ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..! ʼಡಿ ಗ್ಯಾಂಗ್‌ʼ ಕ್ರೌರ್ಯ ಬಟಾಬಯಲು

Darshan case : ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಏನ್ ಮೇಸೆಜ್ ಮಾಡಿದ್ದ. ಕೊಲೆಗೆ ಪ್ರಮುಖ ಕಾರಣ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಹಾಗಾದ್ರೆ ದರ್ಶನ್ ಗ್ಯಾಂಗ್ ಹೇಗಿತ್ತು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Written by - VISHWANATH HARIHARA | Edited by - Krishna N K | Last Updated : Jun 12, 2024, 09:35 PM IST
    • ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ
    • ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
    • ದರ್ಶನ್ ಗ್ಯಾಂಗ್ ಹೇಗಿತ್ತು ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಗುಪ್ತಾಂಗಕ್ಕೆ ಹೊಡೆದು, ಗೋಡೆಗೆ ಮುಖ ಜಜ್ಜಿ ರೇಣುಕಾಸ್ವಾಮಿ ಹತ್ಯೆ..! ʼಡಿ ಗ್ಯಾಂಗ್‌ʼ ಕ್ರೌರ್ಯ ಬಟಾಬಯಲು title=

Darshan murder case : ಇದು ನಟ ದರ್ಶನ್ ಅಂಡ್ ಗ್ಯಾಂಗ್‌ನ ಕರಾಳ ಮುಖದ ಅನಾವರಣ ಕಥೆ. ಫೆಬ್ರವರಿ 27 ರಿಂದ ಪವಿತ್ರಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಶುರು ಮಾಡಿದ್ದ ರೇಣುಕಾಸ್ವಾಮಿ, ಪವಿತ್ರಾ ಗೌಡ ಅಕೌಂಟ್ ಬ್ಲಾಕ್ ಮಾಡಿದ್ರು ಹೊಸ ಅಕೌಂಟ್ ಓಪನ್ ಮಾಡಿ ಅಶ್ಲೀಲವಾಗಿ ಮಸೇಜ್ ಕಳಿಸಿದ್ದ. ‌ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳಿಸಿ ದರ್ಶನ್ ಗಿಂತ ನಾನೇನು ಕಡಿಮೆ ಬಾ ಅಂತಾ ಕರೆದಿದ್ನಂತೆ ರೇಣುಕಾಸ್ವಾಮಿ.

ರೇಣುಕಾಸ್ವಾಮಿ ವಿಕೃತಿಯನ್ನ ಪವಿತ್ರಾ ಗೌಡ ಮೊದಲಿಗೆ ದರ್ಶನ್‌ಗೆ ಹೇಳದೆ ಪವನ್‌ಗೆ ಹೇಳಿದ್ದಾಳೆ. ಯಾವುದೇ ಕಾರಣಕ್ಕೂ ದರ್ಶನ್‌ಗೆ ಹೇಳಬೇಡ ಅವನು ಏನಾದ್ರು ಮಾಡಿಬಿಡ್ತಾನೆ ಎಂದಿದ್ಲಂತೆ ಪವಿತ್ರಗೌಡ. 
ಮನೆ ಕೆಲಸದಾತ ಪವನ್ ವಿಚಾರವನ್ನ ದರ್ಶನ್ ಗಮನಕ್ಕೆ ತಂದುಬಿಟ್ಟಿದ್ದ. ಆಮೇಲೆ ನಡೆದದ್ದೇ ಕಿಡ್ನ್ಯಾಪ್ ಪ್ಲ್ಯಾನ್, ಆ ಬಳಿಕ ಕೊಲೆ, ಡೆಡ್ ಬಾಡಿ ವಿಲೇವಾರಿ. ಮರ್ಮಾಂಗ ಫೋಟೋ ಕಳಿಸಿದ್ದಕ್ಕೆ ಆದೇ ಜಾಗಕ್ಕೆ ಟಾರ್ಗೇಟ್ ಮಾಡಿ ರಾಡ್ ನಿಂದ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ.

