಿಮಾಕಿನ ವರ್ತನೆ ತೋರಿದ್ದಾರೆಂಂದು ತಿಳಿದುಬಂದಿದೆ. ಇಷ್ಟು ದಿನ ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡಳಿಗೆ ಕಸ್ಟಡಿಯ ಜೀವನ ಬೇಸರ ತರಿಸಿದೆ. ಮನೆಯಲ್ಲಿ ಭಕ್ಷ್ಯ ಭೋಜನ ಸವಿಯುತ್ತಿದ್ದ ಆಕೆಗೆ ಜೈಲಿನಲ್ಲೂ ಅದೇ ರೀತಿಯ ಊಟ-ಉಪಚಾರ ಬೇಕು ಅಂತಾ ಹಠ ಮಾಡಿದ್ದಾಳಂತೆ. 

ಜೈಲಿನಲ್ಲಿ ಆಕೆಗೆ ನೀಡಿರುವ ಊಟದ ಬಗ್ಗೆ ಪವಿತ್ರಾ ಗೌಡ ತಕರಾರು ತೆಗೆದಿದ್ದಾಳಂತೆ. ಶುಕ್ರವಾರ ಮಧ್ಯಾಹ್ನ ಎಲ್ಲಾ ಆರೋಪಿಗಳಿಗೆ ಮೊಸರನ್ನ ನೀಡಲಾಗಿತ್ತು. ಕೇವಲ ಎರಡು ತುತ್ತು ಸೇವಿಸಿದ ಪವಿತ್ರಾ ಗೌಡ ತಾನು ಪೊಲೀಸ್‌ ಕಸ್ಟಡಿಯಲ್ಲಿದ್ದೇನೆ ಎನ್ನುವುದನ್ನೇ ಮರೆತು, ಅನ್ನ ಇಷ್ಟೊಂದು ಹುಳಿ ಇದೆ ಹೇಗೆ ತಿನ್ನೋದು? ಅಂತಾ ಪೊಲೀಸ್‌ ಸಿಬ್ಬಂದಿಗೆ ಪ್ರಶ್ನಿಸಿದ್ದಾಳಂತೆ.

ಇದನ್ನೂ ಓದಿ: ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!

ಪವಿತ್ರಾಗೌಡಳ ಈ ಪ್ರಶ್ನೆಗೆ ಖಡಕ್‌ ಆಗಿಯೇ ಉತ್ತರಿಸಿರುವ ಪೊಲೀಸ್‌ ಸಿಬ್ಬಂದಿ, ನಾನು ಸಹ ಊಟ ಮಾಡುತ್ತಿರುವುದು ಅದೇ ಮೊಸರನ್ನ. ಬೇಕಾದರೆ ಊಟ ಮಾಡು, ಇಲ್ಲದಿದ್ರೆ ಬಿಡು ಅಂತಾ ಹೇಳಿದ್ದಾರಂತೆ. ಖಾಕಿಯ ಈ ಉತ್ತರಕ್ಕೆ ಪೆಚ್ಚಾದ ಪವಿತ್ರಾ ಗೌಡ ಸುಮ್ಮನೆ ಮೊಸರನ್ನ ಸೇವಿಸಿದಳೆಂದು ಮೂಲಗಳು ತಿಳಿಸಿವೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ A1 ಆರೋಪಿಯಾಗಿದ್ದರೆ, ನಟ ದರ್ಶನ್‌ A2 ಆರೋಪಿಯಾಗಿದ್ದಾರೆ. ಸದ್ಯ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 18 ಮಂದಿ ಆರೋಪಿಗಳನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: 2000ರಲ್ಲಿ ಖಾಲಿ ಕೈಯಲ್ಲಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News