Salar: ಟ್ರೈಲರ್‌ ರಿಲೀಸ್‌ ಟೈಮ್ ಅನೌನ್ಸ್‌.. ಅಭಿಮಾನಿಗಳಿಗೆ ಬಿಗ್‌ ಆಫರ್‌ ನೀಡಿದ ಸಲಾರ್‌ ಟೀಮ್‌..!

Salar Bumper Offer: ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಟೈಮ್ ಅನೌನ್ಸ್ ಮಾಡುತ್ತಲೇ ನಿರ್ಮಾಪಕರು ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಹಾಗಾದರೆ ಆ ಕೊಡುಗೆ ಏನು?‌ ಇಲ್ಲಿವೆ ಕಂಪ್ಲೀಟ್‌ ಡಿಟೇಲ್ಸ್‌..  

Written by - Savita M B | Last Updated : Nov 30, 2023, 03:53 PM IST
  • ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ನಿರೀಕ್ಷಿತ ಚಿತ್ರ 'ಸಲಾರ್ʼ
  • ಇದು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.
  • ಇದೀಗ ಟ್ರೈಲರ್‌ ಬಿಡುಗಡೆಯ ಸರಿಯಾದ ಸಮಯ ಹೇಳಿ ಅಭಿಮಾನಿಗಳಿಗೆ ವಿಶೇಷ ಆಫರ್ ಘೋಷಿಸಿದ್ದಾರೆ
Salar: ಟ್ರೈಲರ್‌ ರಿಲೀಸ್‌ ಟೈಮ್ ಅನೌನ್ಸ್‌.. ಅಭಿಮಾನಿಗಳಿಗೆ ಬಿಗ್‌ ಆಫರ್‌ ನೀಡಿದ ಸಲಾರ್‌ ಟೀಮ್‌..!  title=

Salar: ಯಂಗ್‌ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ.. ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ನಿರೀಕ್ಷಿತ ಚಿತ್ರ 'ಸಲಾರ್'. ಇದು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. 

ಡಿಸೆಂಬರ್ 1 ರಿಂದ ಈ ಸಿನಿಮಾದ ಪ್ರಮೋಷನ್‌ ಕೆಲಸ ಟ್ರೇಲರ್ ಬಿಡುಗಡೆಯಿಂದಲೇ ಶುರುವಾಗಲಿದೆ... ಈಗಾಗಲೇ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಮೇಕರ್ಸ್, ಇದೀಗ ಸರಿಯಾದ ಸಮಯ ಹೇಳಿ ಅಭಿಮಾನಿಗಳಿಗೆ ವಿಶೇಷ ಆಫರ್ ಘೋಷಿಸಿದ್ದಾರೆ. ಹಾಗಾದರೆ ಆ ಸಮಯ ಯಾವುದು ಮತ್ತು ಕೊಡುಗೆ ಏನು..? ಇಲ್ಲಿದೆ ಉತ್ತರ

ಇದನ್ನೂ ಓದಿ-ಪತಿ ಕೊಟ್ಟ ಗಿಫ್ಟ್ ನೋಡಿ ಶಾಕ್ ಆದ ನಟಿ ನಯನತಾರ..! ವಿಘ್ನೇಶ್‌ ಕೊಟ್ಟಿದ್ದು ಏನ್‌ ಗೊತ್ತೆ..?

"ಸಲಾರ್ ಭಾಗ 1 ರ ಟ್ರೈಲರ್ ನಾಳೆ ರಾತ್ರಿ 7:19 ಕ್ಕೆ ಬಿಡುಗಡೆಯಾಗಲಿದೆ... ಐದು ಬೆಸ್ಟ್ ಕ್ಯಾಪ್ಶನ್ ಕೊಟ್ಟವರಿಗೆ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಕೊಡುತ್ತೇವೆ" ಎಂದು ಸಲಾರ್ ಟೀಮ್ ಆಫರ್ ಅಭಿಮಾನಿಗಳಿಗೆ ಆಫರ್‌ ನೀಡಿದೆ... 

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್ ಸಲಾರ್ ಕಥೆ ಏನಿದೆ ಎನ್ನುವದರ ಬಗ್ಗೆ ಹೇಳಿದ್ದರು.. ಈ ಸಲಾರ್ ಚಿತ್ರ ಸಂಪೂರ್ಣ ಕಥೆ ಸ್ನೇಹದ ಸುತ್ತ ಸುತ್ತುತ್ತದೆ.. ಇಬ್ಬರು ಆತ್ಮೀಯ ಸ್ನೇಹಿತರು ಹೇಗೆ ದೊಡ್ಡ ಶತ್ರುಗಳಾಗಿ ಬದಲಾಗುತ್ತಾರೆ ಎಂಬುದೇ ಚಿತ್ರದ ಕಥೆ ಎಂದು ಸಣ್ಣ ಹಿಂಟ್‌ ಕೊಟ್ಟಿದ್ದರು..

ಇದನ್ನೂ ಓದಿ-Nag Chaitanya: ವಿಚ್ಛೇದನದ ನಂತರ ಮತ್ತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಚೈ..? ನಿಜವಾದ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟ

ಪ್ರಶಾಂತ್ ನೀಲ್ ಅವರ ಮೊದಲ ಚಿತ್ರ 'ಉಗ್ರಂ' ಕಥೆ ಕೂಡ ಇದೇ ಕಥೆ. ಆದರೆ, ಆ ಕಥೆಯಲ್ಲಿ ಸ್ನೇಹಿತರ ನಡುವೆ ಸಂಪೂರ್ಣ ಹಗೆತನ ತೋರಿಸಲಾಗಿದೆ. ಸಲಾರ್ ಸಿನಿಮಾದಲ್ಲಿ ಸ್ನೇಹಿತರ ನಡುವಿನ ಜಗಳವನ್ನೇ ಪ್ರಧಾನವಾಗಿ ತೆಗೆದುಕೊಂಡಿಲ್ಲ. 

ಇನ್ನು ಸಲಾರ್ ಮತ್ತು ಕೆಜಿಎಫ್ ನಡುವಿನ ಲಿಂಕ್ ವಿಷಯಕ್ಕೆ ಬಂದರೆ, ಸಲಾರ್ ಅದ್ವಿತೀಯ ಚಿತ್ರವಾಗಿದ್ದು, ಕೆಜಿಎಫ್‌ನೊಂದಿಗೆ ಯಾವುದೇ ಲಿಂಕ್‌ ಹೊಂದಿಲ್ಲ ಎಂದು ನಿರ್ದೇಶಕರು ಪ್ರೇಕ್ಷಕರಿಗೆ ತಿಳಿಸಿದ್ದಾರೆ.. ಸದ್ಯ ಈ ಎರಡು ಸಂಗತಿಗಳು ಅಭಿಮಾನಿಗಳನ್ನು ಕೊಂಚ ನಿರಾಸೆಗೊಳಿಸಿವೆ. ಈ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ಹೀರೋ ಪೃಥ್ವಿ ರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದರೆ, ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News