ಇದನ್ನೂ ಓದಿ:ಬಹುನಿರೀಕ್ಷಿತ ಕೋಟಿ ಸಿನಿಮಾದ 'ಮನ ಮನ' ಲಿರಿಕಲ್ ವಿಡಿಯೋ ಬಿಡುಗಡೆ: ಭರ್ಜರಿ ಪ್ರತಿಕ್ರಿಯೆ

ನಟ ದರ್ಶನ್ ಮೇಲಿನ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ‌ ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿದ್ದ ದರ್ಶನ್ ಅಭಿಮಾನಿ ರಘು ರೇಣುಕಾಸ್ವಾಮಿಯನ್ನ ಸೀದಾ ಕರ್ಕೊಂಡ್ ಬಂದು ಆರ್ ಆರ್ ನಗರದ ಶೆಡ್ ಗೆ ಬಿಟ್ಟಿದ್ದಾನೆ. ಶೆಡ್ ಗೆ ರೇಣುಕಾಸ್ವಾಮಿ ಕರ್ಕೊಂಡ್ ಬರ್ತಿದ್ದಂತೆ ಪವಿತ್ರಾಗೌಡ ಮತ್ತು ದರ್ಶನ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. ಕೊತ ಕೊತ ಕುದಿಯುತ್ತಿದ್ದ ದರ್ಶನ್ ಕೂಡ ಮನಸೋಇಚ್ಚೆ ಹಲ್ಲೆ ನಡೆಸಿ ಊಟಕ್ಕೆ ಹಣ ಕೊಟ್ಟು ಮತ್ತೆ ಈ ರೀತಿ ಮೇಸೆಜ್ ಬಂದ್ರೆ ಒಂದು ಗತೀ ಕಾಣಿಸ್ತಿನಿ. 

ಊಟ ಮಾಡ್ಕೋಂಡು ಊರಿಗೆ ಹೋಗ್ತಿರ್ಬೇಕು ಅಂತ ಆವಾಜ್ ಬಿಟ್ಟು ಪವಿತ್ರಾ ಜೊತೆ ದರ್ಶನ ಶೆಡ್ ನಿಂದ ಹೋಗಿದ್ರಂತೆ. ಇದಾದ ಮೇಲೆ ದರ್ಶನ ಶಿಷ್ಯರಾದ ಪವನ್, ರಘು, ಕಾರ್ತಿಲ್ ಮತ್ತಿತರು ಸೇರಿ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕಾಲು ಅಗಲಿಸಿ ಖಾಸಗಿ ಅಂಗಕ್ಕೆ ರಾಡ್ ನಿಂದ ಹಲ್ಲೆ ನಡೆಸಿ ನೆಲ ಹಾಗೂ ಗೋಡೆಗೆ ಮುಖ ಗುದ್ದಿಸಿದ್ದಾರ‌ಂತೆ. ಈ ವೇಳೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆಂದು ಆರೋಪಿಗಳು ಪೊಲೀಸ್ರ ಮುಂದೆ ಹೇಳಿದ್ದಾರೆ. ಇನ್ನೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಆರೋಪಿಗಳು ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ. ಇನ್ನೂ ಎಲ್ಲಾ 13 ಆರೋಪಿಗಳ ಮೊಬೈಲನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್ ಜೀಪ್‌ನಲ್ಲಿ ಸಿಕ್ಕಿದೆ ವಿಸ್ಕಿ ಬಾಟಲ್..! ಶವ ಹೊತ್ತಯ್ದ ಸ್ಕಾರ್ಪಿಯೋನಲ್ಲಿತ್ತು ವ್ಯಾನಿಟಿ ಬ್ಯಾಗ್

ಆದ್ರೆ ನಿಜಕ್ಕೂ ಇದೇ ರೀತಿ ನಡೆದಿದ್ಯಾ ಇಲ್ಲ ದರ್ಶನ್ ಹಾಗೂ ಪವಿತ್ರಾ ಗೌಡ ಬಚಾವ್ ಮಾಡಲು ಉಳಿದ ಆರೋಪಿಗಳು ಈರೀತಿಯ ಕತೆ ಕಟ್ಟುತ್ತಿದ್ದಾರಾ..? ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಅದೆನೇ ಇರ್ಲಿ, ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ರೆ ಆತನ ವಿರುದ್ದ ದೂರು ದಾಖಲಿಸಬಹುದಿತ್ತು. ಆದರೆ ಈ ರೀತಿ ಅಮಾನುಷವಾಗಿ ಹೊಡೆದು ಕೊಂದು ಡಿ ಅಂಡ್ ಗ್ಯಾಂಗ್ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News