ʼಕಾಂತಾರʼದ ಯಶಸ್ಸು ʼಯುವರತ್ನ ಅಪ್ಪುʼ ಅವರಿಗೆ ಅರ್ಪಣೆ

ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಭಾರತೀಯರ ಮನಗೆದ್ದ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ತುಳು ಭಾಷೆಯಲ್ಲಿಯೂ ಕಾಂತಾರ ಬಿಡುಗಡೆಯಾಗಿದೆ. ರಿಷಬ್‌ ಶೆಟ್ಟಿಯವರು ಕಾಂತಾರದ ಸಂಪೂರ್ಣ ಯಶಸ್ಸನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಅರ್ಪಿಸಿದ್ದು, ಅಪ್ಪು ಹಾಗೂ ಕನ್ನಡಿಗರಿಗೆ ಖುಷಿ ತಂದಿದೆ.

Written by - Krishna N K | Last Updated : Dec 2, 2022, 03:12 PM IST
  • ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಭಾರತೀಯರ ಮನಗೆದ್ದ ಚಿತ್ರ
  • ಇದೀಗ ತುಳು ಭಾಷೆಯಲ್ಲಿಯೂ ಕಾಂತಾರ ಬಿಡುಗಡೆಯಾಗಿದೆ
  • ರಿಷಬ್‌ ಶೆಟ್ಟಿಯವರು ಕಾಂತಾರದ ಸಂಪೂರ್ಣ ಯಶಸ್ಸನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಅರ್ಪಿಸಿದ್ದಾರೆ
ʼಕಾಂತಾರʼದ ಯಶಸ್ಸು ʼಯುವರತ್ನ ಅಪ್ಪುʼ ಅವರಿಗೆ ಅರ್ಪಣೆ title=

Kantara tulu movie : ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಭಾರತೀಯರ ಮನಗೆದ್ದ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ತುಳು ಭಾಷೆಯಲ್ಲಿಯೂ ಕಾಂತಾರ ಬಿಡುಗಡೆಯಾಗಿದೆ. ರಿಷಬ್‌ ಶೆಟ್ಟಿಯವರು ಕಾಂತಾರದ ಸಂಪೂರ್ಣ ಯಶಸ್ಸನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಿಗೆ ಅರ್ಪಿಸಿದ್ದು, ಅಪ್ಪು ಹಾಗೂ ಕನ್ನಡಿಗರಿಗೆ ಖುಷಿ ತಂದಿದೆ.

ಈ ಕುರಿತು ಹೊಂಬಾಳೆ ಫಿಲಂಸ್‌ ಬಿಡುಗಡೆಮಾಡಿರುವ ವಿಡಿಯೋದಲ್ಲಿ ಕಾಂತಾರ ತುಳು ಭಾಷೆಯಲ್ಲಿ ಬಿಡುಗಡೆಯಾಗಿರುವ ಕುರಿತು ವಿವರಿಸುತ್ತಾ ಸಿನಿಮಾದ ಯಶಸ್ಸನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರಿಗೆ ಅರ್ಪಿಸಿದ್ದಾರೆ. ಅಲ್ಲದೆ, ದೈವ ನರ್ತಕರು, ದೈವಾರಾಧಕರು, ದೈವಕ್ಕೆ ಸೇವೆ ಕೊಟ್ಟಿರುವಂತಹ ಅವರ ಕುಟುಂಬಕ್ಕೆ ಹಾಗೂ ಅಪ್ಪು ಸರ್‌ಗೆ ಹಾಗೂ ಕನ್ನಡ ಸಿನಿ ಪ್ರೇಕ್ಷಕರಿಗೆ ಅರ್ಪಣೆ ಮಾಡ್ತೀನಿ ಎಂದು ಹೇಳಿದರು.

ಇದನ್ನೂ ಓದಿ: ರಿಷಬ್ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಸುರಿಮಳೆ

ಇನ್ನು ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದೆ. ಬಿಗ್‌ ಬಜೆಟ್‌ ಸಿನಿಮಾಗಳ ದಾಖಲೆಗಳನ್ನು ಧೂಳಿಪಟ ಮಾಡಿರುವ ಕಾಂತಾರ ಸದ್ಯ ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕಾಡು ಮತ್ತು ಸಂಪ್ರದಾಯದ ಕಥಾಹಂದರದ ನಡುವೆ ಮಾನವೀಯ ಮೌಲ್ಯಗಳನ್ನು ಸಾರುವ ದೈವಾರಾಧನೆ ಸಿನಿಮಾ ಭಾರತೀಯರ ಮೆಚ್ಚಿನ ಚಿತ್ರವಾಗಿ ಹೊರಹೊಮ್ಮಿದೆ. ಅಲ್ಲದೆ, ರಿಷಬ್‌ ನಿರ್ದೇಶನ ಮತ್ತು ನಟನೆಗೆ ಪ್ರೇಕ್ಷಕ ಮಹಾಶಯ ಜೈ ಎಂದಿದ್ದಾರೆ.

ಈಗಾಗಲೇ 400 ಕೋಟಿ ರೂ. ಕ್ಲಬ್‌ ಸೇರಿರುವ ಕಾಂತಾರ ಒಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕಾಂತಾರ ಸಿನಿಮಾಗೆ ದಿಗ್ಗಜ ನಟರು ಸೇರಿದಂತೆ ಹಲವಾಗು ಗಣ್ಯ ವ್ಯಕ್ತಿಗಳೂ ಶಬ್ಭಾಸ್‌ ಗಿರಿ ನೀಡಿದ್ದಾರೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಅವರು ಈ ಸಿನಿಮಾವನ್ನು ನಿರ್ಮಾಣಮಾಡಿದ್ದಾರೆ. ರಿಷಬ್‌ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸಿ ನಟಿಸಿದ್ದಾರೆ. ಸಪ್ತಮಿಗೌಡ, ಅಚ್ಯುತ್‌ಕುಮಾರ್‌, ಕಿಶೋರ್‌ ಸೇರಿದಂತೆ ಹಲವಾರು ಕಲಾವಿದರು ಸಿನಿಮಾದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News