ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಸಿನಿಮಾಗೆ ಕೊಟ್ಟಿದ್ದಾರೆ, ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕದ್ದು ತುಂಬಾ ಖುಷಿ ತಂದಿದೆ. ಜವಾಬ್ದಾರಿ ಹೆಚ್ಚಾಯಿತು ಅನಿಸುತ್ತದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೇ ವೇಳೆ ಕಾಂತಾರ 2 ಕೆಲಸವನ್ನು ಶುರು ಮಾಡುವುದಾಗಿ ಅಪ್ಡೆಟ್ ನೀಡಿದರು.
ಥಿಯೇಟರ್ಗಳಲ್ಲಿ ಕ್ರಿಯೇಟ್ ಮಾಡಿದ್ದ ಹವಾ ಕಡಿಮೆಯಾದ್ರೂ ಸಹ ಓಟಿಟಿಯಲ್ಲಿ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ಅಬ್ಬರಿಸುತ್ತಿದೆ. ಬಾಲಿವುಡ್ ನಟ ನಟಿಯರು ರಿಷಬ್ ಶೆಟ್ಟಿ ಸಿನಿಮಾಗೆ ಫಿದಾ ಆಗುತ್ತಿದ್ದಾರೆ. ಇದೀಗ ಬಿಟೌನ್ ಬೆಡಗಿ ನಟಿ ಜಾನ್ವಿ ಕಪೂರ್ ʼಕಾಂತಾರ'ವನ್ನು ವೀಕ್ಷಿಸಿದ್ದು, ರಿಷಬ್ ಶೆಟ್ಟಿ ನಟನೆ, ನಿರ್ದೇಶನ ನೋಡಿ ಅಚ್ಚರಿಗೊಂಡಿದ್ದು, ಸೂಪರ್ ಸರ್ ಅಂತ ಹಾಡಿ ಹೊಗಳಿದ್ದಾರೆ.
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ಭಾರತೀಯರ ಮನಗೆದ್ದ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ತುಳು ಭಾಷೆಯಲ್ಲಿಯೂ ಕಾಂತಾರ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿಯವರು ಕಾಂತಾರದ ಸಂಪೂರ್ಣ ಯಶಸ್ಸನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿದ್ದು, ಅಪ್ಪು ಹಾಗೂ ಕನ್ನಡಿಗರಿಗೆ ಖುಷಿ ತಂದಿದೆ.
ಕಾಪಿರೈಟ್ ಕೇಸ್ ಎದುರಿಸುತ್ತಿದ್ದ ಕಾಂತಾರ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ವರಾಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ನೀಡಿದ್ದ ಅದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಇದರಿಂದ ಹೊಂಬಾಳೆ ಫಿಲಂಸ್ಗೆ ಗೆಲುವು ಲಭಿಸಿದಂತಾಗಿದೆ.
ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ʼಕಾಂತಾರʼ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಭಾರತದ ದರ್ಶನ ಮಾಡಿರುವ ಕಾಂತಾರದ ಶಿವ, ಲೀಲಾ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಕಾಂತಾರ ಸಿನಿಮಾಗೆ ಪ್ರೇಕ್ಷಕ, ವಿಮರ್ಶಕರು ಸೇರಿದಂತೆ ನಟ, ನಟಿಯರು, ರಾಜಕೀಯ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಿಷಬ್ ಶೆಟ್ಟಿಯವರನ್ನು ಮನೆಗೆ ಕರೆಯಿಸಿ ಅಭಿನಂದನೆಗಳನ್ನು ತಿಳಿಸಿ ಗೋಲ್ಡನ್ ಚೈನ್ ಒಂದನ್ನು ಉಡುಗೂರೆಯಾಗಿ ನೀಡಿದ್ದರು.
