ನನಗೆ ಅದು ಬೇಕೇ ಬೇಕು.. ಅಂತ ಪೊಲೀಸರ ಮುಂದೆ ಅಂಗಲಾಚಿದ ದರ್ಶನ್‌..! ಡೆವಿಲ್‌ ಕೇಳಿದ್ದಾದ್ರೂ ಏನು..?

Darshan case : ಡಿ ಗ್ಯಾಂಗ್ ಹತ್ಯೆ ಪ್ರಕರಣದ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ.. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ವೇಗಗೊಳಿಸಿದ್ದಾರೆ. ಇಂದು ದರ್ಶನ್‌ ಮತ್ತು ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನು ಹತ್ಯೆಗೈದ ಸ್ಥಳಕ್ಕೆ ಕಳೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದರು.. ಈ ವೇಳೆ ದರ್ಶನ್‌ ಪೊಲೀಸರಿಗೆ ಬೇಡಿಕೆಯೊಂದನ್ನು ಇಟ್ಟಿದ್ದರು..

Written by - Krishna N K | Last Updated : Jun 12, 2024, 10:00 PM IST
    • ಡಿ ಗ್ಯಾಂಗ್ ಹತ್ಯೆ ಪ್ರಕರಣದ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ..
    • ಆರೋಪಿಗಳನ್ನು ಸ್ಥಳ ಮಹಜರಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆದೊಯ್ದಿದ್ದರು.
    • ಈ ವೇಳೆ ನಟ ದರ್ಶನ್‌ ಪೊಲೀಸರಿಗೆ ಬೇಡಿಕೆಯೊಂದನ್ನು ಇಟ್ಟಿದ್ದರು..
ನನಗೆ ಅದು ಬೇಕೇ ಬೇಕು.. ಅಂತ ಪೊಲೀಸರ ಮುಂದೆ ಅಂಗಲಾಚಿದ ದರ್ಶನ್‌..! ಡೆವಿಲ್‌ ಕೇಳಿದ್ದಾದ್ರೂ ಏನು..? title=

Darshan murder case : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಮೂವರನ್ನ ಸ್ಥಳ ಮಹಜರಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆದೊಯ್ದು ತಪಾಸಣೆ ನಡೆಸಿದರು. ಈ ವೇಳೆ ದರ್ಶನ್‌ ತಮಗೆ ಸಿಗರೇಟ್‌ ಬೇಕು ಕೊಡಿ ಎಂದು ಪೊಲೀಸರನ್ನ ಕೇಳಿಕೊಂಡಿದ್ದಾನೆ..

ಹೌದು.. ಆರೋಪಿಗಳಾದ ಕಾರ್ತಿಕ್, ನಿಖಿಲ್ ಹಾಗೂ ರಾಘವೇಂದ್ರ ಎಂಬುವರನ್ನು ಇಂದು ಮಧ್ಯಾಹ್ನ ಸುಮನಹಳ್ಳಿ ಬಿಡ್ಜ್ ಬಳಿ ಪೊಲೀಸರು ವಾಹನದಲ್ಲಿ ಕರೆತಂದರು. ಈ ವೇಳೆ ರೇಣುಕಾಸ್ವಾಮಿಯ ಶವ ಬಿಸಾಕಿದ ಜಾಗವನ್ನ ಆರೋಪಿಗಳನ್ನ ತೋರಿಸಿದರು. ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಸಂಗ್ರಹಿಸಿ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದರು.

ಇದನ್ನೂ ಓದಿ: ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..! ʼಡಿ ಗ್ಯಾಂಗ್‌ʼ ಕ್ರೌರ್ಯ ಬಟಾಬಯಲು

ಇನ್ನೂ ಇದೇ ವೇಳೆ ಪೊಲೀಸರ ಮುಂದೆ ದರ್ಶನ್, ನನಗೆ ಸಿಗರೇಟ್ ಸೇದಬೇಕು ಎನ್ನಿಸುತ್ತಿದೆ. ದಯವಿಟ್ಟು ಸಿಗರೇಟ್ ಕೊಡಿ ಎಂದು ಅಂಗಲಾಚಿದ್ದಾನೆ. ಆದರೆ ದರ್ಶನ್ ಮನವಿಗೆ ಪೊಲೀಸರು ಕ್ಯಾರೆ ಎಂದಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿ ಮುಂದಿನ ಹಂತಕ್ಕೆ ತನಿಖೆಯನ್ನು ತೆಗೆದುಕೊಂಡು ಹೋಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News