ಭಾರತದಾದ್ಯಂತ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರದ ‘ವರಾಹ ರೂಪಂ..’ ಹಾಡು ಕಾಪಿರೈಟ್ ವಿವಾದ ಎದುರಿಸುತ್ತಿದೆ. ಅಲ್ಲದೆ, ʼತೈಕ್ಕುಡಂ ಬ್ರಿಡ್ಜ್ʼ ಹಣಕ್ಕಾಗಿ ಇದೆಲ್ಲವನ್ನು ಮಾಡುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಈ ಕುರಿತು ಮಾತನಾಡಿರುವ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ನ ಸದಸ್ಯರೊಬ್ಬರು ಹಣ ಬೇಕಿಲ್ಲ, ಹಾಡಿಗೆ ಕ್ರಿಡಿಟ್ ಹಾಕಿದ್ರೆ ಸಾಕು ಎಂದಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದ ಸಿನಿಮಾಗೆ ರಾಜಕೀಯ ಗಣ್ಯರು, ನಟರು ಫಿದಾ ಆಗಿದ್ದಾರೆ. ಇನ್ನು ತಲೈವಾ ರಜನಿಕಾಂತ್ ಅವರು ಸಿನಿಮಾ ನೋಡಿದ್ದು, ಹಾಡಿ ಹೊಗಳಿದ್ದಾರೆ.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಕಾಂತಾರ ಕ್ರೇಜ್ ಬಗ್ಗೆ ಮಾತೆತ್ತಿರುವ ಆರ್ಜಿವಿ ಸದ್ಯ ಬಿಗ್ ಬಜೆಟ್ ಸಿನಿಮಾಗಳಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ರಿಷಬ್ ಥ್ಯಾಂಕ್ಸ್, ಎಲ್ಲರೂ ನಿಮಗೆ ಫೀಸ್ ಕಟ್ಟಬೇಕು ಅಂತ ಹೇಳಿದ್ದಾರೆ.
ʼಕಾಂತಾರʼ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹಿಟ್ ಆದ ಬೆನ್ನಲ್ಲೆ ರಿಷಬ್ ಶೆಟ್ಟಿಗೆ ಯಾವ ಸ್ಟಾರ್ಗಿರಿ ನೀಡಬೇಕು ಅಂತ ಫ್ಯಾನ್ಸ್ಗಳ ಮಧ್ಯ ಸೋಷಿಯಲ್ ಮೀಡಿಯಾದಲ್ಲಿ ವಾರ್ ಶುರುವಾಗಿದೆ. ನಟ, ನಿರ್ದೇಶಕರಾಗಿರುವ ರಿಷಬ್ ಶೆಟ್ಟಿಗೆ, ಡಿವೈನ್ ಸ್ಟಾರ್ ಪಟ್ಟ ನೀಡ್ಬೇಕು ಅಂತ ಕೆಲವರು ಹೇಳಿದ್ರೆ ಇನ್ನು ಕೆಲವರು ಕರಾವಳಿ ಸ್ಟಾರ್ ಇಲ್ಲವೆ ನ್ಯಾಚುರಲ್ ಸ್ಟಾರ್ ಅಂತ ಕರಿಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕಾಂತಾರ ಸಿನಿಮಾದ ಕ್ರೇಜ್ ಭಾರತೀಯ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದ ಮುಂದೆ ಟಿಕೆಟ್ಗಾಗಿ ಕಾಯ್ದು ನಿಲ್ಲುವಂತೆ ಮಾಡುತ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಸಿನಿಮಾವನ್ನು ಚಿತ್ರರಂಗದ ದಿಗ್ಗಜರು, ರಾಜಕೀಯ ಗಣ್ಯರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಸದ್ಯ ಕರಾವಳಿ ಬೆಡಗಿ ಕನ್ನಡತಿ ಅನುಷ್ಕಾ ಶೆಟ್ಟಿ ಕಾಂತಾರವನ್ನು ಹಾಡಿ ಹೊಗಳಿದ್ದಾರೆ.
ಕಾಂತಾರಕ್ಕೆ ನಾನು ಮಂಗಳೂರು ಕನ್ನಡ ಕಲಿತು ಡಬ್ಬಿಂಗ್ ಮಾಡಿದೆ. ಸಿನಿಮಾ ನೋಡಿದ ಎಲ್ಲರೂ ನನ್ನನ್ನು ಮನೆಯ ಮಗಳ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಕಾಂತಾರದ ಸಿಂಗಾರ ಸಿರಿ ನಟಿ ಸಪ್ತಮಿಗೌಡ ತಮ್ಮ ಅನುಭವಗಳನ್ನು ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.